ಯುವಕರ ಟೆಸ್ಟ್​​ ತಂಡ ಕಟ್ಟಲು BCCI ಪ್ಲಾನ್​.. ಮನೆದಾರಿ ಹಿಡೀತಾರಾ ಸೀನಿಯರ್​ ಜೋಡೆತ್ತು?


ಕಿವೀಸ್​ T20 ಸರಣಿಗೆ ಯುವಕರ ತಂಡವನ್ನೇ ಪ್ರಕಟಿಸಿದೆ. ಆ ಮೂಲಕ ಭವಿಷ್ಯದ ತಂಡದ ಕಟ್ಟಲು ತಯಾರಿ ನಡೆಸ್ತಿದೆ. ಇದೀಗ ಟೆಸ್ಟ್​ ತಂಡಕ್ಕೂ ಇದೇ ರೀತಿ ಯೋಜನೆ ರೂಪಿಸಲು ಬಿಸಿಸಿಐ ನಿರ್ಧರಿಸಿದೆ. ಹಾಗಾಗಿ ಈ ಅನುಭವಿ ಬ್ಯಾಟ್ಸ್​​ಮನ್​ಗಳನ್ನ ಕೈ ಬಿಡಲು ಚಿಂತಿಸಿದೆ. ಆ ಆಟಗಾರರು ಯಾರು? ಹೀಗೊಂದು ಪ್ರಶ್ನೆ ಶುರುವಾಗಿದೆ.

ಟೀಮ್​ ಇಂಡಿಯಾ ಟೆಸ್ಟ್​​ ತಂಡದ ಬಲ ಅಂದರೆ, ಅಜಿಂಕ್ಯಾ ರಹಾನೆ ಮತ್ತು ಚೇತೇಶ್ವರ್ ಪೂಜಾರ. ಟೀಮ್​ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದ ಅದೆಷ್ಟೋ ಬಾರಿ ಪಾರು ಮಾಡಿದ್ದು, ಈ ಆಪತ್ಭಾಂದವರೇ. ಸೋಲುವ ಹಂತದಲ್ಲಿದ್ದ ಪಂದ್ಯಗಳನ್ನೂ ಗೆಲ್ಲಿಸಿಕೊಟ್ಟ ಹೆಗ್ಗಳಿಕೆ ಕೂಡ, ಈ ಜೋಡೆತ್ತುಗಳದ್ದೇ. ಆದರೀಗ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್​​ ಸರಣಿಗೆ, ಈ ಅನುಭವಿ ಆಟಗಾರರನ್ನ ಕೈ ಬಿಡಲು, ಬಿಸಿಸಿಐ ಮತ್ತು ಆಯ್ಕೆ ಸಮಿತಿ ನಿರ್ಧರಿಸಿದಂತಿದೆ.

ರಹಾನೆ-ಪೂಜಾರಗೆ ಮುಳುವಾಗಿರೋದು ಕಳಪೆ ಪ್ರದರ್ಶನ.!
ಕಳೆದೆರಡು ವರ್ಷಗಳಿಂದ ಸದ್ದು ಮಾಡುತ್ತಿಲ್ಲ ಈ ಜೋಡೆತ್ತು.!

ಟೀಮ್​ ಇಂಡಿಯಾದ ಈ ಆಪತ್ಭಾಂದವರಿಗೆ ಮುಳುವಾಗಿರೋದು, ಅವರ ಬ್ಯಾಡ್​​​ ಪರ್ಫಾಮೆನ್ಸ್​. ಕಳೆದೆರಡು ವರ್ಷಗಳಲ್ಲಿ ನಡೆದ ದೇಶ-ವಿದೇಶಗಳ ಸರಣಿಗಳಲ್ಲಿ, ತಂಡಕ್ಕೆ ಈ ಇಬ್ಬರೂ ನೆರವಾಗಿದ್ದೇ ಇಲ್ಲ. ಅಷ್ಟರಮಟ್ಟಿಗೆ ಕೆಟ್ಟ​​ ಪ್ರದರ್ಶನ ನೀಡಿದ್ದಾರೆ. 2 ವರ್ಷಗಳಲ್ಲಿ ರಹಾನೆ 20 ಟೆಸ್ಟ್​ ಪಂದ್ಯ​​​ಗಳಲ್ಲಿ 32.16 ಸರಾಸರಿಯಲ್ಲಿ 997 ರನ್​ ಗಳಿಸಿದ್ರೆ, ಪೂಜಾರ ಅಷ್ಟೇ ಪಂದ್ಯಗಳಲ್ಲಿ 30.54 ಸರಾಸರಿಯಲ್ಲಿ, 1008 ರನ್​ ಕಲೆ ಹಾಕಲಷ್ಟೆ ಶಕ್ತರಾಗಿದ್ದಾರೆ.

ಈ ಎರಡು ವರ್ಷಗಳ ಹಿಂದೆ ಈ ಆಪತ್ಭಾಂದವರು, ಪ್ರತಿ ಸರಣಿಯಲ್ಲೂ 50ಕ್ಕೂ ಹೆಚ್ಚು ಸರಾಸರಿ ಹೊಂದುತ್ತಿದ್ರು. ಆದ್ರೀಗ ಈ ಜೋಡೆತ್ತುಗಳ ಬ್ಯಾಟ್​​ ಮಂಕಾಗಿದ್ದು, ರನ್​ ಬರ ಎದುರಿಸುತ್ತಿದ್ದಾರೆ. ತಂಡದಲ್ಲಿ ಚಾನ್ಸ್​​ ಮೇಲೆ ಚಾನ್ಸ್​ ಪಡೆದರೂ ನಿರೀಕ್ಷಿತ ಪ್ರದರ್ಶನ ನೀಡದ ಇವರಿಬ್ಬರಿಗೂ, ಗೇಟ್​​ಪಾಸ್​ ನೀಡುವ ನಿರ್ಧಾರಕ್ಕೆ ಆಯ್ಕೆ ಸಮಿತಿ ಮುಂದಾಗಿದೆ. ಇವರ ಸ್ಲಾಟ್​ಗೆ ಯುವ ಆಟಗಾರರನ್ನ ಕಣಕ್ಕಿಳಿಸೋಕೂ ಮುಂದಾಗಿದೆ. ಈ ಪಟ್ಟಿಯಲ್ಲಿ ಶುಭ್​​ಮನ್​ ಗಿಲ್​, ಮಯಾಂಕ್​ ಅಗರ್​ವಾಲ್​, ಹನುಮ ವಿಹಾರಿ ಇದ್ದಾರೆ.

ಯೆಸ್​​.! ಈ ನಾಲ್ವರ ಹೆಸರು ರಹಾನೆ-ಪೂಜಾರ ಜಾಗದಲ್ಲಿ ಫೈನಲೈಸ್​ ಆಗಿದೆ ಎಂದು ಹೇಳಲಾಗಿದೆ. ಜೊತೆಗೆ ಗೊಂದಲವೂ ಏರ್ಪಟ್ಟಿದೆ. ರೋಹಿತ್​ಗೆ ಜೋಡಿಯಾಗಿ ರಾಹುಲ್​, ಪ್ರೂವ್​ ಮಾಡಿದ್ದು, ಅದ್ಭುತ ಇನ್ನಿಂಗ್ಸ್​ ಕಟ್ಟುವ ಭರವಸೆ ಮೂಡಿಸಿದ್ದಾರೆ. ಇತ್ತ ಮಯಾಂಕ್​ ಮತ್ತು ಗಿಲ್​ ಕೂಡ ಓಪನರ್​ಗಳಾಗಿ ಅಬ್ಬರಿಸಿದ್ದಾರೆ. ಹಾಗೇ ಗಿಲ್​​​ರನ್ನ ಓಪನಿಂಗ್​ ಆಡಿಸಿ ರಾಹುಲ್​​ರನ್ನ ಮಿಡಲ್​ ಆರ್ಡರ್​ನಲ್ಲಿ ಕಣಕ್ಕಿಳಿಸೋಕೂ, ಪ್ಲಾನ್​ ಮಾಡಲಾಗಿದೆ.

ಇನ್ನ ಲೋವರ್​​ ಆರ್ಡರ್​​​​​​​​​​​ನಲ್ಲಿ​ ಬ್ಯಾಟ್​​ ಬೀಸಿದ ಅನುಭವ ಇರುವ​​ ಹನುಮ ವಿಹಾರಿ, ಅದೇ ಸ್ಲಾಟ್​ನಲ್ಲಿ ಫಿಕ್ಸ್​ ಆಗೋ ಸಾಧ್ಯತೆ ಹೆಚ್ಚಿದೆ. ಒಟ್ನಲ್ಲಿ ಟೆಸ್ಟ್ ಸ್ಪೆಷಲಿಸ್ಟ್​ಗಳಿಗೆ ಗೇಟ್​ಪಾಸ್ ನೀಡಲು ಪ್ಲಾನ್ ಮಾಡ್ತಿರುವ ಸೆಲೆಕ್ಟರ್ಸ್​, ಹಿರಿಯರ ಜಾಗಕ್ಕೆ ಯುವ ಆಟಗಾರರನ್ನ ರಿಪ್ಲೇಸ್​ ಮಾಡೋಕೆ ಪ್ಲಾನ್ ಮಾಡ್ತಿದ್ದಾರೆ. ಆದ್ರೆ ಇದು ಸಾಧ್ಯನಾ ಅನ್ನೋದನ್ನ, ಕಾದುನೋಡಬೇಕಿದೆ.

News First Live Kannada


Leave a Reply

Your email address will not be published. Required fields are marked *