ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮ್ಯೂಟೆಂಟ್ ಕೊರೊನಾ ಆತಂಕದ ಬಗ್ಗೆ ಮಾತನಾಡಿ.. ನಿತ್ಯ ಬೆಂಗಳೂರು ವಿಮಾನ ನಿಲ್ದಾಣಕ್ಕೆ 2000 ರಿಂದ 2500 ಪ್ರಯಾಣಿಕರು ವಿದೇಶಗಳಿಂದ ಬರುತ್ತಾರೆ. ಎಲ್ಲರಿಗೂ ಸಂಪೂರ್ಣವಾಗಿ ಟೆಸ್ಟ್ ಮಾಡಬೇಕಿದೆ. ಕಳೆದ ಬಾರಿ ಮಾಡಿದ ಅನುಭವ ಇದೆ, ಯಾವುದೇ ಗೊಂದಲ ಇಲ್ಲ ಎಂದರು.
ಕೋವಿಡ್ ವಾರಿಯರ್ಸ್ ಈಗಾಗಲೇ ಮೊದಲ ಮತ್ತು ಎರಡನೇ ಡೋಸ್ ಪಡೆದಿದ್ದಾರೆ. ಅದರ ಜೊತೆಗೆ ಬೂಸ್ಟರ್ ಡೋಸ್ಗಳನ್ನ ನೀಡುವ ಬಗ್ಗೆ ಚರ್ಚೆ ಮಾಡಲಿದ್ದೇವೆ. ಆರೋಗ್ಯ ಇಲಾಖೆ ಸಿಬ್ಬಂದಿಗೆ ಮೊದಲು ನೀಡಬೇಕೆಂದು ತೀರ್ಮಾನಿಸಿದ್ದೇವೆ. ಕೇರಳ ಬಾರ್ಡರ್ಗಳಲ್ಲಿ ಹೆಚ್ಚಿನ ತಪಾಸಣೆ ಮುಂದುವರೆಸಿದ್ದೇವೆ. ಬೇರೆಡೆ ಡೆಲ್ಟಾ ಬಂದಿದೆ, ಅದರ ಬಗ್ಗೆ ಸಹ ಗಮನಹರಿಸಿದ್ದೇವೆ. ಬೇರೆ ಬೇರೆ ಕಡೆಯಿಂದ ಬಂದವರ ಚಲನವಲನ ಗಮನಿಸುತ್ತಿದ್ದೇವೆ ಎಂದರು. ಇದೇ ವೇಳೆ ವ್ಯಾಕ್ಸಿನ್ ಹಾಕಿಸಿಕೊಳ್ಳದಿದ್ರೆ ಪೆಟ್ರೋಲ್, ಡಿಸೇಲ್ ಕಡಿತ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ರೀತಿಯ ಯಾವುದೇ ನಿರ್ಧಾರಗಳು ನಮ್ಮ ಬಳಿ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಲಾಕ್ಡೌನ್ ಆಗಲ್ಲ, ಆರ್ಥಿಕವಾಗಿ ಜನ ಈಗ ತಾನೇ ಸುಧಾರಿಸಿಕೊಳ್ತಿದ್ದಾರೆ. ಕೆಲವು ಮೆಡಿಕಲ್ ಕಾಲೇಜುಗಳಲ್ಲಿ ಪ್ರತಿಭಟನೆ ನಡೆಯುತ್ತಿವೆ. ಇನ್ನೆರಡು ದಿನಗಳಲ್ಲಿ ಬಗೆಹರಿಸಲು ಸೂಚನೆ ನೀಡಿದ್ದೇನೆ. ಕೊರೊನಾ ಬಗ್ಗೆ ನಾವು ಗಮನಿಸುತ್ತಿದ್ದೇವೆ. ಅದನ್ನ ನೋಡಿ ಕ್ರಿಸ್ಮಸ್ ಹಾಗೂ ನ್ಯೂ-ಇಯರ್ ಸೆಲೆಬ್ರೆಷನ್ ಬಗ್ಗೆ ತೀರ್ಮಾನ ಮಾಡ್ತೇವೆ ಎಂದಿದ್ದಾರೆ.
The post ವ್ಯಾಕ್ಸಿನ್ ಹಾಕಿಸಿಕೊಳ್ಳದಿದ್ರೆ ಪೆಟ್ರೋಲ್, ಡಿಸೇಲ್ ಸಿಗಲ್ವಾ? ಈ ಬಗ್ಗೆ CM ಏನಂದ್ರು..? appeared first on News First Kannada.