ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ; ‘ಕಾಂಗ್ರೆಸ್​ಗೆ ಬದ್ಧತೆ ಇಲ್ಲ’ ಎಂದು ಸಿಟಿ ರವಿ ಆಕ್ರೋಶ


ಬೆಂಗಳೂರು: ಮೇಕೆದಾಟು ಯೋಜನೆ ಸಂಬಂಧ ಕಾಂಗ್ರೆಸ್​ ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ. ಈ ವಿಚಾರಕ್ಕೆ ಬಿಜೆಪಿ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ.. ಕಾಂಗ್ರೆಸ್‌ನವರು ರಾಜಕಾರಣಕ್ಕೆ ಮೇಕೆದಾಟು ವಿಚಾರ ಎತ್ತಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಏನೂ ಮಾಡಿಲ್ಲ. ಕಾಂಗ್ರೆಸ್‌ನವರಿಗೆ ಬದ್ಧತೆ ಇಲ್ಲ. ಬದ್ಧತೆ ಇಲ್ಲದೇ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್​ನವರು ನಾವು ಜಾತಿವಾದಿಗಳು ಅಂತ ಆರೋಪ ಮಾಡಿದ್ದಾರೆ. ನಾವು ಜಾತಿವಾದಿಗಳಾಗಿದ್ದಕ್ಕೆ ಹಾಜಬ್ಬ ಅಂತಹವರಿಗೆ ಪದ್ಮ ಪ್ರಶಸ್ತಿ ಕೊಟ್ಟಿದ್ದು. ಇವರ ಮನಸಲಿ ಕೊಳಕು ತುಂಬಿಕೊಂಡಿದೆ. ಎಲ್ಲವೂ ಕೊಳಕು ಕೊಳಕಾಗಿಯೇ ಕಾಣುತ್ತದೆ‌ ಎಂದು ಕಿಡಿಕಾರಿದರು.

ಇದನ್ನೂ ಓದಿ: ತಮಿಳುನಾಡು ವಿರುದ್ಧ ಸಿದ್ದರಾಮಯ್ಯ ಗುಡುಗು; ಮೇಕೆದಾಟು ಯೋಜನೆಗಾಗಿ ‘ಪಾದಯಾತ್ರೆ’

ಬಿಟ್ ಕಾಯಿನ್ ದಂಧೆ ವಿಚಾರಕ್ಕೆ ಪ್ರತಿಕ್ರಿಯಿಸಿ.. ಹಲವು ದಿನಗಳಿಂದ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರ ಬಳಿ ಆಧಾರ ಇದ್ರೆ ತನಿಖಾ ದಳಕ್ಕೆ ಕೊಡಲಿ. ಶ್ರೀಕಿ ಬಂಧನ ಮಾಡಿದ್ದು ಕಾಂಗ್ರೆಸ್‌ನವರು. ವಿಚಾರಣೆ ಮಾಡಿದ್ದು ಬಿಜೆಪಿ. ಅದಕ್ಕೂ ಮೊದಲು ಮಲ್ಯ ಟವರ್​ನಲ್ಲಿ ಶ್ರೀಕಿ ಯಾರ ಜತೆ ಮಜಾ ಮಾಡ್ಕೊಂಡಿದ್ದ? ಯಾವ ಕಾಂಗ್ರೆಸ್ ನಾಯಕರ ಮಗನ ಜತೆ ಇದ್ದ ಅಂತ ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದರು.

ಇದನ್ನೂ ಓದಿ: ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ; ಕಾಂಗ್ರೆಸ್​ ಒತ್ತಡ ಹೇರುವ ತಂತ್ರ ಅನುಸರಿಸ್ತಿದೆ -ಬೊಮ್ಮಾಯಿ ಕಿಡಿ

The post ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ; ‘ಕಾಂಗ್ರೆಸ್​ಗೆ ಬದ್ಧತೆ ಇಲ್ಲ’ ಎಂದು ಸಿಟಿ ರವಿ ಆಕ್ರೋಶ appeared first on News First Kannada.

News First Live Kannada


Leave a Reply

Your email address will not be published. Required fields are marked *