ಪೆಟ್ರೋಲ್​ ಬಂಕ್​ಗೆ ಬಂದ ಖದೀಮ; ಲಾಂಗ್ ಹಿಡಿದು ಕ್ಯಾಶ್​ ಬ್ಯಾಗ್​ ಕದಿಯಲು ಯತ್ನಿಸಿದ


ಬೆಂಗಳೂರು: ಪೆಟ್ರೋಲ್​ ಬಂಕ್​ಗೆ ನುಗ್ಗಿ ಹಾಡು ಹಗಲೇ ದರೋಡೆಗೆ ಯತ್ನಿಸಿದ ಘಟನೆ ನಗರದ ಮೈಸೂರು ರಸ್ತೆಯಲ್ಲಿನ ರಚನ ಪೆಟ್ರೋಲ್ ಬಂಕ್​ನಲ್ಲಿ ನಡೆದಿದೆ.

ಅಡ್ರೆಸ್​ ಕೇಳೋ ನೆಪದಲ್ಲಿ ಬಂಕ್​ಗೆ ಆಗಮಿಸಿದ ದುಷ್ಕರ್ಮಿಗಳು ಬಂಕ್​ನಲ್ಲಿ ಜನ ಖಾಲಿಯಾಗುವವರೆಗೆ ಕಾಲಹರಣ ಮಾಡಿದ್ದಾರೆ. ಜನ ಖಾಲಿಯಾಗುತ್ತದ್ದಂತೆ ಕ್ಯಾಶೀಯರ್​ ಮೇಳೆ ಏಕಾಏಕಿ ದಾಳಿ ನಡೆಸಿ ಕ್ಯಾಶ್​ ಬ್ಯಾಗ್​ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ  ಸಿಬ್ಬಂದಿ ಬ್ಯಾಗ್​ ನೀಡೆದೆ ಇದ್ದಾಗ ಆತನ ಮೇಲೆ ಲಾಂಗ್​ ಬೀಸಿ ಹಲ್ಲೆ ನಡೆಸಿದ್ದಾರೆ.

ಲಾಂಗ್​ನಿಂದ ಹೊಡೆದರು ಸಿಬ್ಬಂದಿ ಮಾತ್ರ ಬ್ಯಾಗ್​ ನೀಡದೇ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆಗ ರಸ್ತೆಗೆ ಬಿದ್ದ ಕ್ಯಾಶಿಯರ್​ ಕಲ್ಲಿನಿಂದ ಹೊಡೆದಾಗ ದುಷ್ಕರ್ಮಿಗಳು ಬ್ಯಾಗ್​ ಬಿಟ್ಟು ಪರಾರಿಯಾಗಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲು.

News First Live Kannada


Leave a Reply

Your email address will not be published. Required fields are marked *