ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಕೇಸ್ಗಳು ಹೆಚ್ಚುತ್ತಿರುವ ಹಿನ್ನೆಲೆ ಮುಂದಿನ ಎರಡು ವಾರಗಳ ಕಾಲ ಅನಾರೋಗ್ಯದಿಂದ ಗಂಭೀರವಾಗಿರೋ/ ತುರ್ತು ಚಿಕಿತ್ಸೆಯ ಅಗತ್ಯವಿರುವವರು ಮಾತ್ರ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳಿ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಕೊರೊನಾ ಕೇಸ್ ಹೆಚ್ಚುತ್ತಿರುವ ಬೆನ್ನಲ್ಲೇ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದ್ದು, ಕೊವೀಡ್ ಸೋಂಕಿನ ಲಕ್ಷಣಗಳು ಕಂಡು ಬಂದವರಿಗೆ ಸೂಚನೆ ನೀಡಲಾಗಿದೆ. ಇದರಲ್ಲಿ ಗಂಭೀರ ಖಾಯಿಲೆ ಇದ್ದವರು ಮಾತ್ರ ಆಸ್ಪತ್ರೆಗಳಿಗೆ ಬಂದು ಚಿಕಿತ್ಸೆ ಪಡೆಯಿರಿ. ಲಘು ಕಾಯಿಲೆಗಳು ಕಂಡು ಬಂದರೇ ಮನೆಯಲ್ಲೇ ಚಿಕಿತ್ಸೆ ಪಡೆಯರಿ ಎಂದು ಸಲಹೆ ನೀಡಿದೆ.
2 ವಾರಗಳ ಕಾಲ ಈ ಸೂಚನೆ ಪಾಲಿಸಲು ಸಾರ್ವಜನಿಕರಿಗೆ ಇಲಾಖೆ ಮನವಿ ಮಾಡಿದ್ದು, ಗಂಭೀರ ಕಾಯಿಲೆ ಇದ್ದವರು ದೊಡ್ಡ, ಮಲ್ಟಿ ಸ್ಪೆಷಾಲಿಟಿಗೆ ದಾಖಲಾಗಬೇಕು. ಈ ಕುರಿತು ಖಾಸಗಿ ಆಸ್ಪತ್ರೆಗಳಿಗೆ ಮಾಹಿತಿ ನೀಡಲಾಗಿದೆ ಎಂದ ಆರೋಗ್ಯ ಇಲಾಖೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಕೊರೊನಾ ಸೋಂಕಿನ ಹರಾಡುವಿಕೆಯನ್ನು ತಡೆಯಲು ಸರ್ಕಾರ ಈ ಸೂಚನೆಯನ್ನು ನೀಡಿದೆ.