ಆರ್ಸಿಬಿಗೆ ನೂತನ ಹೆಡ್ಕೋಚ್ ನೇಮಕವಾಗಿದೆ. ಇದರ ಬೆನ್ನಲ್ಲೆ ಹೆಚ್ಚು ಚರ್ಚೆ ಆಗ್ತಿರುವ ವಿಷಯ ಅಂದರೆ, ಮುಂದಿನ ಕ್ಯಾಪ್ಟನ್ ಯಾರು ಅನ್ನೋದು. ಅದರಲ್ಲೂ ಇಬ್ಬರ ಹೆರಸನ್ನ ಶಾರ್ಟ್ ಲೀಸ್ಟ್ ಮಾಡಿಕೊಂಡಿರುವ ಆರ್ಸಿಬಿ, ಮೆಗಾ ಹರಾಜಿನಲ್ಲಿ ಖರೀದಿಸೋಕೆ ನಿರ್ಧರಿಸಿದೆ.
IPLನಲ್ಲಿ ಟ್ರೋಫಿ ಗೆಲ್ಲುವ ಕನಸಿನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನೂತನ ಹೆಡ್ಕೋಚ್ ಹೆಸರನ್ನ ಘೋಷಿಸಿದೆ. ಸಂಜಯ್ ಬಂಗಾರ್ ಅವರನ್ನು ಈ ಹುದ್ದೆಗೆ ನೇಮಿಸಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೆ ನಾಯಕನ ಹುಡುಕಾಟದಲ್ಲಿ ಬ್ಯುಸಿಯಾಗಿರುವ ಆರ್ಸಿಬಿ, ಈ ಇಬ್ಬರ ಮೇಲೆ ಕಣ್ಣಿಟ್ಟಿದೆ. ಹೌದು, ನಾಯಕತ್ವಕ್ಕಾಗಿ RCB ಶಾರ್ಟ್ ಲೀಸ್ಟ್ಮಾಡಿಕೊಂಡ ಆಟಗಾರರು ಬೇಱರು ಅಲ್ಲ, KL ರಾಹುಲ್ ಮತ್ತು ಶ್ರೇಯಸ್ ಅಯ್ಯರ್.
ಮೆಗಾ ಹರಾಜಿನಲ್ಲಿ ಈ ಇಬ್ಬರನ್ನೂ ಖರೀದಿಸಿ ನಾಯಕನ ಪಟ್ಟ ನಿಡೋದಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ಯಂತೆ ಆರ್ಸಿಬಿ. ರಾಹುಲ್ - ಅಯ್ಯರ್ ತಮ್ಮ ಫ್ರಾಂಚೈಸಿಗಳನ್ನ ತೊರೆಯುವ ಸುಳಿವು ನೀಡಿದ್ದು, ಹರಾಜಿಗೆ ಲಭ್ಯರಾಗಲಿದ್ದಾರೆ ಎನ್ನಲಾಗ್ತಿದೆ. ಹೀಗಿರುವಾಗ ಆರ್ಸಿಬಿ ರಾಹುಲ್-ಅಯ್ಯರ್ ಪೈಕಿ ಒಬ್ಬರನ್ನ ಖರೀದಿಸಿ ನಾಯಕನ ಪಟ್ಟ ನೀಡಲು ಚಿಂತನೆ ನಡೆಸಿದೆ. ಆ ಮೂಲಕ ಎಲ್ಲಾ ಊಹಾಪೋಹಾಗಳಿಗೆ ತೆರೆ ಎಳೆಯಲು RCB ಮುಂದಾಗಿದೆ.
ಶ್ರೇಯಸ್ ಅಯ್ಯರ್ ಮೊದಲ ಹಂತದ IPLಗೆ ಲಭ್ಯರಿರಲಿಲ್ಲ. ಇಂಜುರಿ ಕಾರಣ IPLನಿಂದ ದೂರ ಉಳಿದಿದ್ರು. ನಂತರ 2ನೇ ಹಂತದ IPLಗೆ ಮರಳಿದ್ರೂ, ನಾಯಕನ ಜವಾಬ್ದಾರಿ ಫ್ರಾಂಚೈಸಿ ರಿಷಭ್ ಪಂತ್ಗೆ ನೀಡಿತ್ತು. ಪಂತ್ ಕೂಡ ಡೆಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ರು. ಹೀಗಾಗಿ ಮುಂದಿನ ಸೀಸನ್ನಲ್ಲೂ ಡೆಲ್ಲಿ ಪಂತ್ಗೆ ಕ್ಯಾಪ್ಟನ್ಸಿ ನೀಡುವ ಒಲವು ತೋರಿದೆ. ಹಾಗಾಗಿ ನಿರಿಕ್ಷೆಯಲ್ಲಿರುವ ಶ್ರೇಯಸ್ ಅಯ್ಯರ್ ಅವರನ್ನ RCB ಸಂಪರ್ಕಿಸಿದೆ ಎನ್ನಲಾಗ್ತಿದೆ.
KL ರಾಹುಲ್ ಕೂಡ ಪಂಜಾಬ್ ಕಿಂಗ್ಸ್ ತೊರೆಯುವುದು ಬಹುತೇಕ ಖಚಿತ. IPL ಮುಗಿದ ಬಳಿಕ ರಾಹುಲ್ ಧನ್ಯವಾದ ಹೇಳಿ ಮಾಡಿದ್ದ ಟ್ವೀಟ್ ಇದನ್ನೇ ಹೇಳುತ್ತಿತ್ತು. ಇದರ ಬೆನ್ನಲ್ಲೇ ಫ್ರಾಂಚೈಸಿಯ ಸಹ ಮಾಲೀಕ ನೆಸ್ ವಾಡಿಯಾ, ಒಬ್ಬ ಆಟಗಾರನ ಮೇಲೆ ಇಡೀ ತಂಡ ಅವಲಂಬಿತವಾಗಿಲ್ಲ ಎಂದು ನೀಡಿದ್ದ ಹೇಳಿಕೆ, ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಇದು ರಾಹುಲ್ರನ್ನ ಉಳಿದುಕೊಳ್ಳುವುದು ಅನುಮಾನ ಎಂಬ ರೀತಿ ಹೇಳಿಕೆ ನೀಡಿದ್ರು. ಹಾಗಾಗಿ ಆರ್ಸಿಬಿ ರಾಹುಲ್ ಮೇಲೆ ಕಣ್ಣಿಟ್ಟಿದೆ.
ಇನ್ನು ಇವರ ಮೇಲೆಯೇ ಆರ್ಸಿಬಿ ಕಣ್ಣಿಡಲು ಕಾರಣ, ಈ ಇಬ್ಬರಿಗೆ IPLನಲ್ಲಿ ನಾಯಕತ್ವ ಅನುಭವ ಇರೋದ್ರಿಂದ. ತಂಡವನ್ನ ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ಹಿನ್ನಲೆ, ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗ್ತಿದೆ. ಇಬ್ಬರೂ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಡ್ ಆಗಲಿದ್ದಾರೆ. ಆದರೆ ಎಷ್ಟಾದರೂ ಸರಿ ಖರೀದಿ ಮಾಡಲೇಬೇಕೆಂಬ ನಿರ್ಧಾರಕ್ಕೆ ಬಂದಿದೆ. ಜೊತೆಗೆ ಭವಿಷ್ಯದ ದೃಷ್ಟಿಯಿಂದ ದೇವದತ್ ಪಡಿಕ್ಕಲ್ಗೂ ನಾಯಕತ್ವ ನೀಡುವ ಬಗ್ಗೆ ಕೂಡ, ಆರ್ಸಿಬಿ ಮ್ಯಾನೇಜ್ಮೆಂಟ್ ಚರ್ಚೆ ನಡೆಸಿದೆ. ಆದರೆ ಯಾರಿಗೆ ಮಣೆ ಹಾಕುತ್ತೆ ಅನ್ನೋದನ್ನ ಕಾದುನೋಡಬೇಕಿದೆ.