ಬಿಸಿಸಿಐ-ಆಯ್ಕೆ ಸಮಿತಿ ಇಂದು ಮಹತ್ವದ ಸಭೆ; ಕಿವೀಸ್​ ಸರಣಿಗೆ ಟೀಂ ಇಂಡಿಯಾದಲ್ಲಿ ಯಾರೆಲ್ಲಾ ಇರಬೇಕು?


ಬಹು ನಿರೀಕ್ಷಿತ ಟಿ20 ವಿಶ್ವಕಪ್​​​​ನಲ್ಲಿ ಟೀಮ್​ ಇಂಡಿಯಾ, ಲೀಗ್​​ ಹಂತದಲ್ಲೇ ಹೊರ ಬಿದ್ದಿದೆ. ಇದೀಗ ಆಟಗಾರರ ಚಿತ್ತ ನ್ಯೂಜಿಲೆಂಡ್​ ಸರಣಿ ಮೇಲೆ ನೆಟ್ಟಿದೆ. ನವೆಂಬರ್​ 17ರಿಂದ 3 ಪಂದ್ಯಗಳ ಟಿ20 ಸರಣಿ ಶುರುವಾಗಲಿದ್ದು, ಇಂದೇ ಭಾರತ ತಂಡ ಪ್ರಕಟವಾಗುವ ಸಾಧ್ಯತೆ ಇದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ​ ನೀಡಲು ಸೆಲೆಕ್ಷನ್​ ಕಮಿಟಿ ನಿರ್ಧರಿಸಿದ್ದು, ಹೊಸ ಮುಖಗಳಿಗೆ ಅವಕಾಶ ನೀಡುವತ್ತ, ಗಮನ ಹರಿಸಿದೆ.

ರೋಹಿತ್​ ಶರ್ಮಾಗೆ ರೆಸ್ಟ್..? 
ವಿಶ್ವಕಪ್​​ ಬಳಿಕ ಟಿ20 ಕ್ರಿಕೆಟ್​​ ನಾಯಕತ್ವದಿಂದ ಕೊಹ್ಲಿ ಕೆಳಗಿಳಿಯಲಿದ್ದಾರೆ. ಬಳಿಕ ಈ ಜವಾಬ್ದಾರಿ ರೋಹಿತ್​ ಹೆಗಲೇರುವ ಸಾಧ್ಯತೆ ಇದೆ. ಆದ್ರೆ ಈ​ ಸರಣಿಗೆ ರೋಹಿತ್​, ವಿರಾಟ್​​​, ಬೂಮ್ರಾ, ಶಮಿ ಸೇರಿದಂತೆ ಸೀನಿಯರ್​ ಪ್ಲೇಯರ್ಸ್​​​ಗೆ ರೆಸ್ಟ್​​​​ ನೀಡುವ ಸಾಧ್ಯತೆ ಇದೆ. ಹಾಗಾಗಿ ಈ ಸರಣಿಗೆ ಕೆ.ಎಲ್​.ರಾಹುಲ್​, ನಾಯಕತ್ವ ವಹಿಸಿಕೊಳ್ಳೋದು ಪಕ್ಕಾ ಎನ್ನಲಾಗ್ತಿದೆ. ಇನ್ನ ಇದೇ ಸರಣಿಯಲ್ಲಿ ಹೆಡ್​​ಕೋಚ್​ ಆಗಿ ರಾಹುಲ್​ ದ್ರಾವಿಡ್​ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಪರಿಣಾಮ, ನ್ಯೂಜಿಲೆಂಡ್​​​ ಕದನಕ್ಕೆ ಯುವ ಆಟಗಾರರನ್ನೇ ಆಯ್ಕೆ ಮಾಡುವ ಸಾಧ್ಯತೆ ಇದೆ. ಸಿನಿಯರ್​ ಪ್ಲೇಯರ್ಸ್​​​ ಟಿ20 ಸರಣಿಗೆ ವಿಶ್ರಾಂತಿ ಪಡೆದರೂ, ಆ ಬಳಿಕ ಶುರುವಾಗುವ ಟೆಸ್ಟ್​​​ ಸರಣಿಗೆ ತಂಡ ಸೇರಿಕೊಳ್ಳಲಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಹಿರಿಯ ಆಟಗಾರರು ಸತತ ಬಯೋ-ಬಬಲ್​​​ನಲ್ಲಿದ್ದಾರೆ. ಹಾಗಾಗಿ ಅವರಲ್ಲಿನ ಮಾನಸಿಕ ಒತ್ತಡದ ನಿರ್ಮೂಲನೆಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಫಿಟ್​​ನೆಸ್​​ ಸಮಸ್ಯೆಗೆ ಒಳಗಾದ ಹಾರ್ದಿಕ್​​​ರನ್ನ ಕೈಬಿಡಲು ಮುಂದಾಗಿದೆ.
ಋತುರಾಜ್​, ವೆಂಕಟೇಶ್ ಅಯ್ಯರ್​​ ಅವಕಾಶ ಪಡೆಯೋದು ಖಚಿತ..!

ಕಿವೀಸ್​ ಸರಣಿಗೆ ಯಂಗ್​ ಇಂಡಿಯಾ ಕಟ್ಟೋಕೆ ಬಿಸಿಸಿಐ ಈಗಾಗಲೇ ಚಿಂತಿಸಿದೆ. ರಿಷಭ್​ ಪಂತ್​, ಇಶಾನ್​ ಕಿಶನ್​, ಸೂರ್ಯಕುಮಾರ್​, ಶಾರ್ದೂಲ್​ ಠಾಕೂರ್​, ವರುಣ್​, ರಾಹುಲ್ ಚಹರ್​​​​ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ IPL​​​ನಲ್ಲಿ ಅಬ್ಬರಿಸಿದ ಯುವ ಆಟಗಾರರಿಗೆ ಚಾನ್ಸ್​ ನೀಡಲು ತೀರ್ಮಾನಿಸಿದೆ. ಅದರಲ್ಲೂ CSK ತಂಡದ ಋತುರಾಜ್ ಗಾಯಕ್ವಾಡ್, KKR​ ತಂಡದ ವೆಂಕಟೇಶ್ ಅಯ್ಯರ್​ ತಮ್ಮ ಸ್ಥಾನವನ್ನು ಅದಾಗಲೇ ಭದ್ರಪಡಿಸಿಕೊಂಡಿದ್ದಾರೆ ಎಂದೇ ಹೇಳಲಾಗ್ತಿದೆ.

ಉಳಿದಂತೆ ಆವೇಶ್​ ಖಾನ್, ಚೇತನ್​ ಸಕಾರಿಯಾ, ಮೊಹಮ್ಮದ್​ ಸಿರಾಜ್ ಕೂಡ ಸ್ಥಾನ​ ಪಡೆಯುವ ಅವಕಾಶ ಹೆಚ್ಚಿದೆ. ಹಾಗೇ ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ದೀಪಕ್​​ ಚಹರ್, ಯಜುವೇಂದ್ರ ಚಹಲ್​​​​ ಟೀಮ್ ಇಂಡಿಯಾಕ್ಕೆ ಕಮ್​ ಬ್ಯಾಕ್ ಮಾಡುವ ನಿರೀಕ್ಷೆ ಇದೆ. ಟೀಮ್​​ ಇಂಡಿಯಾ ಎದುರಿನ ಸರಣಿಗಾಗಿ ನ್ಯೂಜಿಲೆಂಡ್​, ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. ಅದಕ್ಕೆ ಸರಿ ಸಮನಾದ ತಂಡ ಪ್ರಕಟಿಸೋಕೆ, ಬಿಸಿಸಿಐ ಕೂಡ ಸಾಕಷ್ಟು ಪ್ಲಾನ್​ ಹಾಕಿಕೊಂಡಿದೆ. ಹಾಗಾಗಿ ಯಾರೆಲ್ಲಾ ಆಯ್ಕೆಯಾಗ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

The post ಬಿಸಿಸಿಐ-ಆಯ್ಕೆ ಸಮಿತಿ ಇಂದು ಮಹತ್ವದ ಸಭೆ; ಕಿವೀಸ್​ ಸರಣಿಗೆ ಟೀಂ ಇಂಡಿಯಾದಲ್ಲಿ ಯಾರೆಲ್ಲಾ ಇರಬೇಕು? appeared first on News First Kannada.

News First Live Kannada


Leave a Reply

Your email address will not be published. Required fields are marked *