ಬೆಂಗಳೂರು: ಚಿತ್ರನಟ, ನಿರ್ದೇಶಕ ಪ್ರೇಮ್ ಇಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ರನ್ನು ಭೇಟಿ ಮಾಡಿ ‘ಏಕ್ ಲವ್ ಯಾ’ ಚಿತ್ರ ವೀಕ್ಷಿಸಲು ಆಹ್ವಾನ ನೀಡಿದ್ದಾರೆ.
ಕೈ ನಾಯಕರು ಅಹೋರಾತ್ರಿ ಧರಣಿ ಮಾಡುತ್ತಿದ್ದ ವೇಳೆಯಲ್ಲಿ ವಿಧಾನಸೌಧದಲ್ಲಿಯೇ ಭೇಟಿಯಾಗಿದ್ದಾರೆ. ಈ ಸಂಬಂಧ ಪ್ರೇಮ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಏಕಲವ್ಯ ಸಿನಿಮಾ ರಿಲೀಸ್ ಆಗ್ತಿದೆ, ಇದು ನನ್ನ ದೊಡ್ಡ ಬಜೆಟ್ ಸಿನಿಮಾ ಆದ್ದರಿಂದ ಸಿನಿಮಾ ವೀಕ್ಷಣೆಗೆ ಆಹ್ವಾನ ನೀಡಲು ಆಗಮಿಸಿದ್ದೇ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಆಹ್ವಾನ ನೀಡಿರುವುದಾಗಿ ತಿಳಿಸಿದರು.
ರಾಜಕೀಯಕ್ಕೆ ಬರುವ ಕುರಿತು ಮಾತನಾಡಿರುವ ಪ್ರೇಮ್ ನನಗೆ ರಾಜಕೀಯಕ್ಕೆ ಬರುವ ಆಸೆಯಿಲ್ಲ ಎಂದಿದ್ದಾರೆ. ಇನ್ನೂ ರಕ್ಷಿತಾ ಮೊದಲಿನಿಂದಲೂ ಬಿಜೆಪಿಯಲ್ಲಿದ್ದಾರೆ. ಆದರೇ ಅವರು ಎಲೆಕ್ಷನ್ನಿಗೆ ನಿಲ್ತಾರೋ ಇಲ್ವೊ ಅದರ ಬಗ್ಗೆ ತಿಳಿದಿಲ್ಲ ಎಂದಿದ್ದಾರೆ. ಇನ್ನೂ ನನಗೆ ರಾಜಕೀಯದಲ್ಲಿ ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ಹಿರಿಯರಿದ್ದಾರೆ, ಗುರುಗಳು ಇದ್ದಾರೆ ಎಂದು ಹೇಳಿರುವ ಪ್ರೇಮ್, ಎಲೆಕ್ಷನ್ಗೆ ನಿಲ್ಲದಿದ್ರೂ ಕೆಲಸ ಮಾಡ್ತೇನೆ ಎಂದಿದ್ದಾರೆ.
ಮಂಡ್ಯದಲ್ಲಿ ಪ್ರೇಮ್ ನಿಲ್ತಾರೆ ಎಂಬ ಮಾತಿಗೆ ಉತ್ತರಿಸಿರುವ ಪ್ರೇಮ್ ಅಂಬರೀಶ್ ಅಣ್ಣ ಇದ್ದಾಗ ಅಣ್ಣದ ಎದುರಾಗಿ ನಿಲ್ಲೊಕೆ ಹೇಳಿದ್ದು ಎಲ್ಲರಿಗೂ ಗೊತ್ತೇ ಇದೆ, ಆಗಲೂ ನಾನು ನಿಲ್ಲಲಿಲ್ಲ. ಮುಂದೆ ಏನಾಗತ್ತೋ ಗೊತ್ತಿಲ್ಲ ಎಂದು ಹೇಳಿದ್ದಾರೆ.