ದೇಶಿ ಕ್ರಿಕೆಟ್ನ ಪ್ರತಿಷ್ಠಿತ ಟಿ20 ಟೂರ್ನಿ ಉಪಾಂತ್ಯಕ್ಕೆ ತಲುಪಿದೆ. ಇಂದಿನ ಫೈನಲ್ನಲ್ಲಿ ಹಾಲಿ & ಮಾಜಿ ಚಾಂಪಿಯನ್ಸ್ ಮುಖಾಮುಖಿಯಾಗ್ತಿದ್ದು, ಸಾಂಪ್ರದಾಯಿಕ ಎದುರಾಳಿಗಳ ಕಾದಾಟ ಭಾರೀ ಕುತೂಹಲ ಮೂಡಿಸಿದೆ.
ದೇಶಿ ಕ್ರಿಕೆಟ್ನ ಸಾಂಪ್ರದಾಯಿಕ ಎದುರಾಳಿಗಳ ಕಾದಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ದೆಹಲಿಯ ಅರುಣ್ ಜೇಟ್ಲಿ ಸೇಡಿಯಂನಲ್ಲಿ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕಕ್ಕೆ, ವಿಜಯ್ ಶಂಕರ್ ನೇತೃತ್ವದ ತಮಿಳುನಾಡು ಸವಾಲು ಎದುರಾಗ್ತಿದೆ. ಈ ಉಭಯ ತಂಡಗಳ ಮುಖಾಮುಖಿ ಹೈವೋಲ್ಟೇಜ್ ಟಚ್ ಪಡೆದಿಕೊಂಡಿದ್ದಲ್ಲದೆ, ಹಲವು ವಿಚಾರಗಳಿಂದ ಕುತೂಹಲ ಹುಟ್ಟುಹಾಕಿದೆ.
ಇಂಟರ್ನ್ಯಾಷನಲ್ ಸ್ಟಾರ್ಗಳೇ ಪಂದ್ಯದ ಆಕರ್ಷಣೆ..!
ಯೆಸ್..! ಮೇಲ್ನೋಟಕ್ಕೆ ಬಲಿಷ್ಠ ತಂಡಗಳಾಗಿ ಕಾಣಿಸುತ್ತಿರುವ ಉಭಯ ತಂಡಗಳಲ್ಲಿ ಇಂಟರ್ನ್ಯಾಷನಲ್ ಸ್ಟಾರ್ಗಳೇ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಕರ್ನಾಟಕ ಪರ ಮನೀಷ್ ಪಾಂಡೆ, ಕರುಣ್ ನಾಯರ್ ಇಂಟರ್ನ್ಯಾಷನಲ್ ಸ್ಟಾರ್ಗಳಾಗಿದ್ರೆ, ವಿಜಯ್ ಶಂಕರ್, ಸಂದೀಪ್ ವಾರಿಯರ್ ತಮಿಳುನಾಡಿನ ಅಂತಾರಾಷ್ಟ್ರೀಯ ಮಟ್ಟದ ಆಟಗಾರರಾಗಿದ್ದಾರೆ. ಹೀಗಾಗಿ ಇಂದಿನ ಪಂದ್ಯ ಭಾರೀ ಕುತೂಹಲ ಮೂಡಿಸಿದೆ.
ಫೈನಲ್ಸ್ನಲ್ಲಿ ನಡೆಯಲಿದೆ ಐಪಿಎಲ್ ಸ್ಟಾರ್ಸ್ ಫೈಟ್..!
ಜಸ್ಟ್ ಇಂಟರ್ನ್ಯಾಷನಲ್ ಸ್ಟಾರ್ಗಳ ಮುಖಾಮುಖಿ ಮಾತ್ರವೇ ಆಗ್ತಿಲ್ಲ. ಐಪಿಎಲ್ ಸ್ಟಾರ್ಗಳ ಮುಖಾಮುಖಿಗೂ ಇಂದಿನ ಫೈನಲ್ ಮ್ಯಾಚ್ ಸಾಕ್ಷಿಯಾಗ್ತಿದೆ. ಹೌದು..! ತಮಿಳುನಾಡಿನ ತಂಡದಲ್ಲಿ ಹರಿ ನಿಶಾಂತ್, ಜಗದೀಶನ್, ಸಾಯಿ ಕಿಶೋರ್ ಚೆನ್ನೈ ತಂಡದ ಅಂಗವಾಗಿದ್ದರೆ, ಮುರುಗನ್ ಅಶ್ವಿನ್, ಶಾರೂಖ್ ಖಾನ್ ಪಂಜಾಬ್ ಕಿಂಗ್ಸ್ ಪರ ಆಡಿರುವ ಐಪಿಎಲ್ ಸ್ಟಾರ್ಸ್ ಆಗಿದ್ದಾರೆ. ಇನ್ನೂ ಕರ್ನಾಟಕ ತಂಡದಲ್ಲಿ ಕೆ.ಸಿ ಕಾರಿಯಪ್ಪ, ಪ್ರವೀಣ್ ದುಬೆ, ಶ್ರೇಯಸ್ ಗೋಪಾಲ್, ಜಗದೀಶನ್ ಸುಚಿತ್ IPLನಲ್ಲಿ ಮಿಂಚಿರುವ ಪ್ರತಿಭೆಗಳಾಗಿದ್ದಾರೆ ಅನ್ನೋದು ಮರೆಯುವಂತಿಲ್ಲ.
ಮನೀಷ್, ವಿಜಯ್ ಶಂಕರ್ ನಾಯಕತ್ವಕ್ಕೆ ಪ್ರತಿಷ್ಠೆಯ ಕಣ.!
ಹೌದು..! 2018-19, 2019-20ನೇ ಸಾಲಿನಲ್ಲಿ ಮನೀಷ್ ಪಾಂಡೆ ನೇತೃತ್ವದಲ್ಲಿ ಗೆದ್ದು ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಆಗಿದ್ದ ಕರ್ನಾಟಕ, ಕಳೆದ ಸಾಲಿನಲ್ಲಿ ಕರುಣ್ ನಾಯರ್ ನೇತೃತ್ವದಲ್ಲಿ ಮುಗ್ಗರಿಸಿತ್ತು. ಆದರೀಗ ಮತ್ತೆ ನಾಯಕನ ಜವಾಬ್ದಾರಿ ವಹಿಸಿಕೊಂಡಿರುವ ಮನೀಷ್ ಪಾಂಡೆಗೆ ಮೂರನೇ ಬಾರಿ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿಸುವ ಸವಾಲು ಎದುರಾಗಿದೆ. ಇನ್ನೂ ಕಳೆದ ಆವೃತ್ತಿಯಲ್ಲಿ ದಿನೇಶ್ ಕಾರ್ತಿಕ್ ನಾಯಕತ್ವದಲ್ಲಿ ಚಾಂಪಿಯನ್ ಆಗಿದ್ದ ತಮಿಳುನಾಡಿಗೆ, ಈಗ ವಿಜಯ್ ಶಂಕರ್ ಮುಂದಾಳತ್ವ ವಹಿಸಿಕೊಂಡಿದ್ದು, ಚಾಂಪಿಯನ್ ಪಟ್ಟ ಉಳಿಸಿಕೊಳ್ಳೋದು ಪ್ರತಿಷ್ಠೆಯಾಗಿದೆ.
ಒಟ್ಟಿನಲ್ಲಿ ಉಭಯ ತಂಡಗಳಲ್ಲಿ ಘಟಾನುಘಟಿ ಆಟಗಾರರ ಜೊತೆ ಯಂಗ್ ಟ್ಯಾಲೆಂಟೆಡ್ ಆಟಗಾರರೇ ಇದ್ದು, ಯಾರಿಗೆ ಪ್ರತಿಷ್ಠಿತ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಒಲಿಯುತ್ತೆ ಅನ್ನೋದನ್ನ ಕಾದುನೋಡಬೇಕಿದೆ.