ಸಂಕಷ್ಟಕ್ಕೆ ಸಿಲುಕಿದ ಧವನ್ ಭವಿಷ್ಯ; ಗಬ್ಬರ್​ ಸಿಂಗ್ ಟಿ20 ಕರಿಯರ್​​ಗೆ ಬಿತ್ತಾ ಬ್ರೇಕ್​​​..?


ನ್ಯೂಜಿಲೆಂಡ್​ ಸರಣಿಗೆ ಈಗಾಗಲೇ ಟೀಮ್​ ಇಂಡಿಯಾ ಪ್ರಕಟಗೊಂಡಿದೆ. ನಿರೀಕ್ಷೆಯಂತೆ ಆಯ್ಕೆ ಸಮಿತಿ ಯುವಕರಿಗೇ ಹೆಚ್ಚು ಆದ್ಯತೆ ನೀಡಿದೆ. ಆದ್ರೆ ಅಟ್ಯಾಕಿಂಗ್​​ ಬ್ಯಾಟಿಂಗ್​ ಹೊಂದಿರುವ ಈತನನ್ನ ಆಯ್ಕೆ ಮಾಡದೆ, ಆತನ ಭವಿಷ್ಯವನ್ನ ಸಂಕಷ್ಟಕ್ಕೆ ಸಿಲುಕಿಸಿದೆ.

ನ್ಯೂಜಿಲೆಂಡ್​ ಟಿ20​ ಸರಣಿಗೆ ಟೀಮ್​ ಇಂಡಿಯಾ ಪ್ರಕಟಗೊಂಡಿದೆ. ಈ ಚುಟುಕು ಕದನಕ್ಕೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಯುವ ಆಟಗಾರರಿಗೆ ಹೆಚ್ಚು ಮಣೆ ಹಾಕಲಾಗಿದೆ. ಕೆಲ ಆಟಗಾರರು ಅಚ್ಚರಿ ಎಂಬಂತೆ ಆಯ್ಕೆಯಾಗಿದ್ದಾರೆ. ಆದರೆ ಇದರ ಮಧ್ಯೆ ಟೀಮ್​ ಇಂಡಿಯಾದ ಅನುಭವಿ ಆಟಗಾರನೊಬ್ಬನ ಭವಿಷ್ಯ, ಸಂಕಷ್ಟಕ್ಕೆ ಸಿಲುಕಿದೆ. ಆ ಆಟಗಾರ ಬೇಱರು ಅಲ್ಲ, ಡ್ಯಾಶಿಂಗ್​ ಓಪನರ್​ ಶಿಖರ್​ ಧವನ್​.

ಶಿಖರ್​ ಧವನ್​ T20 ಕರಿಯರ್​​ಗೆ ಬಿತ್ತಾ ಬ್ರೇಕ್​​​..?
ಯೆಸ್​.. ಇಂಥಹದೊಂದು ಅನುಮಾನ ಸದ್ಯ ಎಲ್ಲರಲ್ಲೂ ಕಾಡ್ತಿದೆ. ನ್ಯೂಜಿಲೆಂಡ್​ ​​ವಿರುದ್ಧದ ಸರಣಿಗೆ ಪ್ರಕಟಗೊಂಡ ತಂಡದಲ್ಲಿ ಸ್ಥಾನ ನೀಡದಿರೋದೇ, ಇದಕ್ಕೆ ಕಾರಣ. ಧವನ್​​ ಶಾರ್ಟ್​​ ಫಾರ್ಮ್ಯಾಟ್​​​​ನಲ್ಲಿ ತಂಡದ ಅವಿಭಾಜ್ಯ ಅಂಗ. ಕನ್ಸಿಸ್ಟೆಂಟ್ ಪ್ರದರ್ಶನದ ಮೂಲಕ ತಂಡದ ಅಪದ್ಬಾಂಧವ ಕೂಡ ಹೌದು. ಆದರೆ ಅದ್ಭುತ ಪ್ರದರ್ಶನದ ನಡುವೆಯೂ, ಕಿವೀಸ್​ ಸರಣಿಗೂ ಆಯ್ಕೆ ಮಾಡದೇ ಇರೋದು,​ ಧವನ್​ ಟಿ20 ಕರಿಯರ್​ ಇಲ್ಲಿಗೆ​​​ ಮುಗೀತಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಇಂಗ್ಲೆಂಡ್​​ ಸರಣಿಯಲ್ಲಿ ಬೆಂಚ್​​​, ವಿಶ್ವಕಪ್​​​ಗೂ ಆಯ್ಕೆಯಾಗಿರಲಿಲ್ಲ ಗಬ್ಬರ್​..!
ಈ ಬಾರಿಯ IPLಗೂ ಮುನ್ನ ನಡೆದ ಇಂಗ್ಲೆಂಡ್​ ವಿರುದ್ಧ ಟಿ20 ಸರಣಿಯಲ್ಲೂ ಧವನ್​​ರನ್ನ ಬೆಂಚ್​​ಗೆ ಸೀಮಿತ ಮಾಡಲಾಗಿತ್ತು. ಬಳಿಕ 14ನೇ ಆವೃತ್ತಿಯ IPL​​ನಲ್ಲಿ ಗಬ್ಬರ್​, ಅಸಾಧಾರಣ ಪ್ರದರ್ಶನ ತೋರಿದ್ರು. ಆದ್ರೂ ಧವನ್​​ರನ್ನ ಟಿ20 ವಿಶ್ವಕಪ್​​ಗೆ ಸೆಲೆಕ್ಟ್​ ಮಾಡಿರಲಿಲ್ಲ. ಇದೀಗ ಕಿವೀಸ್​ ಸರಣಿಗೂ ಅವರನ್ನ ಕೈ ಬಿಡಲಾಗಿದೆ. ಇಂಗ್ಲೆಂಡ್​​ ಸರಣಿಯಲ್ಲಿ ಮುಚ್ಚಿದ ಧವನ್​​ರ T20 ಕರಿಯರ್​​​ ಬಾಗಿಲು, ಇಂದಿಗೂ ತೆರೆದಿಲ್ಲ. ಅಂದರೆ ಇದು ಧವನ್​ರ ವೃತ್ತಿ ಜೀವನ ಅಂತ್ಯದತ್ತ ಸಾಗಿದೆ ಎಂಬುದನ್ನ ಸೂಚಿಸ್ತಿದೆ.

ಈ ವರ್ಷ T20Iನಲ್ಲಿ ಧವನ್​

  • ಪಂದ್ಯ 04
  • ರನ್​ 90
  • ಬೆಸ್ಟ್​​ 46
  • ಸರಾಸರಿ 22.50

14ನೇ ಆವೃತ್ತಿಯ IPLನಲ್ಲಿ ಧವನ್​

  • ಪಂದ್ಯ 16
  • ರನ್​ 587
  • ಬೆಸ್ಟ್​​ 92
  • ಸರಾಸರಿ 39.13

ಭವಿಷ್ಯದ ತಂಡ ಕಟ್ಟುವ ದೃಷ್ಟಿಯಿಂದ ಯುವಕರಿಗೆ ಹೆಚ್ಚು ಮಣೆ..!
ಟೀಮ್​​ ಇಂಡಿಯಾದಲ್ಲಿ ಧವನ್​​​-ರೋಹಿತ್​​​ ಜೋಡಿ ಕೂಡ ಉತ್ತಮ ಓಪನಿಂಗ್​ ನೀಡಿದರೂ, ರಾಹುಲ್​-ರೋಹಿತ್​ ಜೋಡಿಯೇ ಎಲ್ಲರನ್ನೂ ಅಟ್ರ್ಯಾಕ್ಟ್​ ಮಾಡ್ತಿದೆ. ಹಾಗಾಗಿ ಧವನ್​ರನ್ನ ಆಯ್ಕೆ ಮಾಡದಿರಲು, ಇದೂ ಒಂದು ಕಾರಣವಾಗಿದೆ. ಹಾಗಂತ ಧವನ್​ ಅದ್ಭುತ ಪ್ರದರ್ಶನ ನೀಡಿಲ್ಲವೆಂದಲ್ಲ. IPL ಮತ್ತು ಈ ಹಿಂದಿನ ಸರಣಿಗಳಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಭವಿಷ್ಯದ ತಂಡ ಕಟ್ಟುವ ದೃಷ್ಟಿಯಿಂದ BCCI ಯುವಕರತ್ತ ಒಲವು ತೋರಿದೆ.

ಇಶಾನ್ ಕಿಶನ್​, ಋತುರಾಜ್​ ಗಾಯಕ್ವಾಡ್, ವೆಂಕಟೇಶ್​ ಅಯ್ಯರ್, ಅದ್ಭುತ ಆಟದಿಂದ ಧವನ್​​ಗೆ ವಿಲನ್​​​ಗಳಾಗಿ ಮಾರ್ಪಟ್ಟಿದ್ದಾರೆ. ಹೀಗಾಗಿ ಮುಂದಿನ ಸರಣಿಗಳಿಗೂ ಧವನ್​​ ಆಯ್ಕೆ ಅಸಾಧ್ಯ ಅಂತಾನೇ ಹೇಳಲಾಗ್ತಿದೆ. ಹಾಗಾಗಿ ಧವನ್​ ಟಿ20 ಕರಿಯರ್​​​ ಇಲ್ಲಿಗೆ ಮುಗೀತಾ ಅನ್ನೋ ಪ್ರಶ್ನೆ, ಇದೀಗ ಅಭಿಮಾನಿಗಳಲ್ಲಿ ಉದ್ಭವವಾಗಿದೆ.

News First Live Kannada


Leave a Reply

Your email address will not be published. Required fields are marked *