ಹೊಸಪೇಟೆ ಪ್ರಮುಖ ಸರ್ಕಲ್​​ಗೆ ಪುನೀತ್​​​ ರಾಜ್​​ಕುಮಾರ್​​ ಹೆಸರಿಡುವಂತೆ ಫ್ಯಾನ್ಸ್​ ಒತ್ತಾಯ


ವಿಜಯನಗರ: ಹೊಸಪೇಟೆಯ ಪ್ರಮುಖ ವೃತ್ತಕ್ಕೆ ಮತ್ತು ಜಿಲ್ಲಾ ಕ್ರೀಡಾಂಗಣಕ್ಕೆ ಪುನೀತ್​ ರಾಜ್​ ಕುಮಾರ್​ ಹೆಸರು ಇಡುವಂತೆ ಅಪ್ಪು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್​​ಗೆ ಪತ್ರ ಸಲ್ಲಿಸಿ ಅಭಿಮಾನಿಗಳು ಮನವಿ ಮಾಡಿದ್ದಾರೆ.

ಇದರ ಜೊತೆಗೆ ಉದ್ಯಾನವನ, ಕಲಾ ಮಂದಿರಕ್ಕೂ ಪುನೀತ್ ರಾಜ್‍ಕುಮಾರ್ ಹೆಸರನ್ನು ನಾಮಕರಣ ಮಾಡಿ ಅಂತಾ ಆನಂದ್ ಸಿಂಗ್ ಬಳಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆನಂದ ಸಿಂಗ್​ ಸದ್ಯ ಜನವರಿಗೆ ಒಂದು ಸರ್ಕಲ್​ಗೆ ಪುನಿತ್​ ಹೆಸರನ್ನು ನಾಮಕರಣ ಮಾಡುತ್ತೇವೆ. ಅಲ್ಲದೆ ಕಲಾ ಮಂದಿರಕ್ಕೂ ಸಹ ಅಪ್ಪು ಹೆಸರು ನಾಮಕರಣ ಮಾಡ್ತೇವೆ ಅಂತಾ ಆನಂದ್​ ಸಿಂಗ್​ ಭರವಸೆ ಕೊಟ್ಟಿದ್ದಾರೆ.

News First Live Kannada


Leave a Reply

Your email address will not be published. Required fields are marked *