ವಿಶ್ವಕಪ್​ಗೆ ತೆರೆ ಬೆನ್ನಲ್ಲೇ ಪಾಕ್​ಗೆ ಅನ್ಯಾಯ ಆಗಿದೆ ಎಂದು ಕ್ಯಾತೆ ತೆಗೆದ ರಾವಲ್ಪಿಂಡಿ ಎಕ್ಸ್​ಪ್ರೆಸ್​


ನೆನ್ನೆ ನ್ಯೂಜಿಲೆಂಡ್​ ವಿರುದ್ಧ ಫೈನಲ್​ ಹಣಾಹಣಿಯಲ್ಲಿ ಗೆದ್ದ ಆಸ್ಟ್ರೇಲಿಯಾ, ಚೊಚ್ಚಲ ಐಸಿಸಿ ಟಿ20 ವಿಶ್ವಕಪ್​ ಕಿರೀಟಕ್ಕೆ ಮುತ್ತಿಕ್ಕಿದೆ. ಕಿವೀಸ್​ ನೀಡಿದ ಸವಾಲಿನ ಗುರಿಯನ್ನ ಚೇಸ್ ಮಾಡಿದ ಆಸಿಸ್​, 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಗೆಲುವಿನ ನಗೆ ಬೀರಿತು.

ಇನ್ನು ಕ್ರಿಕೆಟ್​ ಮಹಾಯುದ್ಧಕ್ಕೆ ತೆರೆ ಬೀಳುತ್ತಿದ್ದಂತೆ ಪಾಕ್​ನ ಮಾಜಿ ವೇಗಿ ಶೋಯೆಬ್​ ಅಖ್ತರ್​ ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನಕ್ಕೆ ಅನ್ಯಾಯ ಎಸಗಲಾಗಿದೆ ಎಂದಿದ್ದಾರೆ. ಪಂದ್ಯದ ಬಳಿಕ ಪ್ರಶಸ್ತಿ ವಿತರಣೆ ಮಾಡಿದ ಐಸಿಸಿ ಆಸ್ಟ್ರೇಲಿಯಾ ಆಟಗಾರ ಡೇವಿಡ್​ ವಾರ್ನರ್​ಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಆದರೆ ಈ ಕುರಿತು ಕ್ಯಾತೆ ಎತ್ತಿರುವ ರಾವಲ್ಪಿಂಡಿ ಎಕ್ಸ್​ಪ್ರೆಸ್​ ಶೋಯೆಬ್​ ಅಖ್ತರ್​ ಐಸಿಸಿ ಟೂರ್ನಿಯಲ್ಲಿ ಪಾಕ್​ ಆಟಗಾರನಿಗೆ ಅನ್ಯಾಯ ಮಾಡಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಟೂರ್ನಿಯಲ್ಲಿ ಅತಿ ಹೆಚ್ಚು ರನ್​ ಕಲೆ ಹಾಕಿದವರ ಪಟ್ಟಿಯಲ್ಲಿ ಪಾಕ್​ ಕ್ಯಾಪ್ಟನ್​ ಬಾಬರ್​ ಅಝಮ್​ 6 ಪಂದ್ಯಗಳಿಂದ 303 ಗಳಿಸಿದ್ದಾರೆ, ಮೊದಲ ಸ್ಥಾನದಲ್ಲಿದ್ದಾರೆ. ಆದರೆ ಡೇವಿಡ್​ ವಾರ್ನರ್​ ಫೈನಲ್​ ಪಂದ್ಯದಲ್ಲಿ ಅಮೋಘ 38 ಎಸೆತಗಳಲ್ಲಿ 53 ರನ್​​ ಗಳಿಸಿ ಒಟ್ಟು 289 ರಣ್​ಗಳಿಂದ ಎರಡನೇ ಸ್ಥಾನದಲ್ಲಿದ್ದರು. ಆದರೆ ಅತಿ ಹೆಚ್ಚು ರನ್​ಗಳಿಸಿದವರ ಪಟ್ಟಿಯಲ್ಲಿದ್ದ ಬಾಬರ್​ ಅಝಮ್​ ಹೆಸರನ್ನು ಕೈಬಿಟ್ಟು ವಾರ್ನರ್​ಗೆ ಪ್ರಶಸ್ತಿಯನ್ನು ನೀಡಿರೋದು ಸರಿಯಲ್ಲ ಎಂದು ಶೋಯೆಬ್​ ಅಖ್ತರ್​ ಹೇಳಿದ್ದಾರೆ.

News First Live Kannada


Leave a Reply

Your email address will not be published. Required fields are marked *