ಫೆಬ್ರವರಿ 24 ರಿಂದ ನಡೆಯಲಿರುವ ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಸರಣಿಗೆ ಹಿರಿಯ ಆಟಗಾರರಾದ ಅಜಿಂಕ್ಯಾ ರಜಾನೆ, ಚೆತೇಶ್ವರ್ ಪೂಜಾರ ಹಾಗೂ ವೃದ್ಧಿಮಾನ್ ಶಾ, ಇಶಾಂತ್ ಶರ್ಮಾರನ್ನ ಕೈಬಿಡಲಾಗಿದೆ.
ರಹಾನೆ-ಪೂಜಾರಗೆ ಕೊಕ್ ಕೊಡಲು ಕಾರಣ ಏನು..?
ಕಳೆದ ತಿಂಗಳು ನಡೆದ ಸೌತ್ ಆಫ್ರಿಕಾ ಸರಣಿಯಲ್ಲೇ ರಹಾನೆ-ಪೂಜಾರ ಬೆಂಚ್ಗೆ ಸೀಮಿತವಾಗ್ತಾರೆ ಎಂದು ಹೇಳಲಾಗಿತ್ತು. ಹಾಗಿದ್ರೂ ಆಟಗಾರರ ಮೇಲೆ ನಂಬಿಕೆ ಇಟ್ಟಿದ್ದ ಮ್ಯಾನೇಜ್ಮೆಂಟ್ ಅವಕಾಶಗಳ ಮೇಲೆ ಅವಕಾಶ ನೀಡಿತ್ತು. ಆದರೆ ಈ ಹಿರಿಯ ಆಟಗಾರರು ಮ್ಯಾನೇಜ್ಮೆಂಟ್ ನಂಬಿಕೆಯನ್ನ ಉಳಿಸಿಕೊಳ್ಳುವಲ್ಲಿ ವಿಫಲರಾದ್ರು. ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಹಿನ್ನಡೆಗೂ ಕಾರಣರಾದ್ರು. ಹೀಗಾಗಿ ಈ ಇಬ್ಬರನ್ನ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಆಯ್ಕೆಗೆ ಪರಿಗಣಿಸಿಲ್ಲ.