ಮುಂಬೈನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಮಳೆಯಾಟದ ಕಾರಣ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್, ಶುಭ್ಮನ್ ಗಿಲ್ ಉತ್ತಮ ಆರಂಭ ನೀಡಿದರು.
ಮೊದಲ ವಿಕೆಟ್ಗೆ 80 ರನ್ಗಳ ಭದ್ರ ಅಡಿಪಾಯ ಹಾಕಿ ಬಿಗ್ ಇನ್ನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ್ದರು. ಆದ್ರೆ, ಈ ವೇಳೆ 44 ರನ್ ಗಳಿಸಿ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ಶುಭ್ಮನ್, ಅಜಾಜ್ ಪಟೇಲ್ ಬೌಲಿಂಗ್ನಲ್ಲಿ ಸ್ಲಿಪ್ನಲ್ಲಿದ್ದ ರಾಸ್ ಟೇಲರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಬಳಿಕ ಬಂದ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ, ನಾಯಕ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ಸೇರಿದರು. ಇದರೊಂದಿಗೆ 80 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
WATCH – Was Virat Kohli OUT or NOT OUT ? You decide.
Full video
https://t.co/ZhDsQdLdZZ #INDvNZ @Paytm pic.twitter.com/2opNPCVoqU
— BCCI (@BCCI) December 3, 2021
ಇನ್ನೂ ಕೊಹ್ಲಿ ನಿರ್ಗಮನದ ಬಳಿಕ ಮಯಾಂಕ್ ಜೊತೆಗೂಡಿರುವ ಶ್ರೇಯಸ್ ತಂಡಕ್ಕೆ ನೆರವಾಗುವ ಭರವಸೆ ಮೂಡಿಸಿದ್ರೆ. 2ನೇ ಸೆಷನ್ ಮುಕ್ತಾಯಕ್ಕೂ ಮುನ್ನ ಅರ್ಧಶತಕ ಸಿಡಿಸಿದ ಮಯಾಂಕ್, ಬಿಗ್ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದಾರೆ. ಸದ್ಯ 2ನೇ ಸೆಷನ್ ಮುಕ್ತಾಯಕ್ಕೆ ಟೀಮ್ ಇಂಡಿಯಾ 3 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿದೆ. ಮಯಾಂಕ್ ಅಜೇಯ 52 ರನ್, ಶ್ರೇಯಸ್ 7 ರನ್ ಕ್ರಿಸ್ನಲ್ಲಿದ್ದಾರೆ.
That will be Tea on Day 1 of the 2nd Test. #TeamIndia lose three wickets in the afternoon session.
Scorecard – https://t.co/KYV5Z1jAEM #INDvNZ @Paytm pic.twitter.com/HCcJ3Lp8k0
— BCCI (@BCCI) December 3, 2021
FIFTY!
A fine half-century from @mayankcricket at the Wankhede. This is his 5th in Test cricket.
Live – https://t.co/CmrJV47AeP #INDvNZ @Paytm pic.twitter.com/mhi0riFyJr
— BCCI (@BCCI) December 3, 2021
The post ಮುಂಬೈ ಟೆಸ್ಟ್ DAY 1 : ಸಂಕಷ್ಟದಲ್ಲಿರುವ ಟೀಮ್ ಇಂಡಿಯಾಕ್ಕೆ ಮಯಾಂಕ್ ಆಸರೆ appeared first on News First Kannada.