ಸಾಂಕೇತಿಕ ಚಿತ್ರ
ಹುಬ್ಬಳ್ಳಿ: 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ (arrest) ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಗಣೇಶಪೇಟೆಯ ಅಬ್ದುಲ್ ಬಂಧಿತ ಆರೋಪಿ. 21 ವರ್ಷಗಳ ಹಿಂದೆ ಕಳ್ಳತನ (Theft) ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಶಹರ ಠಾಣೆ ಇನ್ಸ್ಪೆಕ್ಟರ್ ಆನಂದ ಒಣಕುದರಿ ನೇತೃತ್ವದ ತಂಡ ಗೋವಾದಲ್ಲಿ ಬಂಧಿಸಿದೆ. ಹಳೆ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆದರೆ ನಿನ್ನೆ (ನವೆಂಬರ್ 21) ಕಳ್ಳತನ ಪ್ರಕರಣಕ್ಕೆ ತೆರೆಬಿದ್ದಿದ್ದು, ಆರೋಪಿ ಅಬ್ದುಲ್ನನ್ನು ಪೊಲೀಸರು ನಿನ್ನೆ ರಾತ್ರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ತುಮಕೂರು: ಮಲ್ಲಸಂದ್ರ ಗ್ರಾಮದ 4 ಅಂಗಡಿಗಳಲ್ಲಿ ಸರಣಿ ಕಳ್ಳತನ
ತುಮಕೂರು ಗ್ರಾಮಾಂತರ ಭಾಗದ ಮಲ್ಲಸಂದ್ರ ಗ್ರಾಮದ 4 ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದೆ. ಬೇಕರಿ, ಹಾರ್ಡ್ವೇರ್ ಮತ್ತು ಟೀ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. 40 ಸಾವಿರ ಮೌಲ್ಯದ ದಿನಸಿ, 5 ಸಾವಿರ ರೂ. ನಗದು ಕಳವು ಮಾಡಲಾಗಿದ್ದು, ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲಾ ಪೊಲೀಸರಿಂದ ಭರ್ಜರಿ ಬೇಟೆ; 2021ನೇ ಸಾಲಿನಲ್ಲಿ 518 ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು