ನವೆಂಬರ್ 17ರಿಂದ ಪ್ರಾರಂಭವಾಗಲಿರುವ ನ್ಯೂಜಿಲೆಂಡ್ ಎದುರಿನ ಟಿ20 ಸರಣಿಗೆ ಟೀಮ್ ಇಂಡಿಯಾವನ್ನ ಪ್ರಕಟಿಸಲಾಗಿದೆ. ಪ್ರಕಟವಾದ 16 ಸದಸ್ಯರ ತಂಡದಲ್ಲಿ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಆಯ್ಕೆಯಾಗಿದ್ದು, ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡವನ್ನ ಪ್ರತಿನಿಧಿಸಲಿದ್ದಾರೆ.
ಇನ್ನು ವೆಂಕಟೇಶ್ ಅಯ್ಯರ್ ಬಗ್ಗೆ, ಮಾಜಿ ಕ್ರಿಕೆಟಿಗ VVS ಲಕ್ಷ್ಮಣ್ ಅವರು ಆಸಕ್ತಿಕರ ವಿಷಯವನ್ನ ಹಂಚಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಅಲಭ್ಯತೆಯಲ್ಲಿ ವೆಂಕಟೇಶ್ ಅಯ್ಯರ್, ಮ್ಯಾಚ್ ಫಿನಿಷರ್ ಆಗಲಿದ್ದಾರೆ ಎಂದು ಲಕ್ಷ್ಮಣ್ ಹೇಳಿದ್ದಾರೆ. ವೆಂಕಟೇಶ್ ಅಯ್ಯರ್ಗೆ ಬೆಸ್ಟ್ ಆಲ್ರೌಂಡರ್ ಆಗುವ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.
ವೆಂಕಟೇಶ್ ಅಯ್ಯರ್ ಐದು ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕೆಂದು ನನ್ನ ಭಾವನೆ. ಅವರೊಂದಿಗೆ ಬೌಲಿಂಗ್ ಕೂಡ ಮಾಡಿಸಬೇಕು ಎಂದು ಟೀಮ್ ಮ್ಯಾನೇಜ್ಮೆಂಟ್ ಸಲಹೆ ನೀಡಿದ್ದಾರೆ. ಐಪಿಎಲ್ನಲ್ಲಿ ಅದ್ಭುತ ಆಟವಾಡಿದ ಅಯ್ಯರ್, ರಾಷ್ಟ್ರೀಯ ತಂಡದಲ್ಲಿ ಶಾಶ್ವತವಾಗಿ ನೆಲೆಯೂರಬೇಕೆಂದರೆ ಇದೊಂದು ಅದ್ಭುತ ಅವಕಾಶ. ಯಾವುದೇ ಕಾರಣಕ್ಕೂ ಈ ಅವಕಾಶವನ್ನ ಮಿಸ್ ಮಾಡಿಕೊಳ್ಳಬಾರದು ಎಂದು ಲಕ್ಷ್ಮಣ್ ಹೇಳಿದ್ದಾರೆ.
ಇದನ್ನೂ ಓದಿ: ‘ನ್ಯೂಜಿಲೆಂಡ್ನಿಂದ ಭಾರತ ತಂಡ ಈ ಪಾಠ ಕಲಿಯಲೇಬೇಕು’ ಎಂದ ಸೆಹ್ವಾಗ್ ಇನ್ನೇನಂದ್ರು?