ಯಶ್​​ ಧುಲ್​ ಮಾತ್ರವಲ್ಲ, ರಣಜಿಯಲ್ಲಿ ಭಾರೀ ಇಂಪ್ರೆಸ್​ ಮಾಡಿದೆ ​FIVE ಬೆಸ್ಟ್​ ಇನ್ನಿಂಗ್ಸ್..!


ದೇಶೀಯ ಕ್ರಿಕೆಟ್​ನ ರಾಜ ಎಂದೇ ಕರೆಯಲಾಗುವ ರಣಜಿ ಟ್ರೋಫಿ ಸದ್ದು ಜೋರಾಗಿದೆ. ಸದ್ಯ ಮೊದಲ ಸುತ್ತಿನ ಎಲೈಟ್​ ಪಂದ್ಯಗಳು ಮುಕ್ತಾಯಗೊಂಡಿವೆ. ಆದ್ರೆ ಕೆಲವರ ಇನ್ನಿಂಗ್ಸ್​ಗಳು ಗಮನ ಸೆಳೆದಿದೆ.​ ಯಶ್​​ಧುಲ್​​ ಬ್ಯಾಕ್​​ ಟು ಬ್ಯಾಕ್​ ಸೆಂಚುರಿ ಸಿಡಿಸಿದ್ದರ ಹೊರತಾಗಿಯೂ FIVE ಬೆಸ್ಟ್​ ಇನ್ನಿಂಗ್ಸ್​​, ಇಂಪ್ರೆಸ್ಸಿವ್​​​ ಆಗಿವೆ.

ರಣಜಿ ಟ್ರೋಫಿಯಲ್ಲಿ ಯುವಕರ ಅಬ್ಬರ ಜೋರಾಗಿದ್ದು, ಆಟಗಾರರ ನಡುವೆ ಬಿಗ್​ ಕಾಂಪಿಟೇಷನ್​ ಏರ್ಪಟ್ಟಿದೆ. ಯಂಗ್​​​​ ಕ್ರಿಕೆಟರ್ಸ್​​​​​​​, ಸೀನಿಯರ್​​ಗಳನ್ನೇ ನಿಬ್ಬೆರಗಾಗಿಸುವ ಪರ್ಫಾಮೆನ್ಸ್​ ನೀಡಿದ್ದು, ದಿಗ್ಗಜರ ದಾಖಲೆಗಳನ್ನೇ ಪುಡಿಗಟ್ಟಿದ್ದಾರೆ. ಅದರಲ್ಲೂ ಅಂಡರ್​​-19 ಕ್ಯಾಪ್ಟನ್​​​ ಯಶ್​ಧುಲ್ ನೀಡಿದ ‘ಫಸ್ಟ್​​​ ಕ್ಲಾಸ್​’ ಇನ್ನಿಂಗ್ಸ್​ಗಳು ವಿಶ್ವದ ಗಮನ ಸೆಳೆದಿದೆ. ಇದ್ರ​ ಹೊರತಾಗಿ ಟೂರ್ನಿಯಲ್ಲಿ ಇಂತಹ ಟಾಪ್​​-5 ಬೆಸ್ಟ್​​ ಇನ್ನಿಂಗ್ಸ್​ಗಳು ಇಲ್ಲಿವೆ ನೋಡಿ!

ಸೌರಾಷ್ಟ್ರ ವಿರುದ್ಧ ದ್ವಿಶತಕ ಸಿಡಿಸಿದ ಸರ್ಫರಾಜ್​​​ ಖಾನ್​..!
ಮುಂಬೈ ರಣಜಿ ತಂಡದ ಬ್ಯಾಟ್ಸ್​​​ಮನ್​ ಸರ್ಫರಾಜ್​ ಖಾನ್​ ಮೊದಲ ಪಂದ್ಯದಲ್ಲೇ ಗಮನ ಸೆಳೆದಿದ್ದಾರೆ. ಸೌರಾಷ್ಟ್ರ ಬೌಲರ್​​ಗಳನ್ನು ದಿಟ್ಟವಾಗಿ ಎದುರಿಸಿದ ಈ ಯಂಗ್​​​ ಪ್ಲೇಯರ್​,​ ಭರ್ಜರಿ ದ್ವಿಶತಕ ಅಂದರೆ 275 ರನ್​ ಸಿಡಿಸಿ ಸೆಂಟರ್​ ಆಫ್​ ಅಟ್ರಾಕ್ಷನ್​ ಆಗಿದ್ದಾರೆ. ಸರ್ಫರಾಜ್​ ಆಟಕ್ಕೆ ದಿಗ್ಗಜರೇ ಶಹಬ್ಬಾಸ್​ಗಿರಿ ನೀಡಿದ್ದಾರೆ.

ಶತಕ ಸಿಡಿಸಿ ಫಾರ್ಮ್​ಗೆ ಬಂದ ಅಜಿಂಕ್ಯ ರಹಾನೆ..!
ಸತತ ವೈಫಲ್ಯದಿಂದ ಭಾರತ ಟೆಸ್ಟ್​ ತಂಡದಿಂದ ಕೈಬಿಡಲಾದ ಅಜಿಂಕ್ಯ ರಹಾನೆ ಮುಂಬೈ ತಂಡದ ಪರ ಆಡ್ತಿದ್ದಾರೆ. ರಾಷ್ಟ್ರೀಯ ತಂಡಕ್ಕೆ ದೂರವಾದ ಬೆನ್ನಲ್ಲೆ ತನಗೆ ಎದುರಾದ ದೇಶೀ ಅಗ್ನಿಪರೀಕ್ಷೆಯಲ್ಲಿ ರಹಾನೆ ಸೆಂಚೂರಿ ಬಾರಿಸಿ, ಟೀಮ್​ ಇಂಡಿಯಾ ಸೆಲೆಕ್ಟರ್​ಗಳಿಗೆ IAM FIT ಎಂಬ ಸಂದೇಶವನ್ನೂ ರವಾನಿಸಿದ್ದಾರೆ.

ಸ್ಫೋಟಕ 194 ರನ್​ ಸಿಡಿಸಿದ ಶಾರೂಖ್​ ಖಾನ್​!
ಡೆಲ್ಲಿ ವಿರುದ್ಧ ತಮಿಳುನಾಡು ತಂಡದ ಆಲ್​ರೌಂಡರ್​​ ಶಾರೂಖ್​ ಖಾನ್ ಸಿಡಿಸಿದ ಸ್ಫೋಟಕ ಶತಕ, ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ಕೇವಲ 148 ಎಸೆತಗಳಲ್ಲಿ 194 ರನ್​ ಕಲೆ ಹಾಕಿದ ಶಾರೂಖ್​​, ದ್ವಿಶತಕದ ಅಂಚಿನಲ್ಲಿ ಎಡವಿದ್ರು. ಶಾರೂಖ್​​ರ ಬಿಗ್​​ ಇನ್ನಿಂಗ್ಸ್​​​ ಬಗ್ಗೆ ಎಲ್ಲೆಡೆ ಟಾಕ್​ ನಡೀತಿದ್ದು, ಭಾರತಕ್ಕೆ ಆಯ್ಕೆ ಮಾಡೋಕೆ ಚಿಂತನೆ ಕೂಡ ನಡೀತಿದೆ.

ಕನ್ನಡಿಗನ ಅರ್ಭಟಕ್ಕೆ ರೈಲ್ವೇಸ್​​ ಉಡೀಸ್​..!
ರೈಲ್ವೇಸ್​ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಗ್ರೇಟ್​ ಪರ್ಫಾಮೆನ್ಸ್​​ ನೀಡಿದೆ. ಅದರಲ್ಲೂ ನಾಯಕ ಮನೀಷ್​ ಪಾಂಡೆ, ಸ್ಫೋಟಕ ಇನ್ನಿಂಗ್ಸ್​​​​​ಗೆ ಎದುರಾಳಿ ತತ್ತಿರಿಸ್ತು. ಮಿಡಲ್​ ಆರ್ಡರ್​​ನಲ್ಲಿ ಮೇನ್​ ಪಿಲ್ಲರ್​ ಆಗಿ ನಿಂತ ಮನೀಷ್​, ಮೊದಲ ಇನ್ನಿಂಗ್ಸ್​​ನಲ್ಲಿ ಕೇವಲ 121 ಎಸೆತಗಳಲ್ಲಿ 156 ರನ್ ಚಚ್ಚಿದ್ದು, ಎಲ್ಲರನ್ನ ಇಂಪ್ರೆಸ್​​ ಮಾಡಿದೆ.

ಆಕರ್ಷಿಸಿದ ಹನುಮ ವಿಹಾರಿ ಕ್ಲಾಸಿಕ್​ ಇನ್ನಿಂಗ್ಸ್
ಚಂಡೀಗಢದ ಎದುರು ಹೈದ್ರಾಬಾದ್​ ಇಂಡಿಯಾ ತಂಡದ ಹನುಮ ವಿಹಾರಿ ನೀಡಿದ ಹೈ ಕ್ಲಾಸ್​ ಪ್ರದರ್ಶನ ಭಾರತ ತಂಡದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಮೊದಲ ಇನ್ನಿಂಗ್ಸ್​​ ಅರ್ಧಶತಕ, 2ನೇ ಇನ್ನಿಂಗ್ಸ್​​ನಲ್ಲಿ ಶತಕದ ಸಾಧನೆ ಮಾಡಿದ್ದಾರೆ. ಸದ್ಯ ಶ್ರೀಲಂಕಾದ ಟೆಸ್ಟ್​ ಸರಣಿಗೆ ಆಯ್ಕೆಯಾಗಿರೋ ವಿಹಾರಿ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಇವರಷ್ಟೆ ಅಲ್ಲ, ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್​ ಪೂಜಾರ 91 ರನ್​ ಗಳಿಸಿ ಫಾರ್ಮ್​ಗೆ ಮರಳುವ ವಿಶ್ವಾಸದಲ್ಲಿದ್ದಾರೆ. ಸಕೀಬಲ್​ ಗನಿ ಸಿಡಿಸಿದ ತ್ರಿಶತಕ, ಟಿ.ಕೊಹ್ಲಿ, ಬಬುಲ್​ ಕುಮಾರ್​​, ಎ.ವಸಿಸ್ಠ್​ ಹೀಗೆ ಯುವ ಬ್ಯಾಟ್ಸ್​​ಮನ್​ಗಳು ರನ್​ ಕೊಳ್ಳೆಹೊಡೆದಿದ್ದಾರೆ. ಬ್ಯಾಟ್ಸ್​​​ಮನ್​ಗಳಷ್ಟೆ ಅಲ್ಲದೆ ಬೌಲರ್​​ಗಳು ವಿಕೆಟ್​​​​​ ಬೇಟೆಯಾಡಿದ್ದಾರೆ.

ರಣಜಿ ಮೊದಲ ಪಂದ್ಯದಲ್ಲಿ ಮನೀಷ್​.!

  • ಇನ್ನಿಂಗ್ಸ್​ 02
  • ರನ್​ 180
  • ಎಸೆತ 156
  • 04/06 13/10

ರಣಜಿ ಮೊದಲ ಪಂದ್ಯದಲ್ಲಿ ಸರ್ಫರಾಜ್​

  • ಇನ್ನಿಂಗ್ಸ್​ 01
  • ರನ್​ 275
  • ಎಸೆತ 401
  • 04/06 30/07

ರಣಜಿ ಮೊದಲ ಪಂದ್ಯದಲ್ಲಿ ರಹಾನೆ

  • ಇನ್ನಿಂಗ್ಸ್​ 01
  • ರನ್​ 129
  • ಎಸೆತ 290
  • 04/06 19/02

ರಣಜಿ ಮೊದಲ ಪಂದ್ಯದಲ್ಲಿ ಶಾರೂಖ್​

  • ಇನ್ನಿಂಗ್ಸ್​ 01
  • ರನ್​ 194
  • ಎಸೆತ 148
  • 04/06 20/10

ರಣಜಿ ಮೊದಲ ಪಂದ್ಯದಲ್ಲಿ ವಿಹಾರಿ

  • ಇನ್ನಿಂಗ್ಸ್​ 02
  • ರನ್​ 165
  • ಎಸೆತ 283
  • 04/06 23/00

News First Live Kannada


Leave a Reply

Your email address will not be published. Required fields are marked *