ಯೂಥ್​ ಕಾಂಗ್ರೆಸ್​ ಎಲೆಕ್ಷನ್ ಹ್ಯಾಕಿಂಗ್ ವಿಚಾರ​: ‘ಹೈ’​ ಗಮನಕ್ಕೆ ತರಲು ಮುಂದಾದ ‘ಕೈ’ ಲೀಡರ್ಸ್


ಬೆಂಗಳೂರು:ಯೂಥ್ ಕಾಂಗ್ರೆಸ್ ಎಲೆಕ್ಷನ್​ನಲ್ಲಿ ಹ್ಯಾಕಿಂಗ್​ ನಡೆಸಲಾಗಿದೆ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ಗಂಭಿರವಾಗಿ ಪರಿಗಣಿಸಿರುವ ಕೈ ನಾಯಕರು ಈ ವಿಚಾರವನ್ನು ಹೈಕಮಾಂಡ್​ ಗಮನಕ್ಕೆ ತರಲು ಮುಂದಾಗಿದ್ದಾರೆ ಎನ್ನಲಾಗಿದೆ.

ನೆನ್ನೆ ನ್ಯೂಸ್​ಫಸ್ಟ್​ ನಡೆಸಿದ ಸಂದರ್ಶನದಲ್ಲಿ ಯೂಥ್​ ಕಾಂಗ್ರೆಸ್​ ಎಲೆಕ್ಷನ್​ನಲ್ಲಿ ಹ್ಯಾಂಕಿಗ್​ ಮಾಡುವ ಮೂಲಕ ಮತದಾನ ನಡೆಸಲಾಗಿದೆ ಎಂದು ಗೃಹ ಸಚಿವರು ಆರೋಪಿಸಿದ್ದರು. ಅವರ ಈ ಆರೋಪ ಸದ್ಯ ಕಾಂಗ್ರೆಸ್​ ಪಾಳಯದಲ್ಲಿ ತೀವ್ರ ಗದ್ದಲ ಎಬ್ಬಿಸಿದ್ದು ಆರೋಪದ ಪೂರ್ವಾಪರ ತಿಳಿಯುಲು ಹೈಕಮಾಂಡ್​ಗೆ ತಿಳಿಸಲು ಚಿಂತನೆ ನಡೆಸಿದ್ದಾರೆ ಎಂಬ ಮಾತುಗಳಿ ಕೇಳಿ ಬರುತ್ತಿವೆ.

ಇದನ್ನೂ ಓದಿ:ಶ್ರೀಕಿ ಬಳಸಿ ಯೂಥ್​ ಕಾಂಗ್ರೆಸ್​ ಚುನಾವಣೆ ಹ್ಯಾಕ್; ನಲಪಾಡ್​​ ವಿರುದ್ಧ ಗೃಹ ಸಚಿವ ಸ್ಫೋಟಕ ಹೇಳಿಕೆ

ಸದ್ಯ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್​ ಕಾಯಿನ್​ ವಿಚಾರದಲ್ಲಿ ಕೈ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ. ಈ ವೇಳೆಯಲ್ಲಿ ಗೃಹ ಸಚಿವರ ಈ ಆರೋಪ ಕಾಂಗ್ರೆಸ್​ ನಾಯಕರಿಗೆ ಮುಜುಗರ ತಂದಿದಿಟ್ಟಿದೆ. ಹೀಗಾಗಿ ಯೂಥ್ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ನಿಜವಾಗಿಯೂಹ್ಯಾಕಿಂಗ್ ಮಾಡಲಾಗಿತ್ತಾ? ಈ ಕುರಿತು ಸಂಪೂರ್ಣ ತನಿಖೆ ಮಾಡಿಸಬೇಕು. ಈ ವಿಚಾರದಲ್ಲಿ ಹೈಕಮಾಂಡ್​ ಮಧ್ಯ ಪ್ರವೇಶಿಸಬೇಕೆಂದು ಕೈ ನಾಯಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:‘ಸಿದ್ದರಾಮಯ್ಯ ಮಾತನಾಡುವಾಗ ಜೈಕಾರ ಹಾಕಿದ್ದಾರೆ ಅಷ್ಟೇ’ ಜಮೀರ್​ ಡ್ಯಾಮೇಜ್​​ ಕಂಟ್ರೋಲ್

ಇದನ್ನೂ ಓದಿ:ಶ್ರೀಕಿ ಬಳಸಿ ಯೂಥ್​ ಕಾಂಗ್ರೆಸ್​ ಚುನಾವಣೆ ಹ್ಯಾಕ್; ನಲಪಾಡ್​​ ವಿರುದ್ಧ ಗೃಹ ಸಚಿವ ಸ್ಫೋಟಕ ಹೇಳಿಕೆ

The post ಯೂಥ್​ ಕಾಂಗ್ರೆಸ್​ ಎಲೆಕ್ಷನ್ ಹ್ಯಾಕಿಂಗ್ ವಿಚಾರ​: ‘ಹೈ’​ ಗಮನಕ್ಕೆ ತರಲು ಮುಂದಾದ ‘ಕೈ’ ಲೀಡರ್ಸ್ appeared first on News First Kannada.

News First Live Kannada


Leave a Reply

Your email address will not be published. Required fields are marked *