ಸೂರ್ಯ-ಚಹರ್​ ಬೆನ್ನಲ್ಲೇ ಲಂಕಾ ಟೂರ್ನಿಯಿಂದ ಋತುರಾಜ್ ಔಟ್​​.. ಕನ್ನಡಿಗನಿಗೆ ಖುಲಾಯಿಸ್ತು ಅದೃಷ್ಟ


ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿಯ ಎರಡನೇ ಪಂದ್ಯ ಇಂದು ನಡೆಯಲಿದೆ. ಈ ನಡುವೆ ಟೂರ್ನಿ ಆರಂಭಕ್ಕೂ ಮುನ್ನ ಗಾಯದ ಕಾರಣದಿಂದ ಸ್ಫೋಟಕ ಆಟಗಾರ ಸೂರ್ಯಕುಮಾರ್ ಯಾದವ್​ ಹಾಗೂ ಬೌಲರ್ ದೀಪಕ್​​ ಚಹರ್ ಟೂರ್ನಿಯಿಂದ ಹೊರಬಿದ್ದಿದ್ದರು. ಈ ನಡುವೆ ಎರಡನೇ ಪಂದ್ಯಕ್ಕೂ ಮುನ್ನ ಯುವ ಆಟಗಾರ ಋತುರಾಜ್​ ಗಾಯಕ್ವಾಡ್​​ ಅವರು ಕೂಡ ಗಾಯದ ಸಮಯದಿಂದ ಹೊರಬಿದ್ದಿದ್ದಾರೆ.

ಈ ಕುರಿತು ಬಿಸಿಸಿಐ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಟಿ-20 ಸರಣಿಯಿಂದ ಋತುರಾಜ್​​ ಗಾಯಕ್ವಾಡ್​ ಹೊರಬಿದ್ದಿದ್ದಾರೆ. ಅವರ ಸ್ಥಾನದಲ್ಲಿ ಮಯಾಂಕ್​ ಅರ್ಗವಾಲ್​ ಅವರನ್ನು ರೀಪ್ಲೇಸ್​ ಮಾಡಲಾಗಿದೆ ಎಂದು ತಿಳಿಸಿದೆ. ಇನ್ನು ಋತುರಾಜ್​ ಅವರಿಗೆ ಬೆಂಗಳೂರಿನ ಎನ್​​ಸಿಎಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವರಣೆ ನೀಡಿದೆ.

ಋತುರಾಜ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನ ಇನ್ನು ಟೇಕ್​ಆಫ್​ ಆಗೋದು ಬಾಕಿ ಇದ್ದು, ಈ ನಡುವೆಯೇ ಋತುರಾಜ್​ ಅವರಿಗೆ ಗಾಯದ ಸಮಸ್ಯೆಗಳು ತಲೆನೋವಾಗಿ ಪರಿಣಮಿಸಿದೆ. ಟೀಂ ಇಂಡಿಯಾ ಪರ ಋತುರಾಜ್​ 3 ಟಿ-20 ಪಂದ್ಯಗಳನ್ನಷ್ಟೇ ಆಡಿದ್ದಾರೆ. ಉಳಿದಂತೆ ಧರ್ಮಶಾಲಾದಲ್ಲಿ ಇಂದು ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯ ನಡೆಯಲಿದ್ದು, ಈಗಾಗಲೇ ಮೊದಲ ಟಿ-20ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರೋ ಟೀಂ ಇಂಡಿಯಾ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ.

News First Live Kannada


Leave a Reply

Your email address will not be published. Required fields are marked *