ಪುನೀತ್ 11ನೇ ದಿನದ ಕಾರ್ಯ; ಸಂಗಮದಲ್ಲಿ ಅಪರ ಕರ್ಮ ನೆರವೇರಿಸಿದ ವಿನೋದ್ ರಾಜ್‍


ಮಂಡ್ಯ: ಇಂದು ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್​ರವರ 11ನೇ ದಿನದ ಪುಣ್ಯ ಸ್ಮರಣೆ.. ಈ ಹಿನ್ನೆಲೆಯಲ್ಲಿ ನಟ ವಿನೋದ್​​ ರಾಜ್​​​​, ಶ್ರೀರಂಗಪಟ್ಟಣದ ಗಂಜಾಂ ಬಳಿ ಇರುವ ಸಂಗಮದಲ್ಲಿ ಅಪರ ಕರ್ಮ ಕಾರ್ಯ ನೆರವೇರಿಸಿದ್ದಾರೆ.

ಪುನೀತ್ ನಿಧನದ 11ನೇ ದಿನದ ಪುಣ್ಯತಿಥಿ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಗಂಜಾಂ ಬಳಿ ಇರುವ ಸಂಗಮಕ್ಕೆ ಹಿರಿಯ ನಟಿ ಲೀಲಾವತಿ, ನಟ ವಿನೋದ್​ ರಾಜ್ ಆಗಮಿಸಿದ್ದರು. ಸಂಗಮದ ಕಾವೇರಿ ನದಿ ತೀರಕ್ಕೆ ಆಗಮಿಸಿ ನದಿ ತೀರದಲ್ಲಿ ಮೃತ ಪುನೀತ್ ರಾಜ್​​ಕುಮಾರ್​​​ಗೆ ವೈದಿಕ ಪೂಜಾ ಕೈಂಕರ್ಯ ನೆರವೇರಿಸಿ ತರ್ಪಣ ಅರ್ಪಿಸಿದರು. ಅಲ್ಲದೇ ಇದಕ್ಕೂ ಮುನ್ನ ಸ್ಥಳದಲ್ಲಿ ಆಶ್ಲೇಷ ಬಲಿ ಹಾಗೂ ನಾರಾಯಣ ಬಲಿ ಪೂಜೆ ನಡೆಸಿ ಪುನೀತ್ ಆತ್ಮಕ್ಕೆ ಶಾಂತಿ ಕೋರಿದರು. ಈ ವೇಳೆ ಲೀಲಾವತಿ ಅವರ ಕುಟುಂಬದ ಸಮೀಪದ ಬಂಧುಗಳು ಸ್ಥಳದಲ್ಲಿ ಹಾಜರಿದ್ದರು.

News First Live Kannada


Leave a Reply

Your email address will not be published. Required fields are marked *