ಮೆಗಾ ಸ್ಟಾರ್ ಚಿರಂಜೀವಿ ಅವರ ಮುಂದಿನ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುವ ಅವಕಾಶ ಟಾಲಿವುಡ್ನ ಯುವ ನಿದೇರ್ಶಕನ ಪಾಲಾಗಿದೆ.
ಹೌದು ರಶ್ಮಿಕಾ ಮಂದಣ್ಣ ಮತ್ತು ನಾಗಶೌರ್ಯ ನಟನೆಯ ”ಛಲೋ” ಮತ್ತು ನಿತಿನ್, ರಶ್ಮಿಕಾ ಮಂದಣ್ಣ ನಟನೆಯ ”ಭೀಷ್ಮ” ಸಿನಿಮಾವನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡ ವೆಂಕಿ ಕುಡುಮುಲ ಚಿರುಗೆ ಆ್ಯಕ್ಷನ್ ಕಟ್ ಹೇಳುವ ಅವಕಾಶವನ್ನು ಪಡೆದ ಯುವ ನಿರ್ದೇಶಕ.

ಸಾಮಾನ್ಯವಾಗಿ ಚಿರು ಹೊಸ ನಿರ್ದೇಶಕರಿಗೆ ಅಷ್ಟು ಸುಲಭವಾಗಿ ಅವಕಾಶ ನೀಡುವುದಿಲ್ಲ. ಆದರೆ ಎರಡೇ ಸಿನಿಮಾಗಳ ಮೂಲಕ ಗಮನ ಸೆಳೆದ ಯುವ ನಿದೇರ್ಶಕನಿಗೆ ಚಿರು ಯೆಸ್ ಅಂದಿರುವುದು ಅಚ್ಚರಿಗೆ ಕಾರಣವಾಗಿದೆ. ಸದ್ಯ ಚಿರಂಜೀವಿ ‘ಗಾಡ್ಫಾದರ್’, ‘ಭೋಲಾ ಶಂಕರ್’, ‘ವಾಲ್ಟೇರ್ ವೀರಯ್ಯ’ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈ ಮೂರು ಸಿನಿಮಾಗಳು ಮುಗಿದ ನಂತರ ವೆಂಕಿ ಕುಡುಮುಲ ನಿರ್ದೇಶನದಲ್ಲಿ ಚಿರು ಕಾಣಿಸಿಕೊಳ್ಳಲಿದ್ದಾರೆ. ಇನ್ನು ಚಿರುರವರ ಮುಂದಿನ ಸಿನಿಮಾಗೆ ಟಾಲಿವುಡ್ನ ದೊಡ್ಡ ಸಿನಿಮಾ ಸಂಸ್ಥೆಯಾದ ಡಿವಿವಿ ಎಂಟರ್ಪ್ರೈಸಸ್ ಬಂಡವಾಳ ಹೂಡಲಿದೆ.