ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯರನ್ನ ಕೈ ಬಿಡಲು ಕಾರಣ ಏನೆಂಬ ಪ್ರಶ್ನೆಗೆ ಕೆ.ಎಲ್ರಾಹುಲ್ ಉತ್ತರಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಕೆ.ಎಲ್ ರಾಹುಲ್, ನನಗೂ ಹಾರ್ದಿಕ್ ಪಾಂಡ್ಯರನ್ನ ಕೈಬಿಟ್ಟಿರುವುದಕ್ಕೆ ನಿಜವಾದ ಗೊತ್ತಿಲ್ಲ ಎಂದರು.
ಹಾರ್ದಿಕ್ಗೆ ಏನು ಮಾಡಬೇಕು ಎಂಬುದು ತಿಳಿದಿದೆ. ಅವರಿಗೆ ಎಲ್ಲಾ ವಿಷಯಗಳನ್ನು ಚೆನ್ನಾಗಿ ಅರ್ಥ ಆಗುತ್ತವೆ. ಹೀಗಾಗಿ ನಾನೇನು ಕಾಮೆಂಟ್ ಮಾಡೋಲ್ಲ ಎಂದು ಹೇಳಿದರು.
ನ್ಯೂಜಿಲೆಂಡ್ ವಿರುದ್ಧದ ಭಾರತದ ಸರಣಿಗೆ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಪಡೆದಿಲ್ಲ. ಪಾಂಡ್ಯಗೆ ವಿಶ್ರಾಂತಿ ನೀಡಿಲ್ಲ, ಬದಲಿಕೆ ಬೇಕಂತಲೇ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.