ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿದ್ದ ಎನ್ಸಿಬಿ ನಿರ್ದೇಶಕ ಸಮೀರ್ ವಾಂಖೆಡೆಗೆ ಕೋಕ್ ನೀಡಲಾಗಿದೆ. ಡ್ರಗ್ಸ್ ಕೇಸಲ್ಲಿ 25 ಕೋಟಿ ರೂಪಾಯಿ ಸುಲಿಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಮೀರ್ಗೆ ಕೋಕ್ ನೀಡಿ ಆದೇಶಿಸಲಾಗಿದೆ. ಈ ಕೇಸ್ ವರ್ಗಾಯಿಸಿ ತನಿಖೆ ನಡೆಸುವಂತೆ ಎನ್ಸಿಬಿ ಅಧಿಕಾರಿ ಸಂಜಯ್ ಸಿಂಗ್ ಎಂಬುವರಿಗೆ ಸೂಚನೆ ನೀಡಲಾಗಿದೆ.
ಸಮೀರ್ ವಾಂಖೆಡೆಗೆ ವಿರುದ್ಧ ಮುಂಬೈನ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಮತ್ತು ಇತರರನ್ನು ಬಿಟ್ಟುಕಳಿಸುವುದಕ್ಕೆ 25 ಕೋಟಿ ರೂಪಾಯಿ ಸುಲಿಗೆ ಆರೋಪ ಕೇಳಿ ಬಂದಿತ್ತು. ಇದರ ಕುರಿತು ಎನ್ಸಿಬಿ ಪ್ರಧಾನ ಉಪ ನಿರ್ದೇಶಕ, ಮುಖ್ಯ ವಿಜಿಲೆನ್ಸ್ ಅಧಿಕಾರಿ ಗ್ಯಾನೇಶ್ವರ್ ಸಿಂಗ್ ತನಿಖೆ ನಡೆಸಿದ್ದರು.
ಆರ್ಯನ್ ಖಾನ್ ಅನ್ನು ಈ ಪ್ರಕರಣದಿಂದ ಕೈಬಿಡಲು 25 ಕೋಟಿ ರೂಪಾಯಿ ಕೇಳಿದ್ದರು ಎಂಬ ಗಂಭೀರ ಆರೋಪವನ್ನು ಪ್ರಭಾಕರ್ ಸೈಲ್ ಎಂಬಾತ ಮಾಡಿದ್ದರು. ಸೈಲ್ ತಾನು ಈ ಪ್ರಕರಣದ ಮತ್ತೋರ್ವ ಸಾಕ್ಷಿದಾರ ಹಾಗೂ ಎನ್ಸಿಬಿ ರೈಡ್ ನಂತರ ಕಣ್ಮರೆಯಾಗಿರುವ ಕೆಪಿ ಗೋಸಾವಿಗೆ ಬಾಡಿ ಗಾರ್ಡ್ ಎಂದು ಹೇಳಿಕೊಂಡಿದ್ದ.
ಇದನ್ನೂ ಓದಿ: ‘ಹೀಗೆ ಮಾಡಿದ್ರೆ ಮಾತ್ರ ಟೀಂ ಇಂಡಿಯಾ ಗೆಲ್ಲಲು ಸಾಧ್ಯ’- ಸೆಹ್ವಾಗ್ ಕೊಟ್ಟ ಸಲಹೆಯೇನು?
The post ಶಾರುಖ್ ಮಗನನ್ನ ಮುಟ್ಟಿದ್ದೇ ತಪ್ಪಾಯ್ತಾ; ತನಿಖೆಯಿಂದ ನಿಷ್ಠಾವಂತ ವಾಂಖೆಡೆಗೆ ಗೇಟ್ಪಾಸ್ appeared first on News First Kannada.