ಸೇನಾಧಿಕಾರಿ, ಪತ್ನಿ, ಮಗು ಸೇರಿ 4 ಯೋಧರ ಸಾಯಿಸಿದ್ದ ಸಂಘಟನೆಯ ಉಗ್ರರು ಫಿನಿಶ್


ನವದೆಹಲಿ: ದಕ್ಷಿಣ ಅರುಣಾಚಲ ಪ್ರದೇಶದಲ್ಲಿ ಮೂವರು NSCN-KYA (National Socialist Council of Nagalim) ಉಗ್ರರನ್ನ ಸೇನೆ ಹೊಡೆದುರುಳಿಸಿದೆ. ಅಸ್ಸಾಂ ರೈಫಲ್ಸ್​ನ 6ನೇ ಸೇನಾ ತುಕಡಿ ಮೂವರು ಉಗ್ರರನ್ನ ಹೊಡೆದು ಹಾಕಿದ್ದು, ಕಾರ್ಯಚರಣೆ ಕಂಟಿನ್ಯೂ ಆಗಿದೆ.

ಮೊನ್ನೆ ಮಣಿಪುರದಲ್ಲಿ ಸೇನಾ ಕಮಾಂಡರ್, ಅವರ ಪತ್ನಿ, ಮಗ ಸೇರಿ ನಾಲ್ವರು ಯೋಧರನ್ನ ಉಗ್ರರು ಸಾಯಿಸಿದ್ದರು. ಇದರ ಪ್ರತೀಕಾರವಾಗಿ 46 ಅಸ್ಸಾಂ ರೈಫಲ್ಸ್​ ಹಲವು ಕಡೆ ದಾಳಿಯನ್ನ ಆಪರೇಷನ್ ಶುರುಮಾಡಿದೆ.

ನವೆಂಬರ್ 13 ರಂದು ಮಣಿಪುರದ ಚುರಾಚಂದಪುರ ಜಿಲ್ಲೆಯ ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿರುವ ಸಿಂಘಾತ್​​ನಲ್ಲಿ ಉಗ್ರರು ದಾಳಿ ಮಾಡಿದ್ದರು. ಇಂಫಾಲ್‌ನಿಂದ 100 ಕಿ.ಮೀ ದೂರದಲ್ಲಿರುವ ದಾಳಿಯ ಸ್ಥಳ ಅತ್ಯಂತ ದುರ್ಗಮ ಪ್ರದೇಶವಾಗಿದೆ. ಕರ್ನಲ್ ವಿಪ್ಲವ್ ತ್ರಿಪಾಠಿ ಅಸ್ಸಾಂ ರೈಫಲ್ಸ್​​ನ ಕಮಾಂಡಿಂಗ್ ಆಫೀಸರ್ ಆಗಿದ್ದು, ಪತ್ನಿ, ಮಗ ಹಾಗೂ ಬೆಂಗಾವಲು ಪಡೆಯೊಂದಿಗೆ ಸೇನಾ ಶಿಬಿರದಿಂದ ವಾಪಸ್ಸಾಗುತ್ತಿದ್ದಾಗ ದಾಳಿ ನಡೆದಿತ್ತು. ರಸ್ತೆಯಲ್ಲಿ ಐಇಡಿ ಸ್ಫೋಟಿಸಿ, ಗುಂಡಿನ ಮಳೆಗರೆದ ಪರಿಣಾಮ ಸೇನಾಧಿಕಾರಿ, ಪತ್ನಿ, ಮಗ ಸೇರಿ 4 ಯೋಧರು ಹುತಾತ್ಮರಾಗಿದ್ದರು.

ಇದನ್ನೂ ಓದಿ: ಸೇನಾಧಿಕಾರಿ, ಪತ್ನಿ, ಮಗು ಸೇರಿ 4 ಯೋಧರು ಹುತಾತ್ಮ; ರಕ್ಕಸ ದಾಳಿಯ ಹೊಣೆ ಹೊತ್ತ PLA, MNPF

 

News First Live Kannada


Leave a Reply

Your email address will not be published. Required fields are marked *