ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನುಡಿ ನಮನ ಕಾರ್ಯಕ್ರಮಕ್ಕೆ ಹೈದರಾಬಾದ್ನಿಂದ ಆಗಮಿಸಿದ್ದ ತೆಲುಗು ನಟ ಶ್ರೀಕಾಂತ್ ಮಾತಾಡಿದರು. ಈ ಸಂಬಂಧ ಮಾತಾಡಿದ ನಟ ಶ್ರೀಕಾಂತ್, ನಾನು ಜೇಮ್ಸ್ನಲ್ಲಿ ಪುನೀತ್ ಜತೆ ನಟಿಸಿದ್ದೆ. ಸುಮಾರು 40 ದಿನ ಜೊತೆಯಲ್ಲೇ ಟ್ರಾವೆಲ್ ಮಾಡಿದ್ದೆ. ಅದುವೇ ಅವರ ಕೊನೆ ಚಿತ್ರ ಆಗುತ್ತೆ ಎಂದುಕೊಂಡಿರಲಿಲ್ಲ ಎಂದು ಕಂಬನಿ ಮಿಡಿದರು.
ಪುನೀತ್ ನೆನಪು ಇನ್ನೂ ಕಾಡುತ್ತಲೇ ಇದೆ. ಅಪ್ಪು ಇಲ್ಲ ಅನ್ನೋದನ್ನ ನಂಬೋಕೆ ಆಗ್ತಾ ಇಲ್ಲ. ಅಪ್ಪುರನ್ನ ಭಗವಂತ ಬೇಗ ಕರೆಸಿಕೊಂಡಿದ್ದಾನೆ. ಭಗವಂತ ಅವರ ಕುಟುಂಬಕ್ಕೆ ಅವರು ಇಲ್ಲದ ನೋವನ್ನ ತಡೆಯುವ ಶಕ್ತಿ ನೀಡಲಿ ಎಂದರು.