ಭಾರತೀಯ ವಾಯು ಸೇನೆ Mi-17V5 ಹೆಲಿಕಾಪ್ಟರ್ ತಮಿಳುನಾಡಿನಲ್ಲಿ ಅಪಘಾತಕ್ಕೀಡಾಗಿದೆ. ಇಂದು ಸಂಭವಿಸಿದ ಹೆಲಿಕಾಪ್ಟರ್ ದುರ್ಘಟನೆಯಲ್ಲಿ ಬರೋಬ್ಬರಿ 4 ಮಂದಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಸಂಬಂಧ ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ಸೇನಾ ಹೆಲಿಕಾಪ್ಟರ್ ಕ್ಲಾಶ್ ಬಗ್ಗೆ ಸಂಪುಟ ಸಭೆಗೂ ಮುನ್ನವೇ ಮೋದಿ ಕಂಪ್ಲೀಟ್ ಮಾಹಿತಿ ಪಡೆದುಕೊಂಡಿದ್ದಾರೆ. ದುರಂತ ಹೇಗಾಯ್ತು? ಏನಾಗುತ್ತಿದೆ? ಎಂದು ಇಂಚಿಂಚೂ ಮಾಹಿತಿ ಮೋದಿಗೆ ರಾಜನಾಥ್ ಸಿಂಗ್ ನೀಡುತ್ತಿದ್ದಾರೆ. ಅಲ್ಲದೇ ಈ ಸಂಬಂಧ ಈಗ ಸಂಪುಟ ಸಭೆ ನಡೆಯುತ್ತಿದ್ದು, ರಾಜನಾಥ್ ಸಿಂಗ್ ಅವರು ಮಧ್ಯೆಯೇ ಎದ್ದು ಹೊರಟು ಎನ್ನಲಾಗಿದೆ.