ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಗೂಂಡಾಗಳಿಗೆ ಜಗದ್ಗುರು ಇದ್ದ ಹಾಗೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಗುಡುಗಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹರಿಪ್ರಸಾದ್, ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೆಯಾದ ಬಿಜೆಪಿ ಸರ್ಕಾರ ಇದೆ. ತ್ರಿವರ್ಣ ಧ್ವಜ ಇರೋ ಕಡೆ ಕೇಸರಿ ಬಾವುಟ ಹಾರಿಸ್ತೀನಿ ಅನ್ನೋದು ತಪ್ಪು. ಆ ಮೂಲಕ ನಾವು ರಾಷ್ಟ್ರಧ್ವಜ ಒಪ್ಪಲ್ಲ ಎಂದು ಸ್ಪಷ್ಟವಾದ ಸಂದೇಶ ರವಾನೆ ಮಾಡಿದ್ದಾರೆ.