ಬೆಂಗಳೂರು: ಯುವ ಕಾಂಗ್ರೆಸ್ ನಾಯಕರ ಗಲಾಟೆ ಪಕ್ಷಕ್ಕೆ ಭಾರೀ ಡ್ಯಾಮೇಜ್ ಮಾಡುತ್ತಿದೆ. ಹಿರಿಯ ನಾಯಕರು ಪಾದಯಾತ್ರೆ, ಱಲಿ, ಅಂತ ಜನರ ಮನ ಗೆಲ್ಲಲು ಪ್ರಯತ್ನಿಸುತ್ತಿದ್ರೆ. ಇತ್ತ ಯುವ ನಾಯಕರ ಗಲಾಟೆ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದೆ. ಹಾಗೂ ನಾಯಕರ ಬಿಜೆಪಿ ಪಾಳಯಕ್ಕೆ ಹೊಸ ಅಸ್ತ್ರ ಸಿಕ್ಕಂತಾಗಿದೆ.
ಹೌದು.. ಮಹಮದ್ ಹ್ಯಾರಿಸ್ ನಲಪಾಡ್ ಮತ್ತೆ ಸುದ್ದಿಯಾಗಿದ್ದಾರೆ. ಕಾಂಗ್ರೆಸ್ನ ಯುವ ನಾಯಕ ಸಿದ್ದು ಹಳ್ಳೇಗೌಡನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಆದ್ರೆ ನಲಪಾಡ್ನ ಗಲಾಟೆಯ ರಾದ್ದಾಂತ ಇದೇ ಮೊದಲೇನಲ್ಲ. ಪಬ್ನಲ್ಲಿ ಹುಡುಗನೋರ್ವನಿಗೆ ಈ ಹಿಂದೆ ಮಾರಣಾಂತಿಕವಾಗಿ ಹಲ್ಲೆ ಕೇಸ್ನಿಂದಲೂ ಕೈ ಪಾಳಯ ಮುಜುಗರ ಅನುಭವಿಸಿತ್ತು. ಆದ್ರೆ ಇದೇ ನಲಪಾಡ್ ಇದೀಗ ಮತ್ತೆ ಗಲಾಟೆ ಮಾಡಿಕೊಂಡು ಪಕ್ಷಕ್ಕೆ ತಲೆನೋವು ತಂದಿಟ್ಟಿದ್ದಾರೆ. ಯುವ ನಾಯಕರ ಗಲಾಟೆ ಕೇಸ್ನಿಂದ ಕಾಂಗ್ರೆಸ್ ಕೈ ಕೈ ಹಿಸುಕಿಕೊಳ್ಳುತ್ತಿದೆ. ಹಿರಿಯ ನಾಯಕರು ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ.
‘ಡ್ಯಾಮೇಜ್ ಕಂಟ್ರೋಲ್’ ಕಸರತ್ತು..!
ಮಹಮ್ಮದ್ ನಲಪಾಡ್ ಪ್ರಕರಣದಿಂದ ರಾಜ್ಯ ಕಾಂಗ್ರೆಸ್ ಮುಜುಗರ ತಂದಿದೆ. ಕಾಂಗ್ರೆಸ್ ನಾಯಕರು 2023ರ ಚುನಾವಣೆಗೆ, ಪಾದಯಾತ್ರೆ, ಪಕ್ಷ ಸಂಘಟನೆ ಮುಂದಾಗಿದ್ದರು. ಈ ಸಂದರ್ಭ ನಲಪಾಡ್ ಕೇಸ್ ದೊಡ್ಡದಾದ್ರೆ, ಪಕ್ಷದ ಇಮೇಜ್ಗೆ ಧಕ್ಕೆ ಯಾಗಲಿದೆ. ಹಾಗೂ ಚುನಾವಣೆ ಸಂದರ್ಭದಲ್ಲಿ ವಿರೋಧಿ ಪಕ್ಷಗಳಿಗೆ ಅಸ್ತ್ರವಾಗಲಿದೆ. ಈ ನಿಟ್ಟಿನಲ್ಲಿ ಪ್ರಕರಣ ದೊಡ್ಡದು ಮಾಡೋದು ಬೇಡ ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದಾರೆ. ಹೀಗಾಗಿ ಇಬ್ಬರಿಗೂ ಬುದ್ಧಿ ಹೇಳಿ ಪ್ರಕರಣ ಸುಖಾಂತ್ಯ ಮಾಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.ಕಾಂಗ್ರೆಸ್ನ ಯುವ ನಾಯಕನ ವರ್ತನೆ ರಾಜ್ಯ ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಹೀಗಾಗಿ ಕೈ ನಾಯಕರು ವಿರುದ್ಧ ಟ್ವೀಟ್ ಅಸ್ತ್ರ ಬಳಸಿ ಬಿಜೆಪಿ ವಾಗ್ದಾಳಿ ನಡೆಸಿದೆ.
ಮುಂದಿನ ಬಿಬಿಎಂಪಿ ಹಾಗೂ 2023ರ ಚುನಾವಣಾ ಅಖಾಡಕ್ಕೆ ಕೈ ಸಿದ್ಧತೆ ಮಾಡಿಕೊಳ್ಳುವಾಗಲೇ ಯುವ ನಾಯಕರ ಗಾಲಾಟೆ ಪಕ್ಷಕ್ಕೆ ಟೆನ್ಷನ್ ಮೇಲೆ ಟೆನ್ಷನ್ ಶುರುವಾಗಿದೆ.
ಕಾಂಗ್ರೆಸ್ಗೆ ಬಿಸಿ ತುಪ್ಪ!
- ಚರ್ಚೆ 1 : ದೊಡ್ಡ ಮಟ್ಟದ ಮುಜುಗರದಿಂದ ಪಾರಾಗಲು ‘ಕೈ’ ನಾಯಕರ ಯತ್ನ
- ಚರ್ಚೆ 2 : ನಿತ್ಯ ಇಂತಹ ಘಟನೆಗಳಿಂದ ಬಿಜೆಪಿ ವಿರುದ್ಧದ ಹೋರಾಟಕ್ಕೆ ಹಿನ್ನಡೆ
- ಚರ್ಚೆ 3 : ಬಿಜೆಪಿ ಟ್ವಿಟ್ಟರ್ನಲ್ಲಿ ಗುಂಡಾಗಿರಿ ಪದ ಬಳಸಿ ‘ಕೈ’ ಪಡೆಗೆ ಟಾಂಗ್
- ಚರ್ಚೆ 4 : ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಏರುವ ನಲಪಾಡ್ ಆಸೆಗೆ ಹಿನ್ನಡೆ
- ಚರ್ಚೆ 5 : ನಲಪಾಡ್ ವಿಚಾರವಾಗಿ ನಾಯಕರಲ್ಲಿ ಗೊಂದಲ ಮೂಡುವ ಸಾಧ್ಯತೆ
- ಚರ್ಚೆ 6 : ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗಲಿದೆ ನಲಪಾಡ್ ವಿಚಾರ
ಯುವನಾಯಕನ ಗಲಾಟೆ ಪಕ್ಷಕ್ಕೆ ಡ್ಯಾಮೇಜ್ ಆಗೋದಂತೂ ನಿಜ. ಇದನ್ನ ತಡೆಯಲು ನಾಯಕರು ಮುಂದಾಗಿದ್ದಾರೆ. ಬಿಬಿಎಂಪಿ ಚುನಾವಣೆ ಸೇರಿದ್ದಂತೆ 2023ರ ಚುವಾವಣೆ ಸಿದ್ಧತೆಗೆ ಮಾಡಿಕೊಳ್ಳುತ್ತಿರುವಾಗಲೇ ಎದುರಾಳಿ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಡ್ಯಾಮೇಜ್ ಕಂಟ್ರೋಲ್ಗೆ ಏನ್ ನಿರ್ಣಯ ಕೈ ಗೊಳ್ಳುತ್ತೆ ಕಾದು ನೋಡಬೇಕಿದೆ.