ಯಾವುದೇ ಕಾರಣಕ್ಕೂ ಈ ಪ್ರಕರಣವನ್ನು ಕೈ ಬಿಡೋದಿಲ್ಲ; ಎಸ್​.ಆರ್​ ವಿಶ್ವನಾಥ್


ಬೆಂಗಳೂರು: ನನ್ನ ಹತ್ಯೆಗೆ ಸಂಚು ರೂಪಿಸಿದ ಈ ಪ್ರಕರಣವನ್ನು ನಾನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ ಎಂದು ಬಿಜೆಪಿ ಶಾಸಕ ಎಸ್​. ಆರ್​​. ವಿಶ್ವನಾಥ್ ತಿಳಿಸುದ್ದಾರೆ.

ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ನನ್ನ ಬಳಿ ಇದ್ದ ದಾಖಲೆಗಳನ್ನು ನೀಡಿದ್ದೇನೆ ಪೆಂಡ್ರೈವ್​ನ ಒರಿಜನಲ್​ ಕಾಪಿ ಹಸ್ತಾಂತರ ಮಾಡಿದ್ದೇನೆ. ಅವ್ರು ಕರೆದಾಗಲೆಲ್ಲಾ ನಾನು ಬರಬೇಕು ಅಂತ ಹೇಳಿದ್ದಾರೆ. ಸದ್ಯ ಕುಳ್ಳ ದೇವರಾಜ ನನಗೆ ಕ್ಷಮಾಪಣೆ ಪತ್ರ ಕೂಡ ಬರೆದಿದ್ದಾನೆ.  ಆ ತಪ್ಪೊಪ್ಪಿಗೆ ಪತ್ರದಲ್ಲಿ ಆಂಧ್ರದ ಮೂವರ ಹೆಸರನ್ನು ಕೂಡ ಉಲ್ಲೇಖಿಸಿದ್ದಾನೆ ನಾನು ಆ ಕಾಪಿಯನ್ನು ಕೂಡ ಪೊಲೀಸರಿಗೆ ನೀಡಿದ್ದೇನೆ.

ಇನ್ನು ನನ್ನ ದೂರಿನಲ್ಲಿ ಎಲ್ಲರ ಹೆಸರನ್ನು ಹಾಕಿದ್ದೇನೆ. ನಾನು ದಿಢೀರ್​ ​ನೆ ಅವರನ್ನ ಬಂಧಿಸಿ ಒಳಗೆ ಹಾಕಿ ಅಂತ ಹೇಳಲ್ಲ. ಪೊಲೀಸರು ತಮ್ಮ ತನಿಖೆಯನ್ನ ನಡೆಸಲಿ ಇದರಲ್ಲಿ ಯಾರ್ಯಾರಿದ್ದಾರೆ ಅವರೆಲ್ಲ ಹೊರಗೆ ಬರಲಿ.  ಯಾವುದೇ ಕಾರಣಕ್ಕೂ ನನ್ನ ಹತ್ಯೆಗೆ ಸಂಚು ರೂಪಿಸಿದ ಪ್ರಕರಣವನ್ನು ಕೈ ಬಿಡೋದಿಲ್ಲ ಎಂದಿದ್ದಾರೆ.

News First Live Kannada


Leave a Reply

Your email address will not be published. Required fields are marked *