ವಿಶ್ವಕಪ್ ಟೂರ್ನಿಯ ಸತತ 2 ಸೋಲುಗಳಿಗೆ ನಾಯಕ ವಿರಾಟ್ ಕೊಹ್ಲಿಯೇ ಕಾರಣ ಎಂಬ ಮಾತುಗಳು ಕೇಳಿ ಬರ್ತಿವೆ. ಹಾಗಾದ್ರೆ, ತಂಡದ ಸೋಲಿಗೆ ನಾಯಕನೊಬ್ಬನೇ ಜವಾಬ್ದಾರನಾ? ಟೀಮ್ ಮ್ಯಾನೇಜ್ಮೆಂಟ್ಗೆ ಇದಕ್ಕೆ ಸಂಬಂಧವೇ ಇಲ್ವಾ?
‘ಸೋಲಿಗೆ ಕೊಹ್ಲಿ ಮಾತ್ರ ಕಾರಣವಲ್ಲ’
‘ಈ ಸೋಲು ಭಾರತೀಯ ಅಭಿಮಾನಿಗಳಿಗೆ ಭಯಾನಕ ಹ್ಯಾಲೋವಿನ್ ಆಯ್ತು. ಆದ್ರೆ, ವಿರಾಟ್ ಕೊಹ್ಲಿ ಮಾತ್ರ ಟೀಕೆಗಳನ್ನ ಎದುರಿಸುತ್ತಿದ್ದಾರೆ. ಇಲ್ಲಿ ಇಡೀ ತಂಡದ ಆಟಗಾರರು ಹಾಗೂ ಕೋಚ್ಗಳು ಸೋತಿದ್ದಾರೆ. ಕೇವಲ ಒಬ್ಬ ವ್ಯಕ್ತಿಯಲ್ಲ’
ಮೊಹಮದ್ ಅಜರುದ್ದೀನ್, ಮಾಜಿ ನಾಯಕ
ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಲೀಗ್ನಲ್ಲೇ ಹೊರ ಬಿದ್ದಿದೆ. ಇದರ ಬೆನ್ನಲ್ಲೇ, ಸೋಲಿಗೆ ಕೊಹ್ಲಿ ಮಾತ್ರ ಕಾರಣ ಅನ್ನೋ ಅರ್ಥದಲ್ಲೂ ಮಾತುಗಳು ಕೇಳಿ ಬರ್ತಿವೆ. ಆ ಮಾತುಗಳಿಗೆ ಟೀಮ್ ಇಂಡಿಯಾದ ಮಾಜಿ ನಾಯಕ ಅಜರುದ್ದೀನ್ ಹೇಳಿರೋ ಮಾತಿಗಳಿವು. ಅಭ್ಯಾಸ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದ ಭಾರತ, ಸೂಪರ್ 12 ಹಂತದಲ್ಲಿ ಆಡಿದ 2 ಪಂದ್ಯಗಳಲ್ಲೂ ಸೋತಿರೋದು ನಿಜಕ್ಕೂ ಅನ್ ಎಕ್ಸ್ಪೆಕ್ಟೆಬಲ್. ಆದ್ರೆ, ಸೋಲಿಗೆ ನಾಯಕನೊಬ್ಬನೆ ಹೊಣೆ ಅನ್ನೋದು ಎಷ್ಟು ಸರಿ..?
ಮೆಂಟರ್ ಧೋನಿ, ಹೆಡ್ ಕೋಚ್ ಶಾಸ್ತ್ರಿ ಪ್ಲಾನ್ ಫ್ಲಾಫ್..!
ಸೋಲು ಎಂದಿಗೂ ಪಾಠ ಅನ್ನೋ ಮಾತಿದೆ. ಆದ್ರೆ ಟೀಮ್ ಇಂಡಿಯಾ ಪಾಲಿಗೆ ಅದು ಪಾಠವಾಗಲೇ ಇಲ್ಲ. ಪಾಕ್ ವಿರುದ್ಧದ ಪಂದ್ಯದಲ್ಲಿ ಸೋಲುಂಡ ಮೇಲೂ 2ನೇ ಪಂದ್ಯದಲ್ಲಿ ಸಮರ್ಥ ಗೇಮ್ಪ್ಲಾನ್, ಸ್ಪಷ್ಟ ಸ್ಟಾರ್ಟಜಿ, ಕೊಹ್ಲಿ ಕ್ಯಾಂಪ್ನಲ್ಲಿ ಇರಲೇ ಇಲ್ಲ. ಈ ವೈಫಲ್ಯದ ಜವಾಬ್ದಾರಿ ಮೆಂಟರ್ MS ಧೋನಿ, ಹೆಡ್ಕೋಚ್ ರವಿಶಾಸ್ತ್ರಿಯದ್ದಲ್ಲವೇ..? ಎಂಬ ಪ್ರಶ್ನೆ ಶುರುವಾಗಿದೆ.
ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಹೊಣೆಗಾರಿಕೆ ಏನು..?
ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯ ಸೋತಾಗಲೇ ಇಡೀ ಟೀಮ್ ಇಂಡಿಯಾಗೆ ದುಬೈ ಪಿಚ್ನ ಮರ್ಮ ತಿಳಿದಿತ್ತು. 2ನೇ ಪಂದ್ಯದಲ್ಲಿ ಮತ್ತೇ ಮೊದಲು ಬ್ಯಾಟಿಂಗ್ ಮಾಡೋ ಅವಕಾಶ ಸಿಕ್ಕರೆ ಹೇಗೆ ಆಡಬೇಕು ಅನ್ನೋದರ ಬಗ್ಗೆ ಅಭ್ಯಾಸಕ್ಕೆ ಒಂದು ವಾರಗಳ ಅಂತರವೂ ಸಿಕ್ಕಿತ್ತು. ಆದ್ರೆ, ಪಾಕ್ ವಿರುದ್ಧ ಮಾಡಿದ ತಪ್ಪುಗಳೇ ಕಿವೀಸ್ ವಿರುದ್ಧವೂ ಮರುಕಳಿಸಿದ್ವು. ಹೀಗಾಗಿಯೇ ಈಗ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಸಿಕ್ಕ ಅವಕಾಶದಲ್ಲಿ ಮಿಸ್ಟೇಕ್ಸ್ ಮೇಲೆ ವರ್ಕೌಟ್ ಮಾಡಲಿಲ್ವಾ ಎಂಬ ಪ್ರಶ್ನೆ ಹುಟ್ಟಿದೆ.
ಬೌಲಿಂಗ್ ಕೋಚ್ ಭರತ್ ಅರುಣ್ ಮಾಡಿದ್ದೇನು..?
ಕೇವಲ ಬ್ಯಾಟಿಂಗ್ ಕೋಚ್ ಮಾತ್ರವಲ್ಲ, ಬೌಲಿಂಗ್ ಕೋಚ್ ಭರತ್ ಅರುಣ್ ಕಾರ್ಯಕ್ಷಮತೆಯ ಬಗ್ಗೆಯೂ ಪ್ರಶ್ನೆ ಹುಟ್ಟಿದೆ. ಆಡಿದ 2 ಪಂದ್ಯಗಳಲ್ಲಿ ಭಾರತೀಯ ಬೌಲರ್ಗಳು ಕೇವಲ 2 ವಿಕೆಟ್ ಕಬಳಿಸಿರೋದೆ ಈ ಪ್ರಶ್ನೆಯ ಮೂಲವಾಗಿದೆ. ಡ್ಯೂ ಫ್ಯಾಕ್ಟರ್ ಇರುತ್ತೇ ಅನ್ನೋದನ್ನ ಅರಿತಿದ್ದು, ಭರತ್ ಅರುಣ್ ಅದಕ್ಕೆ ಯೋಜನೆಗಳನ್ನ ರೂಪಿಸಲಿಲ್ವಾ? ಅನ್ನೋದು ಕೂಡ ಎಲ್ಲರ ಪ್ರಶ್ನೆಯಾಗಿದೆ.