ಶ್ರೀಲಂಕಾ ವಿರುದ್ಧ ಟಿ20 ಸರಣಿ ಹತ್ತಿರವಾದಂತೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಗೊಂದಲಕ್ಕೆ ಸಿಲುಕಿದೆ. ಪ್ರಮುಖವಾಗಿ ನಾಲ್ಕು ಪ್ರಶ್ನೆಗಳು ತಂಡವನ್ನ ಕಾಡ್ತಿದ್ದು, ಅವುಗಳಿಗೆ ಉತ್ತರದ ಹುಡುಕಾಟ ಜೋರಾಗಿ ನಡೆದಿದೆ.
ಇಂಡೋ-ಶ್ರೀಲಂಕಾ ಟಿ20 ಸರಣಿ ಆರಂಭಕ್ಕೆ ಒಂದೇ ಒಂದು ದಿನ ಬಾಕಿ. ಮೊದಲ ಟಿ20 ಕದನಕ್ಕೆ ಲಖನೌ ಸಜ್ಜಾಗಿದ್ದು, ಟೀಮ್ ಇಂಡಿಯಾ ಭರ್ಜರಿ ಸಮರಾಭ್ಯಾಸವನ್ನೂ ಆರಂಭಿಸಿದೆ. ಇದರ ಜೊತೆಗೆ ಪ್ಲೇಯಿಂಗ್ ಇಲೆವೆನ್ ಆಯ್ಕೆ ಕಗ್ಗಂಟು ಮತ್ತೆ ಸೃಷ್ಠಿಯಾಗಿದೆ. ಇರೋ 18 ಆಟಗಾರರಲ್ಲಿ ಆಡೋ 11 ಜನ ಯಾರು ಅನ್ನೋದು ತಲೆನೋವು ಸೃಷ್ಠಿಸಿದೆ.
ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸೋದು ಯಾರು?
ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸೋದು ಕನ್ಫರ್ಮ್. ಆದ್ರೆ, ಹಿಟ್ಮ್ಯಾನ್ ಜೊತೆಗಾರ ಯಾರು ಅನ್ನೋದು ಈಗ ಹುಟ್ಟಿರುವ ಪ್ರಶ್ನೆಯಾಗಿದೆ. ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್ ತಂಡದಲ್ಲಿದ್ದಾರೆ. ವಿಂಡೀಸ್ ಸರಣಿಯಲ್ಲಿ ಆರಂಭಿಕನಾಗಿ ಇಶಾನ್ ಕಿಶನ್ ಇಂಪ್ಯಾಕ್ಟ್ಫುಲ್ ಪ್ರದರ್ಶನ ನೀಡಿಲ್ಲ. ಹೀಗಾಗಿ ಈಗಲಾದ್ರೂ ಋತುರಾಜ್ ಗಾಯಕ್ವಾಡ್ಗೆ ಅವಕಾಶ ಸಿಗುತ್ತಾ ಎಂಬ ಕುತೂಹಲ ಹುಟ್ಟಿದೆ.
ವಿಕೆಟ್ ಕೀಪರ್ ಕೋಟಾದಲ್ಲಿ ಯಾರಿಗೆ ಸ್ಥಾನ?
ಖಾಯಂ ವಿಕೆಟ್ ಕೀಪರ್ ರಿಷಭ್ ಪಂತ್ಗೆ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಇದೀಗ ಇಶಾನ್ ಕಿಶನ್, ಸಂಜು ಸ್ಯಾಮ್ಸನ್ಗೆ ಸ್ಥಾನ ಕಲ್ಪಿಸಲಾಗಿದೆ. ವಿಕೆಟ್ ಕೀಪಿಂಗ್ ಜೊತೆಗೆ ಬ್ಯಾಟಿಂಗ್ ಆರ್ಡರ್ ಅನ್ನೋ ಗಮನದಲ್ಲಿರಿಸಿಕೊಂಡು ಈ ಇಬ್ಬರ ನಡುವೆ ಬೆಸ್ಟ್ ಚಾನ್ಸ್ ಆಯ್ಕೆ ಮಾಡಬೇಕಾದ ಸವಾಲು ಮ್ಯಾನೇಜ್ಮೆಂಟ್ ಮುಂದಿದೆ.
ಸ್ಪಿನ್ನರ್ಗಳ ಆಯ್ಕೆಯಲ್ಲೂ ಇದೆ ಗೊಂದಲ..!
ಟಿ20 ಮಾದರಿಯಲ್ಲಿ ಇಬ್ಬರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯೋದು ಟೀಮ್ ಇಂಡಿಯಾದ ಫಿಕ್ಸ್ಡ್ ಟೆಪ್ಲೇಂಟ್ ಆಗಿದೆ. ಈಗ ತಂಡದಲ್ಲಿ ರವಿ ಬಿಷ್ನೋಯ್, ಕುಲ್ದೀಪ್ ಯಾದವ್, ಯುಜುವೇಂದ್ರ ಚಹಲ್, ರವೀಂದ್ರ ಜಡೇಜಾ ಇದ್ದಾರೆ. ಈ ನಾಲ್ವರಲ್ಲಿ ಯಾರಿಗೆ ಅವಕಾಶ ನೀಡಬೇಕು ಎಂಬ ಗೊಂದಲವೂ ತಂಡದಲ್ಲಿದೆ.
ಇರೋ 6 ವೇಗಿಗಳಲ್ಲಿ ಆಡೋ ಮೂವರು ಯಾರು?
ಬರೋಬ್ಬರಿ 6 ಜನ ವೇಗಿಗಳಿಗೆ ಲಂಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆ ಸಮಿತಿ ಮಣೆ ಹಾಕಿದೆ. ಜಸ್ಪ್ರಿತ್ ಬೂಮ್ರಾ, ಭುವನೇಶ್ವರ್ ಕುಮಾರ್ ಅವರಂತ ಅನುಭವಿಗಳ ನಡುವೆ ಆವೇಶ್ ಖಾನ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ದೀಪಕ್ ಚಹರ್ ರಂತಹ ಯಂಗ್ಸ್ಟರ್ಗಳಿದ್ದಾರೆ. ಇರುವ ಮೂರು ಸ್ಲಾಟ್ಗಳಿಗೆ 6 ಜನರ ನಡುವೆ ಪೈಪೋಟಿ ಇದ್ದು ಮ್ಯಾನೇಜ್ಮೆಂಟ್ನ ಆಯ್ಕೆಯಾರಾಗಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.