ಬೆಂಗಳೂರು: ಪ್ರಯಾಣಿಕರೊಬ್ಬರು ಬಸ್ ಸ್ಟ್ಯಾಂಡ್ಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಚಿನ್ನಾಭರಣ ಮತ್ತು ಹಣವಿದ್ದ ಬ್ಯಾಗ್ನ್ನು ಬಿಎಂಟಿಸಿ ಅಧಿಕಾರಿಗಳು ವಾಪಸ್ ನೀಡಿ ಮಾನವೀಯತೆ ಮೆರೆದಿದ್ದಾರೆ.
ರಾಜೇಶ್ವರಿ ಎಂಬ ಪ್ರಯಾಣಿಕರೊಬ್ಬರು ಲಕ್ಷಾಂತರ ರುಪಾಯಿ ಬೆಲೆಬಾಳುವ ಚಿನ್ನ, ಹಣ ಹಾಗೂ ಮೊಬೈಲ್ ಪೋನ್ ಇದ್ದ ಬ್ಯಾಗ್ನ್ನು ಹೆಬ್ಬಾಳದ ಎಸ್ಟಿಮ್ ಮಾಲ್ ಬಳಿಯಿರುವ ಬಿಎಂಟಿಸಿ ಬಸ್ ಸ್ಟ್ಯಾಂಡ್ನಲ್ಲಿ ಬಿಟ್ಟು ಹೋಗಿದ್ರು. ಅದೃಷ್ಟವಶಾತ್ ಅದು ಸ್ಥಳದಲ್ಲಿದ್ದ ಬಿಎಂಟಿಸಿಯ ಟ್ರಾಫಿಕ್ ಕಂಟ್ರೋಲರ್ ಗಳಾದ ಪ್ರಕಾಶ್ ಮತ್ತು ಶಮಿ ಶಾಬ್ ಅವರ ಕೈಗೆ ಸಿಕ್ಕಿದೆ.
ಬ್ಯಾಗ್ ಕಳೆದುಕೊಂಡವರು ಆ ಬಳಿಕ ತಮ್ಮ ಪೋನ್ಗೆ ಕರೆ ಮಾಡಿ ವಿಚಾರಸಿದಾಗ ಹೆಬ್ಬಾಳ ಪೊಲೀಸ್ ಸ್ಟೇಷನ್ ಬರುವಂತೆ ಹೇಳಲಾಗಿದೆ. ಠಾಣೆಗೆ ಬಂದ ನಂತರ ಪರಿಶೀಲನೆ ಕೈಗೊಂಡು ಇವರೇ ಬ್ಯಾಗ್ನ ಮಾಲೀಕರು ಎಂದು ಖಾತ್ರಿ ಆದ ಬಳಿಕ ವಾಪಸ್ ನೀಡಿದ್ದು, ಬ್ಯಾಗ್ ಪಡೆದುಕೊಂಡ ಮಹಿಳೆ ನಿಟ್ಟುಸಿರು ಬಿಟ್ಟಿದ್ದಾರೆ. ಮೂಲಗಳ ಪ್ರಕಾರ 1,000 ಕ್ಯಾಶ್, ಏಳು ಗೋಲ್ಡ್ ರಿಂಗ್, ಎರಡು ಗೋಲ್ಡ್ ಚೈನ್, ಮಾಂಗಲ್ಯ ಸರ ಒಂದು, ಕಿವಿ ಓಲೆ ಎರಡು ಹಾಗೂ ಒಂದು ಮೊಬೈಲ್ ಪೋನ್ ಬ್ಯಾಗ್ಲ್ಲಿ ಇತ್ತು. ಇದರ ಒಟ್ಟು ಮೌಲ್ಯ ಆರು ಲಕ್ಷದ ಮೂವತ್ತೊಂದು ಸಾವಿರದ ಐನೂರು ರೂಪಾಯಿಗಳು ಅಂತ ಅಂದಾಜಿಸಲಾಗಿದೆ.