
ಸ್ಟಾಪ್ ನರ್ಸ್ ಜಯಮಾಲಾ ಬಿಜಾಪುರ
ನಾಲ್ಕು ಮಕ್ಕಳ ರಕ್ಷಣೆ ಮಾಡಿದ ಪೊಲೀಸರು, ನಾಲ್ವರನ್ನು ಸಿದ್ದೇಶ್ವರ ದತ್ತು ಕೇಂದ್ರದಲ್ಲಿರಿಸಿದ್ದಾರೆ. ಇನ್ನೊಂದು 5 ವರ್ಷದ ಹೆಣ್ಣು ಮಗುವನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಬಿಟ್ಟಿದ್ದು, ಯಾರ ಬಳಿ ಮಗುವನ್ನು ಬಿಟ್ಟಿದ್ದಾಳೆ ಎಂದು ಖಾಕಿ ಪಡೆ ಮಾಹಿತಿ ಕಲೆ ಹಾಕುತ್ತಿದೆ.
ವಿಜಯಪುರ: ಕಾನೂನು ಬಾಹೀರವಾಗಿ ಜಿಲ್ಲೆಯಲ್ಲಿ ಅನೈತಿಕವಾಗಿ ವಿವಾಹ ಪೂರ್ವದಲ್ಲಿ ಜನನವಾದ ಮಕ್ಕಳ ಸಾಕಾಣಿಕೆ ದಂಧೆ ನಡೆದಿದೆಯಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಅನಧಿಕೃತವಾಗಿ ಮಕ್ಕಳ ಸಾಕಾಣಿಕೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೈವಾಡ ಕೂಡ ಇದೆ ಎನ್ನಲಾಗುತ್ತಿದೆ. ಚಡಚಣ ತಾಲೂಕಿನ ಜಿಗಜಿವಣಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಪ್ ನರ್ಸ್ ಆಗಿರೋ ಜಯಮಾಲಾ ಬಿಜಾಪುರ ಅನಧಿಕೃತವಾಗಿ ಮಕ್ಕಳನ್ನು ಸಾಕಿರೋ ಮಹಿಳೆ. ನಗರದ ಅಥಣಿ ಗಲ್ಲಿಯ ನಿವಾಸಿಯಾಗಿರೋ ಜಯಮಾಲಾ ಗುತ್ತಿಗೆ ಆಧಾರದ ಮೇಲೆ ಸ್ಟಾಫ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಘಟನೆ ಕುರಿತು ಜಯಮಾಲಾ ವಿರುದ್ದ ಜಿಲ್ಲಾ ಮಕ್ಕಳ ಸಹಾಯವಾಣಿ ಯೋಜನಾ ನಿರ್ದೇಶಕಿ ಸುನಂದಾ ತೋಳಬಂದಿ ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.