ಬಾಗಲಕೋಟೆ: ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಸಮಾಧಿ ದರ್ಶನ ಪಡೆಯಲು ಅಭಿಮಾನಿಯೊಬ್ಬರು ಬರೋಬ್ಬರಿ 600 ಕಿಮೀ ಸೈಕಲ್ ಯಾತ್ರೆ ಆರಂಭಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಬಾದರದಿನ್ನಿ ಗ್ರಾಮದ ಅಪ್ಪು ಅಭಿಮಾನಿ ರಾಘವೇಂದ್ರ ಗಾಣಿಗೇರ ಈ ಯಾತ್ರೆ ಆರಂಭಿಸಿದ್ದಾರೆ. ಬಾದರದಿನ್ನಿ ಗ್ರಾಮದಿಂದ ಬೆಂಗಳೂರಿಗೆ ಬರೋಬ್ಬರಿ 600 ಕಿಮೀ ಅಂತರವಿದ್ದು ಅಪ್ಪು ಮೇಲಿನ ಅಭಿಮಾನಕ್ಕಾಗಿ ಸೈಕಲ್ ಮೂಲಕವೇ ಹೊರಟಿದ್ದಾರೆ.
ಇಂದು ಬೆಳಗ್ಗೆ ಹುನಗುಂದದಿಂದ ಯಾತ್ರೆ ಆರಂಭಿಸಿದ ಅಭಿಮಾನಿ ಸೈಕಲ್ನ್ನು ಮಧುವಣಗಿತ್ತಿಯಂತೆ ಶೃಂಗರಿಸಿದ್ದಾರೆ. ಸೈಕಲ್ ಹಿಂದೆ ಮುಂದೆ ಅಪ್ಪು ಭಾವಚಿತ್ರ ಇರಿಸಿ ಕನ್ನಡ ಧ್ವಜ ಕಟ್ಟಿಕೊಂಡು ಅಗಲಿದ ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಲು ಪ್ರಯಾಣ ಆರಂಭಿಸಿದ್ದಾರೆ.
ಈ ವೇಳೆ ನ್ಯೂಸ್ಫಸ್ಟ್ನ ಜೊತೆ ಮಾತನಾಡಿದ ಅಭಿಮಾನಿ ಅವರು ಮೃತಪಟ್ಟ ದಿನವೇ ಹೋಗಬೇಕೆಂದುಕೊಂಡಿದ್ದೆ ಆದರೆ ಆರೋಗ್ಯ ಸರಿಯಿರಲಿಲ್ಲ. ಅದಕ್ಕೆ ಈಗ ಸೈಕಲ್ ಯಾತ್ರೆ ಹೊರಟಿದ್ದೇನೆ ಎಂದಿದ್ದಾನೆ. ಇನ್ನು ಹುನಗುಂದ,ಇ ಳಕಲ್, ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿಗೆ ಬಂದು ಸೇರಲಿದ್ದಾರೆ.