ರಾಜ್ಯದಾಚೆಗೂ ಅಪ್ಪು ಶೋಕ.. ಆಂಧ್ರದ ಹಳ್ಳಿಗಳಲ್ಲಿ ಪುನೀತ್​ಗೆ ಭಾವಪೂರ್ಣ ನಮನ


ಆಂಧ್ರ ಪ್ರದೇಶ: ಕನ್ನಡದ ಸ್ಟಾರ್​ ನಟ ಪುನೀತ್​ ರಾಜ್​ಕುಮಾರ್​ ಇಂದಿಗೆ ನಮ್ಮನ್ನಗಲಿ 16 ದಿಗಳು ಕಳೆದಿವೆ. ರಾಜ್ಯಕ್ಕೆ ಅಪ್ಪು ಅಕಾಲಿಕ ನಿಧನದಿಂದ ಬರಸಿಡಿಲು ಬಡಿದಂತಾಗಿದೆ. ಅಪ್ಪು ಇನ್ನಿಲ್ಲದ ನೋವು ರಾಜ್ಯದಾಚೆಯ ಜನರಿಗೂ ತಟ್ಟಿದ್ದು ಆಂಧ್ರ ಪ್ರದೇಶದ ಅನಂತ್​ಪುರ ಜಿಲ್ಲೆಯಲ್ಲಿ ಪುನೀತ್​ ಅಭಿಮಾನಿಗಳು ಪವರ್​ ಸ್ಟಾರ್​ಗೆ ನಮನ ಸಲ್ಲಿಸಿದ್ದಾರೆ.

 

ಅನಂತಪುರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಪವರ್ ​ಸ್ಟಾರ್​ ಭಾವಚಿತ್ರಕ್ಕೆ  ಮೇಣದಬತ್ತಿ ಹಿಡಿದು ಬೆಳಗುವ ಮೂಲಕ ಗೌರವಪೂರ್ವಕ ಸಂತಾಪ ಸೂಚಿಸಲಾಗಿದೆ. ಜೊತೆಗೆ ರಾಯದುರ್ಗ ತಾಲೂಕಿನ ಕೆಲ ಗ್ರಾಮಗಳಲ್ಲಿ ಕೂಡ ಕರುನಾಡ ರಾಜ​ಕುಮಾರ​ನ ಬ್ಯಾನರ್ ಹಾಕಿ ಮೌನಾಚರಣೆ ಸಲ್ಲಿಸಿ ಅಗಲಿದ ನಟನ ಸ್ಮರಣೆ ಮಾಡಿದ್ದಾರೆ.

ಇನ್ನು ಮೊನ್ನೆ ಕೂಡ ದೀಪಾವಳಿ ಹಬ್ಬದ ನಿಮಿತ್ತ ಪಕ್ಕದ ತಮಿಳುನಾಡಿನ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ದೀಪಾವಳ ಹಬ್ಬದ ಆಚರಣೆಯ ನಡುವೆಯೂ ಜನರು ಅಪ್ಪುವಿಗೆ ಶ್ರದ್ದಾಂಜಲಿ ಸಲ್ಲಿಸಿದ್ದರು.

ಇದನ್ನೂ ಓದಿ:ಗೋರೆ ಹಬ್ಬದ ಆಚರಣೆಯಲ್ಲಿ ಪುನೀತ್​ರನ್ನ ನೆನೆದ ತಮಿಳುನಾಡು ಜನರು

News First Live Kannada


Leave a Reply

Your email address will not be published. Required fields are marked *