ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರ ಕುಟುಂಬದ ವೈದ್ಯ ಮತ್ತು ಅಪ್ಪುಗೆ ಚಿಕಿತ್ಸೆ ನೀಡಿದ್ದ ರಮಣಶ್ರೀ ಆಸ್ಪತ್ರೆಯ ವೈದ್ಯ ಡಾ.ರಮಣ್ ರಾವ್ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಅಪ್ಪು ಸಾವಿನ ತನಿಖೆ ಆಗ್ರಹಿಸಿ ಅವರ ಅಭಿಮಾನಿಗಳು ಒತ್ತಾಯಿಸುತ್ತಿದ್ದು, ಮುಂಜಾಗ್ರತ ಕ್ರಮವಾಗಿ ಡಾ.ರಮಣ್ ರಾವ್ ನಿವಾಸಕ್ಕೆ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.
ಇವೆಲ್ಲವೂ ನೋವಿನ ಆರೋಪಗಳು
ಇನ್ನು ಅಪ್ಪು ಸಾವಿನ ಕುರಿತು ಎದ್ದಿರುವ ಹಲವಾರು ಪ್ರಶ್ನೆಗಳ ಕುರಿತು ವೈದ್ಯ ಡಾ.ರಮಣ್ ರಾವ್ ನ್ಯೂಸ್ಫಸ್ಟ್ನ ಜೊತೆ ಮಾತನಾಡಿದ್ದು.. ಅಪ್ಪು ಅಗಲಿದ ನೋವಿನಲ್ಲಿರುವ ಅಭಿಮಾನಿಗಳು ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಸಹಜ ಎಂದಿದ್ದಾರೆ. ಇನ್ನು ಯಾವುದೇ ಗಣ್ಯ ವ್ಯಕ್ತಿಯ ದಿಢೀರ್ ಸಾವಾದಾಗ ಇಂತಹ ಪ್ರಕ್ರಿಯೆಗಳು ಬರಲಾರಂಭಿಸುತ್ತವೆ ಎಂದಿದ್ದಾರೆ.
ಅಪ್ಪು ನಾವಿನ ಮುನ್ನ ಪ್ರಥಮ ಚಿಕಿತ್ಸೆಗಾಗಿ ರಮಣಶ್ರೀ ಆಸ್ಪತ್ರೆಗೆ ಬಂದಿದ್ದು, ಅಲ್ಲಿ ನಡೆದ ಪ್ರಕ್ರಿಯೆಗಳ ಕುರಿತು ಅವರು ಸವಿವರವಾಗಿ ಮಾಹಿತಿ ನೀಡಿದ್ದಾರೆ. ಅಂದು ಅಪ್ಪು ಬೆಳಗ್ಗೆ 11-15 ರಂದು ಆಸ್ಪತ್ರೆಗೆ ಬಂದರು. ನಾನು ಎಲ್ಲ ರೀತಿಯ ಟೆಸ್ಟ್ಗಳನ್ನೂ ಮಾಡಿದೆ. ಆದರೆ ಅವರಿಗೆ ಆಗ ಎಲ್ಲವೂ ನಾರ್ಮಲ್ ಇತ್ತು.
ಇನ್ನು ಇಸಿಜಿ ಮಾಡಿದಾಗ ಬಳಲಿರುವುದು ಕಂಡು ಬಂತು. ಆಗ ತಕ್ಷಣವೇ ಕೆಲವೊಂದು ಮಾತ್ರೆ ನೀಡಿ ವಿಕ್ರಂ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದೇನೆ. ಆಗ ತಕ್ಷಣವೇ ಅವರು ಅಲ್ಲಿಂದ ಹೊರಟಿದ್ದಾರೆ. ಇವೆಲ್ಲವೂ ಕೇವಲ 10 ರಿಂದ 15 ನಿಮಿಷಗಳಲ್ಲಿ ಮುಗಿದಿದೆ ಎಂದಿದ್ದಾರೆ.
ಆಂಬ್ಯುಲೈನ್ಸ್ ವೈವಸ್ಥೆ ಮಾಡಲಿಲ್ಲವೇಕೆ?
ಇನ್ನು ವಿಕ್ರಂ ಆಸ್ಪತ್ರೆಗೆ ಆಂಬ್ಯಲೈನ್ಸ್ನಲ್ಲಿ ಏಕೆ ಅಪ್ಪುವನ್ನು ಕಳುಹಿಸಲಿಲ್ಲ ಎಂಬ ಆರೊಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿಕ್ರಂ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಬರಲು 15 ನಿಮಿಷಗಳು ಹಿಡಿಯುತ್ತಿತ್ತು. ಹೀಗಾಗಿ ತತ್ಕ್ಷಣವೇ ಅವರದೇ ಕಾರಿನಲ್ಲಿ ಶಿಫ್ಟ್ ಮಾಡಲಾಯಿತು.
ಅಪ್ಪು ನನಗೆ ಅಪ್ಪಾಜಿ ಎಂದು ಕರೆಯುತ್ತಿದ್ದರು. ಅವರು ನನ್ನ ಮಗನ ಸಮಾನ. ನನ್ನ ಮಗನಿಗೆ ಏನು ಚಿಕಿತ್ಸೆ ನೀಡುತ್ತಿದ್ದೇನೋ ಅದೇ ಚಿಕಿತ್ಸೆಯನ್ನು ಅಪ್ಪುಗೆ ನೀಡಿದ್ದೇನೆ. ಅಪ್ಪು ಆಸ್ಪತ್ರೆಗೆ ಬಂದಾಗ ಯಾವುದೇ ರೀತಿಯಲ್ಲಿ ಕಾಲಹರಣ ಆಗಿಲ್ಲ. ನಾನು ಅಟೆಂಡ್ ಮಾಡಿದ್ದ ಪೆಷೆಂಟ್ಗೆ ರಿಕ್ವೆಸ್ಟ್ ಮಾಡಿಕೊಂಡು ಅಪ್ಪುಗೆ ಟ್ರೀಟ್ಮೆಂಟ್ ಮಾಡಿದ್ದೇನೆ.
ದಿನ ಕಳೆದಂತೆ ಅಪ್ಪುವಿನ ಕುರಿತಾಗಿ ಎಲ್ಲ ವಿಚಾರಗಳು ಅವರ ಅಭಿಮಾನಿಗಳಿಗೆ ಅರ್ಥವಾಗುತ್ತದೆ. ಸದ್ಯ ಅವರು ನೋವಿನಲ್ಲಿರೋದ್ರಿಂದ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಮಂದೆ ಎಲ್ಲವೂ ಸರಿ ಹೋಗುತ್ತೆ ಎಂದಿದ್ದಾರೆ.