ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಗೆ ಬಹುಕಾಲದಿಂದ ಕಾಡುತ್ತಿರುವ ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಳ್ಳೋಕೆ ಸಾಧ್ಯವಾಗಿಲ್ಲ.. ಆದೇ ಸಮಸ್ಯೆ ಇದೀಗ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಕಪ್ ಗೆಲ್ಲೋ ಕನಸಿಗೂ ಕೊಳ್ಳಿ ಇಟ್ಟಿದೆ. ಹಾಗಾದ್ರೆ ಆ ಸಮಸ್ಯೆ ಯಾವುದು..?
ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಸ್ ಪ್ರವೇಶಕ್ಕೆ ಪವಾಡದ ನಿರೀಕ್ಷೆಯಲ್ಲಿದೆ. ಟೂರ್ನಿಗೂ ಮುನ್ನ ಚಾಂಪಿಯನ್ ಪಟ್ಟಕ್ಕೇರಲಿದೆ ಎಂದೇ ಅನಿಸಿಕೊಂಡಿದ್ದ ತಂಡದ ಹೀನಾಯ ಸ್ಥಿತಿಗೆ ತಲುಪಲು ಮೊದಲ ಎರಡು ಪಂದ್ಯಗಳೇ ಕಾರಣ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಆ ಸೋಲಿಗೆ ಕಾರಣ ಏನು ಅನ್ನೋ ಪ್ರಶ್ನೆಗೆ ಹಲವು ಉತ್ತರಗಳಿವೆ. ಅದರ ಜೊತೆಗೆ ಈ ಒಂದು ವಿಚಾರದಲ್ಲಿ ಬಿಸಿಸಿಐ ಎಡವಿರೋದೂ ಕೂಡ ಸ್ಪಷ್ಟವಾಗಿ ಕಾಣ್ತಿದೆ.
ತಂಡವನ್ನ ಕಾಡ್ತಿರೋ ಬಹುಕಾಲದ ಸಮಸ್ಯೆಗೆ ಇನ್ನೂ ಸಿಕ್ಕಿಲ್ಲ ಪರಿಹಾರ..!
ವಿಶ್ವಕಪ್ನಲ್ಲೂ ಹಿನ್ನಡೆಗೆ ಕಾರಣವಾದ ಲೆಫ್ಟ್ ಆರ್ಮ್ ಪೇಸರ್ ಕೊರತೆ..!
ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೋಲಿಗೆ ಇದೂ ಕೂಡ ಪ್ರಮುಖ ಕಾರಣ. ಮೊದಲ ಪಂದ್ಯದಲ್ಲಿ ಶಾಹೀನ್ ಶಾ ಅಫ್ರಿದಿ, 2ನೇ ಪಂದ್ಯದಲ್ಲಿ ಟ್ರೆಂಟ್ ಬೋಲ್ಟ್ ಹೇಗೆ ಟೀಮ್ ಇಂಡಿಯಾವನ್ನ ಕಾಡಿದ್ರು ಅನ್ನೋದು ನಿಮಗೂ ಗೊತ್ತಿದೆ. ಇವರಿಬ್ಬರು ಮಾತ್ರವಲ್ಲ.. ಇಡೀ ಟೂರ್ನಿಯಲ್ಲೇ ಎಡಗೈ ವೇಗಿಗಳ ದರ್ಬಾರ್ ನಡೀತಿದೆ. ಸೂಕ್ಷ್ಮವಾಗಿ ಗಮನಿಸಿದ್ರೆ, ಎಡಗೈ ಬೌಲರ್ಗಳ ಎದುರು ಎಲ್ಲ ತಂಡದ ಬ್ಯಾಟ್ಸ್ಮನ್ಗಳು ಪರದಾಡಿರೋದು ಸ್ಪಷ್ಟವಾಗುತ್ತೆ.
ವಿಶ್ವ ಕ್ರಿಕೆಟ್ ಲೋಕದಲ್ಲಿ ಅಸ್ತಿತ್ವದ ಹೋರಾಟ ನಡೆಸ್ತಾ ಇರೋ, ನಮೀಬಿಯಾ, ಸ್ಕಾಟ್ಲೆಂಡ್ ತಂಡಗಳಿಂದ ಹಿಡಿದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರೋ ಪಾಕಿಸ್ತಾನ, ಇಂಗ್ಲೆಂಡ್ ತಂಡಗಳು ಕೂಡ ಇದೇ ಅಸ್ತ್ರದಿಂದ ಯಶಸ್ಸು ಕಂಡಿದೆ. ಆದ್ರೆ, ಟೀಮ್ ಇಂಡಿಯಾದ ಬತ್ತಳಿಕೆಯಲ್ಲಿ ಈ ಅಸ್ತ್ರವೇ ಇಲ್ಲ. ಇನ್ನು ಯಶಸ್ಸು ಹೇಗೆ ಸಾಧ್ಯ!
ಇದನ್ನೂ ಓದಿ:ಕಿಂಗ್ ಕೊಹ್ಲಿಗೆ ಬರ್ತ್ಡೇ ಸಂಭ್ರಮ.. ಸ್ಪೆಷಲ್ ವಿಡಿಯೋ ಶೇರ್ ಮಾಡಿದ RCB
ಜಹೀರ್ ಖಾನ್, ಆಶಿಶ್ ನೆಹ್ರಾ, ಇರ್ಫಾನ್ ಪಠಾಣ್ ಈ ಮೂವರ ನಿರ್ಗಮನದ ಬಳಿಕ ಸ್ಥಿರ ಪ್ರದರ್ಶನ ನೀಡಬಲ್ಲ ಎಡಗೈ ವೇಗಿಯ ಕೊರತೆ ತಂಡವನ್ನ ಬಿಡದೇ ಕಾಡ್ತಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿ ತಂಡಕ್ಕೆ ಎಂಟ್ರಿ ಕೊಟ್ಟರೂ ಕೂಡ ಫಾರ್ಮ್ ಸಮಸ್ಯೆಯಿಂದಲೂ, ಇಂಜುರಿಯಿಂದಲೂ ತಂಡದಿಂದ ಹೊರ ನಡೆಯುತ್ತಿದ್ದಾರೆ. ಇತ್ತಿಚೆಗಷ್ಟೇ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ನಟರಾಜನ್ ಕಥೆಯೂ ಇದೆ ಆಗಿದೆ. ಹೀಗಾಗಿ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಗೆ ಒಬ್ಬ ಸಮರ್ಥ ಲೆಫ್ಟ್ ಆರ್ಮ್ ಪೇಸರ್ ಅನ್ನ ಗುರುತಿಸೋ ಸಾಮರ್ಥ್ಯ ಇಲ್ವಾ..? ಅಥವಾ ಇದನ್ನ ಸಮಸ್ಯೆ ಎಂದು ಬಿಸಿಸಿಐ ಪರಿಗಣಿಸಿಯೇಲ್ವಾ.? ಎಂಬ ಪ್ರಶ್ನೆ ಹುಟ್ಟಿದೆ.