ವೆಸ್ಟ್ ಇಂಡೀಸ್ ವಿರುದ್ಧ ಸರಣಿ ವೈಟ್ ವಾಶ್ ಬೆನ್ನಲ್ಲೀಗ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಟಿ20 ಸೀರೀಸ್ ಆಡುತ್ತಿದೆ. ಕಳೆದ ಎರಡು ವರ್ಷಗಳಿಂದ ಕಳಪೆ ಪ್ರದರ್ಶನ ನೀಡುತ್ತಿದ್ದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಈಗ ಮತ್ತೆ ಫಾರ್ಮ್ಗೆ ಮರಳಿದ್ದು, ಟೀಂ ಇಂಡಿಯಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಮಾಜಿ ಕ್ರಿಕೆಟರ್ ಸುನೀಲ್ ಗವಾಸ್ಕರ್ ಪ್ರಶಂಸೆ ಮಾತುಗಳನ್ನಾಡಿದ್ದಾರೆ.
ಈ ಸಂಬಂಧ ಮಾತಾಡಿದ ಸುನೀಲ್ ಗವಾಸ್ಕರ್, ಭುವನೇಶ್ವರ್ ಕುಮಾರ್ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ. ಈ ಹಿಂದೆ ಸೌತ್ ಆಫ್ರಿಕಾ ವಿರುದ್ಧ ಅಂತಹ ಪ್ರದರ್ಶನವೇನು ನೀಡಿರಲಿಲ್ಲ. ಆದರೀಗ, ವೆಸ್ಟ್ ಇಂಡೀಸ್ ಸರಣಿಯಲ್ಲಂತೂ ಭುವಿ ಪ್ರದರ್ಶನ ಅದ್ಭುತ ಎಂದರು.
ಇನ್ನು, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯೋಕೆ ಸಾಕಷ್ಟು ಸ್ಪರ್ಧೆ ಇದೆ. ಭುವಿ ಕಮ್ಬ್ಯಾಕ್ ಮಾಡಿದ ರೀತಿ ನೋಡಿದ್ರೆ ಯಾರು ಆತನ ಸ್ಥಾನ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಭುವಿ ಆಡದಿದ್ದಾಗ ಸಾಕಷ್ಟು ಜನ ಟೀಕೆ ಮಾಡಿದ್ದರು. ಇವರಿಗೆ ಭುವಿ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.