ತುಮಕೂರು: ತುಂಬಿದ ಕೆರೆಗೆ ಬಾಗಿನ ಅರ್ಪಿಸಲು ಹೋದ ಸಂದರ್ಭ ಶಾಸಕ ಡಾ.ರಂಗನಾಥ್ ಕೆರೆಯಲ್ಲಿ ಈಜಾಡಿದ ಘಟನೆ ಕುಣಿಗಲ್ನಲ್ಲಿ ನಡೆದಿದೆ.
ಭಾರೀ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲೇ ತುಂಬಿದ ಕೆರೆಗೆ ಬಾಗಿನ ಕೊಡಲು ಶಾಸಕರು ಹೋಗಿದ್ದರು. ಈ ವೇಳೆ ಬಾಗಿನ ಅರ್ಪಿಸಿ, ಮಳೆಯಲ್ಲೇ ಸುಮಾರು ಒಂದು ಗಂಟೆಗಳ ಕಾಲ ಶಾಸಕ ಕೆರೆಯಲ್ಲಿ ಈಜಾಡಿ ಎಂಜಾಯ್ ಮಾಡಿದ್ದಾರೆ. ಶಾಸಕ ರಂಗನಾಥ್ ಈಜಾಟದ ಉತ್ಸಾಹ ಕಂಡು ಸ್ಥಳೀಯರೂ ಕೂಡ ಕೆರೆಗಿಳಿದು ಈಜಿ ಸಂಭ್ರಮಿಸಿದ್ದಾರೆ.
ಜಿಲ್ಲೆಯಲ್ಲಿ ಮಳೆರಾಯ ಆಗಾಗ ಅಬ್ಬರಿಸಿ ಬೊಬ್ಬಿಯುತ್ತಿದ್ದಾನೆ. ಇದರ ಪರಿಣಾಮ ಕೆರೆಯಲ್ಲಿ ನೀರಿನ ಮಟ್ಟ ಹೆಚ್ಚಿದೆ.