ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅವರ ಅಭಿಮಾನಿಯೊಬ್ಬ ಡೆತ್ ನೋಟ್ ಬರೆದಿದ್ದು ತನ್ನ ಸಾವಿಗೆ ‘ರಾಧೆ ಶ್ಯಾಮ್’ ಚಿತ್ರತಂಡವೇ ಕಾರಣವಾಗುತ್ತದೇ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ.
ಹೌದು ‘ರಾಧೆ ಶ್ಯಾಮ್’ ಪ್ರಭಾಸ್ ಮತ್ತು ಪೂಜ ಹೆಗಡೆ ನಟಿಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯನ್ ಸಿನಿಮಾ. ನಿರ್ದೇಶಕ ರಾಧಾ ಕೃಷ್ಣ ಈ ಚಿತ್ರವನ್ನು ನಿರ್ದೇಶಿಸಿದ್ದು, ಯುವಿ ಕ್ರಿಯೇಷನ್ಸ್ ಬ್ಯಾನರ್ ನಡಿ ‘ರಾಧೆ ಶ್ಯಾಮ್’ ಚಿತ್ರ ಮೂಡಿಬಂದಿದೆ. ಇನ್ನು ಚಿತ್ರತಂಡ ಚಿತ್ರದ ರಿಲೀಸ್ ದಿನಾಂಕವನ್ನು ಸಹ ಈಗಾಗಲೇ ಆನೌನ್ಸ್ ಮಾಡಿದ್ದು ಮುಂದಿನ ವರ್ಷ ಜನವರಿ 14 ನೇ ತಾರೀಖು ‘ರಾಧೆ ಶ್ಯಾಮ್’ ಸಿನಿಮಾ ರಿಲೀಸ್ ಆಗಲಿದೆ.
ಆದರೆ ಪ್ರಭಾಸ್ ಅಭಿಮಾನಿಯೊಬ್ಬ ‘ರಾಧೆ ಶ್ಯಾಮ್’ ಚಿತ್ರತಂಡ ಚಿತ್ರದ ಬಗ್ಗೆ ಯಾವುದೇ ಅಪ್ಡೇಟ್ಸ್ ನೀಡುತ್ತಿಲ್ಲ ಎಂಬ ಕಾರಣಕ್ಕೆ ಯುವಿ ಕ್ರಿಯೇಷನ್ಸ್ ತಂಡ ಮತ್ತು ನಿರ್ದೇಶಕ ರಾಧಾ ಕೃಷ್ಣ ವಿರುದ್ಧ ಡೆತ್ನೋಟ್ ಬರೆದಿದ್ದಾನೆ.
ನನ್ನ ಜೀವನದಲ್ಲಿ ಇಲ್ಲಿಯವರೆಗೆ ನಾನು ಯಾವುದೇ ಪತ್ರವನ್ನು ಬರೆದಿಲ್ಲ ಆದರೆ ಮೊದಲ ಬಾರಿಗೆ ನನ್ನ ನೆಚ್ಚಿನ ಹೀರೋ ಪ್ರಭಾಸ್ ಚಿತ್ರಕ್ಕಾಗಿ ಡೆತ್ನೋಟ್ ಬರೆಯುತ್ತಿದ್ದೇನೆ. ನಾನು ಬಹಳ ದಿನಗಳಿಂದ ಪ್ರಭಾಸ್ ಅವರ ‘ರಾಧೆ ಶ್ಯಾಮ್’ ಚಿತ್ರದ ಅಪ್ಡೇಟ್ಸ್ಗಾಗಿ ಕಾಯುತ್ತಿದ್ದೇನೆ. ಆದರೆ ಚಿತ್ರತಂಡ ಮಾತ್ರ ಪ್ರಭಾಸ್ ಅಭಿಮಾನಿಗಳ ಮನವಿಗೆ ಸ್ಪಂದಿದುತ್ತಿಲ್ಲ. ನನ್ನ ಸಾವನ್ನು ನೋಡಿದ ಮೇಲಾದರೂ ಚಿತ್ರತಂಡ ಚಿತ್ರದ ಅಪ್ಡೇಟ್ ನೀಡುತ್ತದೆ ಎಂದು ಭಾವಿಸುತ್ತೇನೆ ನನ್ನ ಸಾವಿಗೆ ನಿರ್ದೇಶಕ ರಾಧಾ ಕೃಷ್ಣ ಮತ್ತು ಯುವಿ ಕ್ರಿಯೇಷನ್ಸ್ ತಂಡವೇ ಕಾರಣವಾಗುತ್ತದೇ ಎಂದು ಉಲ್ಲೇಖಿಸಿ ಡೆತ್ನೋಟ್ ಬರೆದಿದ್ದಾನೆ.
ಸದ್ಯ ಪ್ರಭಾಸ್ ಅಭಿಮಾನಿ ಬರೆದಿರುವ ಈ ಡೆತ್ನೋಟ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.