ಜ್ಹೀ ಕನ್ನಡದಲ್ಲಿ ಪ್ರಸಾರವಾಗ್ತಾಯಿರವ ನಾಗಿಣಿ-2 ಧಾರಾವಾಹಿ ಮೊನ್ನೆ ಮೊನ್ನೆಯಷ್ಟೆ 400 ಎಪಿಸೋಡ್ಗಳನ್ನ ಕಂಪ್ಲೀಟ್ ಮಾಡಿ ಯಶಸ್ವಿಯಾಗಿ ಮುನ್ನುಗ್ತಯಿದೆ..ಕಿರುತೆರೆಯಲ್ಲಿ ಅದೆಷ್ಟೋ ಧಾರಾವಾಹಿಗಳು ಬಂದ್ರು ಕೂಡ ರೋಚಕತೆ ಹುಟ್ಟಿಸುವ ಕಥೆಗಳಲ್ಲೊಂದು ನಾಗಿಣಿ. ಯಾವುದೇ ಭಾಷೆ, ಸಿನಿಮಾ, ಸೀರಿಯಲ್ ಆದ್ರೂ ಅಲ್ಲಿ ನಾಗಿಣಿ ಇದಾಳೆ ಅಂದ್ರೆ ಅದ್ರ ಸಂಚಲನವೇ ಬೇರೆ.
ನಾಗಿಣಿ 2 ಧಾರಾವಾಹಿಯಲ್ಲಿ ಪ್ರತಿ ಪಾತ್ರಕ್ಕೂ ಕೂಡ ಅದರದ್ದೆಯಾದ ಪಾಮುಖ್ಯತೆಯಿದೆ.. ಆದ್ರೇ ಇಡೀ ಕತೆ ಶಿವಾನಿ ಹಾಗೂ ತ್ರಿಶೂಲ್ ಸುತ್ತ ಹೆಣೆಯಲಾಗಿದ್ದು, ಜನ್ಮ ಜನ್ಮಾಂತರದ ಬಂಧವನ್ನ ಬಿಚ್ಚಿಡುವ ಬ್ಯೂಟಿಫುಲ್ ಲವ್ ಸ್ಟೋರಿ ಇದೆ. ಆಗಾಗ ಒಂದಲ್ಲಾ ಒಂದು ಸುದ್ದಿಯಲ್ಲಿ ಸದ್ದು ಮಾಡುವ ನಾಗಿಣಿ 2 ಟೀಮ್ನಿಂದ ಮತ್ತೊಂದು ವಿಷಯ ಹೊರಬಿದ್ದಿದೆ.. ಅದು ಏನಪ್ಪಾ ಅಂದ್ರೆ ನಾಗಿಣಿ 2 ಸೀರಿಯಲ್ನ ಪ್ರಮುಖ ಪಾತ್ರ ಅಂದ್ರೆ ಧಮಯಂತಿ ಪಾತ್ರ ನಿಭಾಯಿಸ್ತಾಯಿದ್ದ ಜೆನ್ನಿಫರ್ ಸೀರಿಯಲ್ನಿಂದ ಹೊರ ನೆಡೆದಿದ್ದಾರೆ..
ಹೌದು, ಧಾರಾವಾಹಿ ಶುರುವಿನಿಂದ ಜನ್ನಿಫರ್ ದಮಯಂತಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸ್ತಾಯಿದ್ರು.. ತ್ರಿಶೂಲ್ ತಾಯಿ ಅಂದ್ರೆ ದಿಗ್ವಿಜಯನ ಹೆಂಡತಿ ಪಾತ್ರದಲ್ಲಿ ಜನ್ನಿಫರ್ ಆ್ಯಂಟೊನಿ ಕಾಣಿಸಿಕೊಂಡಿದ್ರು.. ಇದೀಗ ವೈಯಕ್ತಿಕ ಕಾರಣದಿಂದಾಗಿ ರಾಮ್ಜಿ ಅವರ ನಾಗಿಣಿ 2 ಸೀರಿಯಲ್ನಿಂದ ಹೊರ ಬಂದಿದ್ದಾರೆ.
ಇದೀಗ ಜನ್ನಿಫರ್ ಬದಲು ನಟಿ ರೇಖಾ ಸಾಗರ್ ಧಮಯಂತಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ.. ಈಗಾಗಲೆ ರೇಖಾ ನಾಗಿಣಿ 2 ಸೆಟ್ಗೆ ತೆರಳಿ ಶೂಟಿಂಗ್ ಕೂಡ ಶುರುವಾಗಿದೆ. ಸದ್ಯದಲ್ಲಿ ರೇಖಾ ಧಮಯಂತಿ ಪಾತ್ರದ ಮೂಲಕ ನಿಮ್ಮನ್ನು ರಂಜಿಸಲಿದ್ದಾರೆ..
ಇನ್ನೂ ನಾಗಿಣಿ ಸೀರಿಯಲ್ಗೆ ಫಿದಾ ಅಗಾದವ್ರೇ ಇಲ್ಲ. ಅದೇ ಹಾದಿಯಲ್ಲಿ ಬಂದ ನಾಗಿಣಿ-2 ಕೂಡ ಅದೇ ಹವಾ ಕ್ರಿಯೇಟ್ ಮಾಡಿದೆ. ಟ್ವಿಸ್ಟ್ ಮೇಲೇ ಟ್ವಿಸ್ಟ್ ನೀಡಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದೆ.
ಒಟ್ನಲ್ಲಿ ನಾಗಿಣಿ 2 ಟೀಮ್ನಿಂದ ಹೊರ ನೆಡೆದಿರುವ ಧಮಯಂತಿ ಮುಂದೆ ಯಾವ ಪಾತ್ರದಲ್ಲಿ ನಿಮ್ಮ ಮುಂದೆ ಬರಲಿದ್ದಾರೆ ಎಂಬುವುದನ್ನ ಕಾದು ನೋಡ್ಬೇಕು..