ವೆಂಕಟೇಶ್ ಅಯ್ಯರ್ ಪರ​​ VVS ಲಕ್ಷ್ಮಣ್  ಬ್ಯಾಟ್​; ಮಾಜಿ ಕ್ರಿಕೆಟಿಗನಿಂದ ‘ಬಂಗಾರ’ದಂಥ ಸಲಹೆ


ವೆಂಕಟೇಶ್ ಅಯ್ಯರ್​ ಅವರನ್ನ ನ್ಯೂಜಿಲೆಂಡ್​ ವಿರುದ್ಧದ ಟಿ20 ಸರಣಿ ಆಯ್ಕೆ ಮಾಡಿರೋದು ಹಲವರ ಟೀಕೆಗಳಿಗೆ ಕಾರಣವಾಗಿದೆ. ಆದರೆ ಅಯ್ಯರ್ ಪರ ಮಾಜಿ ಕ್ರಿಕೆಟಿಗ ಬ್ಯಾಟ್ ಬೀಸಿದ್ದಾರೆ. ಹಾರ್ದಿಕ್​ ಪಾಂಡ್ಯ ಅಲಭ್ಯತೆಯಲ್ಲಿ ವೆಂಕಟೇಶ್​ ಅಯ್ಯರ್, ಮ್ಯಾಚ್​ ಫಿನಿಷರ್​ ಆಗಲಿದ್ದಾರೆ ಎಂದು ಲಕ್ಷ್ಮಣ್ ಹೇಳಿದ್ದಾರೆ.

ವೆಂಕಟೇಶ್ ಅಯ್ಯರ್​​​ಗೆ ಬೆಸ್ಟ್​​ ಆಲ್​​ರೌಂಡರ್ ಆಗುವ ಅವಕಾಶ ಸಿಕ್ಕಿದೆ. ವೆಂಕಟೇಶ್ ಅಯ್ಯರ್ ಐದು ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕೆಂದು ನನ್ನ ಭಾವನೆ. ಅವರೊಂದಿಗೆ ಬೌಲಿಂಗ್​ ಕೂಡ ಮಾಡಿಸಬೇಕು ಎಂದು ಟೀಮ್​ ಮ್ಯಾನೇಜ್​ಮೆಂಟ್​ ಸಲಹೆ ನೀಡಿದ್ದಾರೆ.

ಐಪಿಎಲ್​​ನಲ್ಲಿ ಅದ್ಭುತ ಆಟವಾಡಿದ ಅಯ್ಯರ್​, ರಾಷ್ಟ್ರೀಯ ತಂಡದಲ್ಲಿ ಶಾಶ್ವತವಾಗಿ ನೆಲೆಯೂರಬೇಕೆಂದರೆ ಇದೊಂದು ಅದ್ಭುತ ಅವಕಾಶ. ಯಾವುದೇ ಕಾರಣಕ್ಕೂ ಈ ಅವಕಾಶವನ್ನ ಮಿಸ್​ ಮಾಡಿಕೊಳ್ಳಬಾರದು ಎಂದು ಲಕ್ಷ್ಮಣ್​​ ಹೇಳಿದ್ದಾರೆ. ನವೆಂಬರ್​ 17ರಿಂದ ನ್ಯೂಜಿಲೆಂಡ್ ವಿರುದ್ಧ ಟಿ-20 ಸರಣಿ ಆರಂಭವಾಗಲಿದೆ. ಪ್ರಕಟವಾದ 16 ಸದಸ್ಯರ ತಂಡದಲ್ಲಿ ಆಲ್​​ರೌಂಡರ್​ ವೆಂಕಟೇಶ್​ ಅಯ್ಯರ್ ಆಯ್ಕೆಯಾಗಿದ್ದು, ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡವನ್ನ ಪ್ರತಿನಿಧಿಸಲಿದ್ದಾರೆ.

The post ವೆಂಕಟೇಶ್ ಅಯ್ಯರ್ ಪರ​​ VVS ಲಕ್ಷ್ಮಣ್  ಬ್ಯಾಟ್​; ಮಾಜಿ ಕ್ರಿಕೆಟಿಗನಿಂದ ‘ಬಂಗಾರ’ದಂಥ ಸಲಹೆ appeared first on News First Kannada.

News First Live Kannada


Leave a Reply

Your email address will not be published. Required fields are marked *