ಬೊಮ್ಮಾಯಿ ವಾಪಸ್ಸಾದ ಬೆನ್ನಲ್ಲೇ ಶೆಟ್ಟರ್​ಗೆ ಹೈಕಮಾಂಡ್​​ನಿಂದ ಬುಲಾವ್​; ಯಾಕೆ?


ಬೆಂಗಳೂರ: ಹೈಕಮಾಂಡ್ ನಾಯಕರ ಬುಲಾವ್ ಹಿನ್ನೆಲೆಯಲ್ಲಿ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಇಂದು ದಿಢೀರ್​ ದೆಹಲಿ ಪ್ರಯಾಣ ಬೆಳೆಸಿದ್ದು ಸಾಕಷ್ಟು ಕೂತಹಲ ಮೂಡಿಸಿದೆ.

ಹೈಕಮಾಂಡ್​​ ಬುಲಾವ್​ ಇಲ್ಲ, ಅಧ್ಯಕ್ಷರು ದೆಹಲಿಯಲ್ಲಿಲ್ಲ. ಉಳಿದಿಬ್ಬರು ಬೆಂಗಳೂರಲ್ಲೇ ಇದ್ದರು. ಜಿಎಸ್​​ಟಿ ಸಭೆ ಇಲ್ಲ. ಆದ್ರೂ ಸಿಎಂ ಕರೆಯದೇ ದೆಹಲಿಗೆ ಹೋಗಿದ್ದು ಸಾಕಷ್ಟು ಪಿಸುಮಾತುಗಳಿಗೆ ಕಾರಣವಾಗಿತ್ತು. ಇಂದು ಅವರು ವಾಪಸ್​ ಬಂದ ಬೆನ್ನಲ್ಲೇ ಜಗದೀಶ್​ ಶೆಟ್ಟರ್​ ಅವರ ಪಯಣ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಶೆಟ್ಟರ್​ ಪ್ರವಾಸದ ಕುರಿತು ಗಮನಿಸೋದಾದ್ರೆ ಸದ್ಯಕ್ಕಂತೂ ಸಂಪುಟ ವಿಸ್ತರಣೆ, ಪುನಾರಚನೆ ಪ್ರಸ್ತಾವ ಇಲ್ಲ. ನಿಗಮ ಮಂಡಳಿಗಳ ಮರು ನೇಮಕದ ಬಗ್ಗೆಯೂ ಚರ್ಚೆಯೂ ಇಲ್ಲ. ಆದರೂ ಹೈಕಮಾಂಡ್​ ಬುಲಾವ್​ ನೀಡಿದೆ. ಇನ್ನು ಬೊಮ್ಮಾಯಿ ಸಿಎಂ ಗಾದಿ ಏರಿದ ನಂತರ ನನಗೆ ಸಚಿವ ಸ್ಥಾನ ಬೇಡ ಎಂದು ಹೇಳಿ ಕ್ಷೇತ್ರದಲ್ಲಿಯೇ ಉಳಿದುಕೊಂಡಿರುವ ಶೆಟ್ಟರ್​ ಸಿಎಂ ಜೊತೆ ಮುನಿಸಿಕೊಂಡರಾ ಎಂಬ ಮಾತುಗಳ ಕೇಳಿ ಬಂದಿದ್ದವು.

ಸದ್ಯ ರಾಜ್ಯದಲ್ಲಿ ವಿಧಾನ ಪರಿಷತ್​ ಚುನುವಣೆಗಳು ಘೋಷಣೆಯಾಗಿದ್ದು ಟಿಕೆಟ್​ ಫೈನಲ್​ ಮಾಡಲು ಬುಲಾವ್​ ನೀಡಿದ್ರಾ? ಅಥವಾ ರಾಜ್ಯದಲ್ಲಿ ಗದ್ದಲ ಎಬ್ಬಿಸಿರುವ ಬಿಟ್​ ಕಾಯಿನ್​ ಪ್ರಕರಣ ಕುರಿತು ವಿವರಣೆ ಪಡೆಯಲು ಶೆಟ್ಟರ್​ಗೆ ಕರೆದ್ರಾ ಎಂಬುದನ್ನ ಕಾದು ನೋಡಬೇಕಿದೆ.

The post ಬೊಮ್ಮಾಯಿ ವಾಪಸ್ಸಾದ ಬೆನ್ನಲ್ಲೇ ಶೆಟ್ಟರ್​ಗೆ ಹೈಕಮಾಂಡ್​​ನಿಂದ ಬುಲಾವ್​; ಯಾಕೆ? appeared first on News First Kannada.

News First Live Kannada


Leave a Reply

Your email address will not be published. Required fields are marked *