ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮನಸಾರೆ ಸೀರಿಯಲ್ ಮೊನ್ನೆ ಮೊನ್ನೆಯಷ್ಟೇ 400 ಎಪಿಸೋಡ್ಗಳನ್ನ ಕಂಪ್ಲೀಟ್ ಮಾಡಿದ ಸಂಭ್ರಮದಲ್ಲಿತ್ತು. ಆದ್ರೇ ಈಗ ವೀಕ್ಷಕರಿಗೆ ಶಾಕ್ ಒಂದನ್ನ ನೀಡಿದ್ದು, ವೈಂಡಪ್ ಆಗಿದೆ.
ಮನಸಾರೆ ಧಾರಾವಾಹಿ ಪ್ರಾರ್ಥನಾ ಎಂಬ ಹುಡುಗಿಯ ಸುತ್ತ ಹೆಣೆಯುವ ಕತೆಯಾಗಿದ್ದು.. ತಂದೆಗೆ ಇವಳನ್ನ ಕಂಡ್ರೆ ಆಗಲ್ಲಾ.. ಆದ್ರೆ ಪ್ರಾರ್ಥನಾಗೆ ತಂದೆ ಅಂದ್ರೆ ಜಗತ್ತು.. ತಂದೆಯ ಪ್ರೀತಿಗಳಿಸಲು ಪ್ರಾರ್ಥನಾ ಹರಸಾಹಸ ಪಡ್ತಿರ್ತಾಳೆ. ಇನ್ನೊಂದು ಕಡೆ ತಂದೆಗೆ ಚಿಕ್ಕ ಮಗಳು ಪಾವನಿ ಅಂದ್ರೇ ಪ್ರಾಣ. ಈ ರೀತಿಯಾಗಿ ಸಾಗುತ್ತಿದ್ದ ಕತೆಯಲ್ಲಿ ಸದ್ಯ ಪ್ರಾರ್ಥನಾಳನ್ನ ತಂಂದೆ ಉಪ್ಪಿಕೊಂಡು ಅಪ್ಪಿಕೊಂಡಿದ್ರು.
ಹೀಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ವೀಕ್ಷಕರನ್ನ ರಂಜಿಸ್ತಾಯಿದ್ದ ಸೀರಿಯಲ್ನ ನಾಯಕಿ ಪ್ರಾರ್ಥನಾಳ ಪಾತ್ರಕ್ಕೆ ಪ್ರಿಯಾಂಕಾ ಚಿಂಚೊಳ್ಳಿ ಬಣ್ಣ ಹಚ್ಚಿದ್ದರೇ, ನಾಯಕನ ಪಾತ್ರಕ್ಕೆ ಸುಜಯ್ ಹೆಗ್ಗಡೆ ನಿರ್ವಹಿಸುತ್ತಿದ್ದರು.
ಹರೀಶ್, ನಟಿ ಸ್ವಾತಿ, ಯಮುನಾ ಶ್ರೀನಿಧಿ, ಚಿತ್ಕಲಾ ಬಿರಾದರ್, ಪ್ರಕೃತಿ ಪ್ರಸಾದ, ತಾರಾ ದಂಪತಿಯಾದ ರಮೇಶ್ ಪಂಡಿತ್-ಸುನೇತ್ರಾ…ಹೀಗೆ ದೊಡ್ಡ ತಾರಾ ಬಳಗವನ್ನ ಹೊಂದಿದ್ದ ಮನಸಾರೆ ಸೀರಿಯಲ್ ಈಗಾಲೇ ತನ್ನ ಶೂಟಿಂಗ್ ಕಂಪ್ಲೀಟ್ ಮಾಡಿದ್ದು, ಮೂಲಗಳ ಪ್ರಕಾರ ಕ್ಲೈಮ್ಯಾಕ್ಸ್ನ ಸಂಚಿಕೆ ನವಂಬರ್ 13 ರಂದು ಅಂದ್ರೇ ಇಂದು ಪ್ರಸಾರವಾಗಲಿದೆ.
ಅಷ್ಟಕ್ಕೂ ಸೀರಿಯಲ್ ವೈಂಡಪ್ ಆಗಲು ಕಾರಣ ಏನೂ ಅಂತಿರಾ..? ಈ ಹಿಂದೆನೇ ನಾವೂ ಸಾಕಷ್ಟು ಬಾರಿ ಹೇಳಿದಂತೆ ಕತೆ ಎಷ್ಟೇ ಚನ್ನಾಗಿ ಮೂಡಿಬರುತ್ತಿದ್ದರು, ಕೊನೆಯದಾಗಿ ಟಿಆರ್ಪಿನೇ ಮುಖ್ಯವಾಗುವುದು. ಕಿರುತೆರೆಯಲ್ಲಿ ನಂಬರ್ಗಳ ಲೆಕ್ಕಾಚಾರವೇ ಫೈನಲ್. ಈಗ ಅದೇ ಲೆಕ್ಕಾಚಾರದಲ್ಲಿ ಮನಸಾರೆ ಸೀರಿಯಲ್ ಕೂಡ ವೈಂಡಪ್ ಆಗ್ತಾಯಿದೆ.