‘ಹಾರ್ದಿಕ್​​ ಪಾಂಡ್ಯ ಅಲ್ಲ, ಟೀಂ ಇಂಡಿಯಾದ ಈ ಆಟಗಾರ ಬೆಸ್ಟ್​ ಫಿನಿಶರ್’


ನವೆಂಬರ್​ 17ರಿಂದ ಪ್ರಾರಂಭವಾಗಲಿರುವ ನ್ಯೂಜಿಲೆಂಡ್​ ಎದುರಿನ ಟಿ20 ಸರಣಿಗೆ ಟೀಮ್​ ಇಂಡಿಯಾವನ್ನ ಪ್ರಕಟಿಸಲಾಗಿದೆ. ಪ್ರಕಟವಾದ 16 ಸದಸ್ಯರ ತಂಡದಲ್ಲಿ ಆಲ್​​ರೌಂಡರ್​ ವೆಂಕಟೇಶ್​ ಅಯ್ಯರ್ ಆಯ್ಕೆಯಾಗಿದ್ದು, ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡವನ್ನ ಪ್ರತಿನಿಧಿಸಲಿದ್ದಾರೆ.

ಇನ್ನು ವೆಂಕಟೇಶ್​​ ಅಯ್ಯರ್​ ಬಗ್ಗೆ, ಮಾಜಿ ಕ್ರಿಕೆಟಿಗ VVS ಲಕ್ಷ್ಮಣ್ ಅವರು ಆಸಕ್ತಿಕರ ವಿಷಯವನ್ನ ಹಂಚಿಕೊಂಡಿದ್ದಾರೆ. ಹಾರ್ದಿಕ್​ ಪಾಂಡ್ಯ ಅಲಭ್ಯತೆಯಲ್ಲಿ ವೆಂಕಟೇಶ್​ ಅಯ್ಯರ್, ಮ್ಯಾಚ್​ ಫಿನಿಷರ್​ ಆಗಲಿದ್ದಾರೆ ಎಂದು ಲಕ್ಷ್ಮಣ್ ಹೇಳಿದ್ದಾರೆ. ವೆಂಕಟೇಶ್ ಅಯ್ಯರ್​​​ಗೆ ಬೆಸ್ಟ್​​ ಆಲ್​​ರೌಂಡರ್ ಆಗುವ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.

ವೆಂಕಟೇಶ್ ಅಯ್ಯರ್ ಐದು ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕೆಂದು ನನ್ನ ಭಾವನೆ. ಅವರೊಂದಿಗೆ ಬೌಲಿಂಗ್​ ಕೂಡ ಮಾಡಿಸಬೇಕು ಎಂದು ಟೀಮ್​ ಮ್ಯಾನೇಜ್​ಮೆಂಟ್​ ಸಲಹೆ ನೀಡಿದ್ದಾರೆ. ಐಪಿಎಲ್​​ನಲ್ಲಿ ಅದ್ಭುತ ಆಟವಾಡಿದ ಅಯ್ಯರ್​, ರಾಷ್ಟ್ರೀಯ ತಂಡದಲ್ಲಿ ಶಾಶ್ವತವಾಗಿ ನೆಲೆಯೂರಬೇಕೆಂದರೆ ಇದೊಂದು ಅದ್ಭುತ ಅವಕಾಶ. ಯಾವುದೇ ಕಾರಣಕ್ಕೂ ಈ ಅವಕಾಶವನ್ನ ಮಿಸ್​ ಮಾಡಿಕೊಳ್ಳಬಾರದು ಎಂದು ಲಕ್ಷ್ಮಣ್​​ ಹೇಳಿದ್ದಾರೆ.

ಇದನ್ನೂ ಓದಿ: ‘ನ್ಯೂಜಿಲೆಂಡ್​​​ನಿಂದ ಭಾರತ ತಂಡ ಈ ಪಾಠ ಕಲಿಯಲೇಬೇಕು’ ಎಂದ ಸೆಹ್ವಾಗ್ ಇನ್ನೇನಂದ್ರು?​​

News First Live Kannada


Leave a Reply

Your email address will not be published. Required fields are marked *