ರೋಹಿತ್, ದ್ರಾವಿಡ್​ ಕಾಂಬಿನೇಷನ್​​​ನಲ್ಲಿ ಭಾರತಕ್ಕೆ ಐಸಿಸಿ ಟ್ರೋಫಿ ಪಕ್ಕಾ- ಗೌತಮ್​​ ಗಂಭೀರ್​


2021ರ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕಿಂದು ಕೊನೆಯ ಪಂದ್ಯ. ಇದು ಗೆದ್ದರೂ ಭಾರತ ಲೀಗ್​​ನಿಂದಲೇ ಹೊರ ಬೀಳಲಿದ್ದು, ಐಸಿಸಿ ಟ್ರೋಫಿ ಕನಸು ಈ ಬಾರಿ ಕಮರಿದೆ. ಟೀಮ್​ ಇಂಡಿಯಾ ವಿಶ್ವಕಪ್​​ ಫೈನಲ್​ ಇರಲಿ, ಸೆಮಿ ಫೈನಲ್​​ ಪ್ರವೇಶಿಸುಲ್ಲಿ ವಿಫಲವಾಯ್ತು. ಇದು ಕೋಟ್ಯಂತರ ಕ್ರಿಕೆಟ್​ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

2013ರ ಬಳಿಕ ಟೀಮ್​ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಹಾಗಾಗಿ ಮುಂದಿನ ವರ್ಷ ನಡೆಯುವ T20 ವಿಶ್ವಕಪ್​​ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇನ್ನು ಈ ಬಗ್ಗೆ ಗೌತಮ್​ ಗಂಭೀರ್​​​ ಈ ಬಗ್ಗೆ ಮಾತನಾಡಿದ್ದು, ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಜೋಡಿ ಭಾರತಕ್ಕೆ ಐಸಿಸಿ ಪ್ರಶಸ್ತಿಯನ್ನ ಗೆದ್ದುಕೊಡುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂದಿನ ವರ್ಷ ಟೀಮ್​ ಇಂಡಿಯಾ ಹೊಸ ನಾಯಕ ಮತ್ತು ಹೊಸ ಕೋಚ್‌ನೊಂದಿಗೆ ಟಿ20 ಕ್ರಿಕೆಟ್​​ನಲ್ಲಿ ಕಾಣಿಸಿಕೊಳ್ಳಲಿದೆ. ವಿರಾಟ್ ಕೊಹ್ಲಿಗೆ ಇಂದು ಟಿ20 ನಾಯಕನಾಗಿ ಕೊನೆಯ ಪಂದ್ಯವಾದರೆ, ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಅಧಿಕಾರಾವಧಿ ಕೂಡ ಇಂದೇ ಅಂತ್ಯಗೊಳ್ಳಲಿದೆ.

ಸದ್ಯ ಮುಂದಿನ ನಾಯಕ ಯಾರು ಅನ್ನೋದನ್ನ ಕೂಡ ಚರ್ಚೆ ನಡೀತಿದೆ. ಸದ್ಯ ತಂಡದಲ್ಲಿ ಉಪನಾಯಕನಾಗಿದ್ದ ರೋಹಿತ್​ಗೆ ಈ ಜವಾಬ್ದಾರಿ ವಹಿಸುವುದು ಖಚಿತ. ಹಾಗಾಗಿ ಗಂಭೀರ್​​ ಈ ಹೇಳಿಕೆ ನೀಡಿದ್ದಾರೆ. ರೋಹಿತ್​ ಶರ್ಮಾ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡಕ್ಕೆ ನಾಯಕನಾಗಿ 5 ಬಾರಿ ಟ್ರೋಫಿ ಗೆದ್ದುಕೊಟಿದ್ದಾರೆ. ಇದೇ ರೀತಿ ಭಾರತಕ್ಕೂ ಐಸಿಸಿ ಗೆಲ್ಲಿಸಿಕೊಡುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ನಾಯಕನಾಗಿ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಾರೆ. ಗೇಮ್​ ಪ್ಲಾನ್​, ಸ್ಪಷ್ಟ ಸ್ಟ್ರಾಟರ್ಜಿ, ಬೌಲರ್​​ಗಳ ಬಳಕೆ, ಚಾಣಾಕ್ಷ ನಾಯಕತ್ವ, ಒತ್ತಡದ ಸಂದರ್ಭದಲ್ಲಿ ನಾಯಕನಾಗಿ ತೆಗೆದುಕೊಳ್ಳುವ ನಿರ್ಧಾರಗಳು ಬಹಳ ಅದ್ಭುತವಾಗಿರುತ್ತವೆ. ಇನ್ನು ದ್ರಾವಿಡ್​ ಕೂಡ ಭಾರತ ಎ ಮತ್ತು ಅಂಡರ್​ – 19 ತಂಡವನ್ನ ಮುನ್ನಡಿಸಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಈ ಇಬ್ಬರ ಕಾಂಬಿನೇಷನ್​​ನಡಿ ಶೀಘ್ರದಲ್ಲೇ ಭಾರತಕ್ಕೆ ಐಸಿಸಿ ಒಲಿದು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

The post ರೋಹಿತ್, ದ್ರಾವಿಡ್​ ಕಾಂಬಿನೇಷನ್​​​ನಲ್ಲಿ ಭಾರತಕ್ಕೆ ಐಸಿಸಿ ಟ್ರೋಫಿ ಪಕ್ಕಾ- ಗೌತಮ್​​ ಗಂಭೀರ್​ appeared first on News First Kannada.

News First Live Kannada


Leave a Reply

Your email address will not be published. Required fields are marked *