ಬಿಸಿಸಿಐಗೆ ದ್ರಾವಿಡ್​ ಸಲಹೆ; NCA ಮುಖ್ಯಸ್ಥರ ಸ್ಥಾನಕ್ಕೆ ಲಕ್ಷ್ಮಣ್ ಹೆಸರು ಸೂಚಿಸಲು ಕಾರಣ ಇಲ್ಲಿದೆ


‘ದಿ ವಾಲ್’ ಖ್ಯಾತೀಯ ರಾಹುಲ್ ದ್ರಾವಿಡ್​ ಅವರಿಂದ ತೆರವಾಗಿದ್ದ ಸ್ಥಾನಕ್ಕೆ NCA ಮುಖ್ಯಸ್ಥರಾಗಿ ಮುಂದೆ ಯಾರನ್ನ ಆಯ್ಕೆ ಮಾಡಬೇಕು ಅನ್ನೋ ವಿಚಾರದಲ್ಲಿ ಬಿಸಿಸಿಐ ಗೊಂದಲಕ್ಕೆ ಸಿಲುಕಿತ್ತು. ಕೊನೆಗೂ ಗಂಗೂಲಿ ಅವರ ತಲೆಬಿಸಿಯನ್ನ ರಾಹುಲ್ ದ್ರಾವಿಡ್ ಓಡಿಸಿದ್ದು, ಭಾರತ ತಂಡ ಮಾಜಿ ಆಟಗಾರ ವಿವಿಎಸ್​ ಲಕ್ಷ್ಮಣ್ ಅವರನ್ನ ಆಯ್ಕೆ ಮಾಡುವಂತೆ ಸಲಹೆ ನೀಡಿದ್ದಾರೆ. ದ್ರಾವಿಡ್​ ಅವರ ಮಾತಿಗೆ ಮರು ಮಾತನಾಡದೇ ಗಂಗೂಲಿ ಸಮ್ಮತಿ ಸೂಚಿಸಿದ್ದಾರಂತೆ.

ಭವಿಷ್ಯದ ಕ್ರಿಕೆಟಿಗರನ್ನ ಸಿದ್ಧಪಡಿಸುವ ಕೇಂದ್ರ ನ್ಯಾಷನಲ್​​ ಕ್ರಿಕೆಟ್​ ಅಕಾಡೆಮಿ. ಇಲ್ಲಿ ತರಬೇತಿ ಪಡೆದ ಅದೆಷ್ಟೋ ಯುವ ಕ್ರಿಕೆಟಿಗರು, ಟೀಮ್​ ಇಂಡಿಯಾದಲ್ಲಿ ಮಿಂಚುತ್ತಿದ್ದಾರೆ. ಅದಕ್ಕೆ NCA ಮುಖ್ಯಸ್ಥರಾಗಿದ್ದ ರಾಹುಲ್ ದ್ರಾವಿಡೇ ಕಾರಣ. ಯುವಕರ ಪ್ರತಿಭೆ ಗುರುತಿಸಿ, ಪ್ರತಿಭಾನ್ವಿತ ಕ್ರಿಕೆಟಿಗರನ್ನಾಗಿ ರೂಪಿಸುತ್ತಿದ್ದ ದ್ರಾವಿಡ್​, ಇದೀಗ ಟೀಮ್ ಇಂಡಿಯಾದ ಹೆಡ್​ಕೋಚ್​ ಆಗಿ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೆ NCA ಮುಖ್ಯಸ್ಥ ಸ್ಥಾನಕ್ಕೆ ಬಿಸಿಸಿಐ ಹುಡುಕಾಟ ನಡೆಸಿದೆ. ಆದರೆ ದ್ರಾವಿಡ್​​, ಲಕ್ಷ್ಮಣ್​​ರನ್ನ ನೇಮಿಸುವಂತೆ ಮನವಿ ಮಾಡಿದ್ದಾರೆ.

ಏಕೆಂದರೆ NCA ಪರಂಪರೆ ಉಳಿಸಿ ಬೆಳೆಸೋದು ಇದರ ಹಿಂದಿನ ಉದ್ದೇಶವಾಗಿದೆ. ಹಾಗಾಗಿ ಹಿರಿಯ ಹಾಗೂ ಅನುಭವಿ ಆಟಗಾರ ಲಕ್ಷ್ಮಣ್​​ ತನ್ನ ಉತ್ತರಾಧಿಕಾರಿಯಾಗಲು ಬಯಸಿದ್ದಾರೆ ದ್ರಾವಿಡ್​.

ಇಬ್ಬರದ್ದೂ ಪರಿಪೂರ್ಣ ಸಂಯೋಜನೆ
‘ಎನ್​ಸಿಎ ಮುಖ್ಯಸ್ಥ ಸ್ಥಾನಕ್ಕೆ VVS​ ಲಕ್ಷ್ಮಣ್​ರ ನೇಮಿಸುವಂತೆ ದ್ರಾವಿಡ್​ ಸೂಚಿಸಿದ್ದಾರೆ. ಇದು ಗಂಗೂಲಿ, ಜಯ್​​ ಶಾ ಇಬ್ಬರಿಗೂ ಇಷ್ಟವಾಗಿದೆ. ವಿಶೇಷ ಬಾಂಧವ್ಯ ಹೊಂದಿರುವ ದ್ರಾವಿಡ್ ​- ಲಕ್ಷ್ಮಣ್​​ ಒಟ್ಟಾಗಿ ಭಾರತೀಯ ಕ್ರಿಕೆಟ್​​​ಗಾಗಿ ಮತ್ತೊಮ್ಮೆ ಸೇವೆ ಆರಂಭಿಸುವುದು ಅದಕ್ಕಿಂತ ಮಿಗಿಲಾದದ್ದು ಬೇರೆ ಏನೂ ಇಲ್ಲ. ಇಬ್ಬರ ಪರಿಪೂರ್ಣ ಸಂಯೋಜನೆಯಿಂದ ಪ್ರತಿಭಾನ್ವಿತ ಕ್ರಿಕೆಟಿಗರ ದಂಡು ಟೀಮ್​ ಇಂಡಿಯಾದಲ್ಲಿ ತುಂಬಿರುತ್ತೆ ಅನ್ನೋದು ಬಿಸಿಸಿಐ ಲೆಕ್ಕಾಚಾರವಾಗಿದೆ.

ಅಂದ್ಹಾಗೆ ದ್ರಾವಿಡ್​ ಮತ್ತು ಲಕ್ಷ್ಮಣ್​, ಟೀಮ್​ ಇಂಡಿಯಾಗೆ ಅದ್ಭುತ ಕೊಡುಗೆ ನೀಡಿದ್ದಾರೆ. ಆಪತ್ಭಾಂದವರಾಗಿ ತಂಡವನ್ನ ರಕ್ಷಿಸುತ್ತಿದ್ದ ಈ ದಿಗ್ಗಜರು, ಆಪ್ತರು ಕೂಡ ಹೌದು. ಹಾಗೇ ಲಕ್ಷ್ಮಣ್​​​ ಬಗ್ಗೆ ಎಲ್ಲವೂ ಗೊತ್ತಿರುವ ಕಾರಣ, ದ್ರಾವಿಡ್​ ಈ ನಿರ್ಧಾರಕ್ಕೆ ಬಂದಿದ್ದಾರೆ. ಲಕ್ಷ್ಮಣ್​​ ಎಲ್ಲಿಯೂ ಕೋಚ್​ ಆಗದಿದ್ರೂ, ಮುಖ್ಯಸ್ಥರಾಗುವ ಎಲ್ಲಾ ಲಕ್ಷ್ಮಣ ಹೊಂದಿದ್ದಾರೆ ಎಂಬ ವಾದವನ್ನೂ ದ್ರಾವಿಡ್​ ಮಂಡಿಸಿದ್ದಾರೆ. ಆ ಮೂಲಕ ಜೊತೆಯಾಗಿ ಮತ್ತೊಂದು ಇನ್ನಿಂಗ್ಸ್​​​​ ಪುನರಾರಂಭಿಸಲು ಉತ್ಸುಕತೆ ತೋರಿದ್ದು, ಭಾರತೀಯ ಕ್ರಿಕೆಟ್​​ಗೆ ಮತ್ತೊಂದು ಅಮೂಲ್ಯ ಕೊಡುಗೆ ನೀಡಲು ಮುಂದಾಗಿದ್ದಾರೆ.

ಲಕ್ಷ್ಮಣ್​ರನ್ನ ದ್ರಾವಿಡ್​​​​ ಬೆಂಬಲಿಸಲು ಕಾರ​ಣ..?

  • ದೀರ್ಘಕಾಲ ಟೀಮ್​​ ಇಂಡಿಯಾದಲ್ಲಿ ಆಡಿದ ಅನುಭವ
  • ಬಿಸಿಸಿಐ ಕ್ರಿಕೆಟ್​ ಸಲಹಾ ಸಮಿತಿಯ ಸದಸ್ಯರಾಗಿ ಸೇವೆ
  • SRHನಲ್ಲಿ ಮಾರ್ಗದರ್ಶಕರಾಗಿ VVS ಲಕ್ಷ್ಮಣ್​ ಕಾರ್ಯ
  • ಬೆಂಗಾಲ್​ ಕ್ರಿಕೆಟ್​​ ತಂಡದ ಬ್ಯಾಟಿಂಗ್ ಸಲಹೆಗಾರನಾಗಿ ಕೆಲಸ
  • ವಹಿಸಿದ ಕೆಲಸವನ್ನ ಅಚ್ಚುಕಟ್ಟಾಗಿ ನಿಭಾಯಿಸುವ ಸಾಮರ್ಥ್ಯ
  • ಯುವ ಕ್ರಿಕೆಟಿಗರಿಗೆ ಪ್ರೋತ್ಸಾಹ ನೀಡುವ ಗುಣ ಹೊಂದಿದ್ದಾರೆ
  • ಹೀಗಾಗಿ ಎನ್​ಸಿಎ ಮುಖ್ಯಸ್ಥ ಸ್ಥಾನಕ್ಕೆ ಲಕ್ಷ್ಮಣ್​ ಬೆಸ್ಟ್​ ಚಾಯ್ಸ್​

News First Live Kannada


Leave a Reply

Your email address will not be published. Required fields are marked *