ಬೆಂಗಳೂರು: ಅಪ್ಪುವಿನ ದಿಢೀರ್ ಸಾವು ಯಾರಿದಂಲೂ ನಂಬಲೂ ಸಾದ್ಯವಾಗ್ತಿಲ್ಲ ಭೇಟಿ ಮಾಡಿದೋರೆಲ್ಲ ಹೀಗೆ ಆಗಲಿಕ್ಕೆ ಹೇಗೆ ಸಾದ್ಯ ಎಂದು ನೋವು ತೋಡಿಕೊಳ್ತಿದ್ದಾರೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ವಿಕ್ರಂ ಆಸ್ಪತ್ರೆಗೆ ರೆಫರ್ ಮಾಡಿದ್ದೆ ತಪ್ಪಾಯ್ತಾ?
ಇನ್ನು ಪಕ್ಕದಲ್ಲಿ ರಾಮಯ್ಯ ಆಸ್ಪತ್ರೆ ಸೇರಿದಂತೆ ಸಾಕಷ್ಟು ಸೌಲಭ್ಯವುಳ್ಳ ಹಲವಾರು ಆಸ್ಪತ್ರೆಗಳಿದ್ದವು ಆದರೆ ಅವೆಲ್ಲವನ್ನು ಬಿಟ್ಟು ವಿಕ್ರಂ ಆಸ್ಪತ್ರೆಗೆ ರೆಫರ್ ಮಾಡಿದ್ದು ತಪ್ಪಾಯ್ತಾ ಎಂಬ ಮಾತುಗಳಿಗೆ ಉತ್ತರಿಸಿದ ಶಿವಣ್ಣ ಆ ಸಮಯದಲ್ಲಿ ಪಾಪ ಅವರಿಗೂ ಇದು ತಿಳಿದಿಲ್ಲ ಈ ಬಗ್ಗೆ ಏನು ಹೇಳಬೇಕು ತಿಳಿದಿಲ್ಲ ಎಂದಿದ್ದಾರೆ.
ವಿಧಿ ಅಪ್ಪುವಿನ ಜೀವನದಲ್ಲಿ ಆಟ ಆಡೀತು ಯಾವುದೇ ಮೂನ್ಸೂಚನೆ ಕೊಡದೇ ನನ್ನ ತಮ್ಮನನ್ನು ನಮ್ಮಿಂದ ದೂರ ಮಾಡಿಬಿಟ್ಟಿತು. ದೇವರು ಎಲ್ಲರಿಗೂ ಟೈಂ ಕೊಡ್ತಾನೆ ಆದರೆ ಪುನೀತ್ ವಿಷಯದಲ್ಲಿ ಕೇವಲ 10 ನಿಮಿಷ ಟೈಂ ಕೊಟ್ಟಿದ್ದರೆ ಅಪ್ಪು ಇಂದಿಗೆ ನಮ್ ಜೊತೆ ಇರ್ತಿದ್ದ ಎಂದು ಶಿವಣ್ಣ ಭಾವುಕರಾಗಿದ್ದಾರೆ.
ಮರೆಯಾದ ಯುವರತ್ನ: ಅಪ್ಪುಗೆ ನ್ಯೂಸ್ಫಸ್ಟ್ಗೆ ಗೀತ ನಮನ