ಬೆಂಗಳೂರು: ಸೈಟ್ ಕೊಡಿಸುವುದಾಗಿ ಹೇಳಿ ಕೋಟ್ಯಾಂತರ ರೂಪಾಯಿ ಹಣ ವಂಚನೆ ಪ್ರಕರಣದಲ್ಲಿ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಅಮಾಯಕರಿಗೆ ಸೈಟ್ ಕೊಡಿಸುತ್ತೇನೆ ಎಂದು ಹಣ ಪೀಕುತ್ತಿದ್ದ ಡಿ ಗ್ರೂಪ್ ಲೇಔಟ್ ಅಧ್ಯಕ್ಷ ನಟರಾಜ್ ಎಂಬಾತನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮೊದಲು ಸೈಟ್ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ಹಣ ಪೀಕುತ್ತಿದ್ದ. ನಂತರ ಒಂದು ಸೈಟ್ ಅನ್ನು ಮೂರು ಜನರ ಹೆಸರಿಗೆ ಮಾಡಿಸುತ್ತಿದ್ದ. ಬಳಿಕ ಸೆಟಲ್ಮೆಂಟ್ ಎಂದು ಮತ್ತೆ ಹಣ ಕೀಳುತ್ತಿದ್ದ ಈತನ ವಿರುದ್ಧ 10ಕ್ಕೂ ಕೇಸುಗಳು ಇವೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆಯೇ ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.