ಬೆಂಗಳೂರು: ಕನ್ನಡಿಗರ ಪ್ರೀತಿಯ ಪವರ್ಸ್ಟಾರ್ ಅಪ್ಪು ನಮ್ಮನ್ನಗಲಿ 3 ತಿಂಗಳ ಮೇಲಾಯ್ತು. ಆದರೆ ಅಪ್ಪು ಇಲ್ಲಾ ಅನ್ನೋ ನೋವು ಮಾತ್ರ ದಿನಂಪ್ರತಿ ಕಾಡುತ್ತಲೆ ಇರುತ್ತೆ. ಸದ್ಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ನಟ ಅರ್ಜುನ್ ಸರ್ಜಾ ಭೇಟಿ ನೀಡಿ ಪುನೀತ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ದಂಪತಿ ಸಮೇತ ಭೇಟಿ ನೀಡಿದ ಅರ್ಜುನ್ ಸರ್ಜಾ ಅಪ್ಪು ನಿವಾಸದಲ್ಲಿನ ಪುನೀತ್ ಫೊಟೋ ಕಂಡು ಭಾವುಕರಾಗಿದ್ದಾರೆ. ಆ ಬಳಿಕ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಜೊತೆ ಕೆಲ ಹೊತ್ತು ಮಾತುಕತೆ ನಡೆಸಿ ಧೈರ್ಯ ತುಂಬಿದ್ದಾರೆ.