ಶ್ರೀಲಂಕಾ ವಿರುದ್ದದ ಪಂದ್ಯದ ಮೊದಲ ಪಂದ್ಯದಲ್ಲಿ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅಜೇಯ 175 ರನ್ ಬಾರಿಸಿ ಅಬ್ಬರಿಸಿದರು. ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುತ್ತಾ 170 ರನ್ ಬಾರಿಸಿದ್ದೇ ತಡ ಇನ್ನೇನು ಡಬಲ್ ಸೆಂಚೂರಿ ಪಕ್ಕಾ ಆಗಿತ್ತು. ಆದರೆ, ರವೀಂದ್ರ ಜಡೇಜಾ 175 ರನ್ ಗಳಿಸಿದ್ದಾಗ ನಾಯಕ ರೋಹಿತ್ ಶರ್ಮಾ ಡಿಕ್ಲೇರ್ ಘೋಷಿಸಿದರು. ಇದು ಜಡೇಜಾ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿತ್ತು.
ಈಗ ಈ ಬಗ್ಗೆ ಮಾತಾಡಿದ ರವೀಂದ್ರ ಜಡೇಜಾ ಡಿಕ್ಲೇರ್ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದು ನಾನೇ ಎಂದಿದ್ದಾರೆ. ನಾನು ಬ್ಯಾಟಿಂಗ್ ಮಾಡುವಾಗ ಚೆಂಡು ಬೌನ್ಸ್ ಆಗುತ್ತಿತ್ತು. ಶ್ರೀಲಂಕಾ ಆಟಗಾರರು ಸುಸ್ತಾಗಿದ್ದರು. ಹೀಗಾಗಿ ಡಿಕ್ಲೇರ್ ತೆಗೆದುಕೊಳ್ಳಲು ಸರಿಯಾದ ಸಮಯ ಎಂದು ನಾನೇ ಹೇಳಿದೆ ಎಂದರು.
ಈ ಮುನ್ನ ಡಿಕ್ಲೇರ್ ನೀಡಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್ ದ್ರಾವಿಡ್ ವಿರುದ್ಧ ಜಡೇಜಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಮಾಡಿದ್ದರು.